ಪ್ರಕೃತಿ ವಿಕೋಪ ನಿಧಿಯಡಿರೂ.39.54 ಲಕ್ಷ ಪರಿಹಾರ ವಿತರಣೆ
Team Udayavani, Sep 3, 2018, 5:04 PM IST
ಹೊಸನಗರ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಪ್ರಕೃತಿ ವಿಕೋಪದ ನಿಧಿಯಲ್ಲಿ ಸುಮಾರು ರೂ.39.54
ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಪಂ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ನಿಧಿಯಲ್ಲಿ ಫಲಾನುಭವಿಗಳಿಗೆ ಪರಿಹಾರ ಧನದ ಚೆಕ್ ವಿತರಿಸಿ
ಅವರು ಮಾತನಾಡಿದರು. ನಗರ ಹೋಬಳಿಯಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, 44 ಮನೆಗಳು, 180 ಎಕರೆ ಕೃಷಿ ಜಮೀನು, 161 ಎಕರೆ ಅಡಕೆ ತೋಟ ಹಾನಿ. 4 ಪ್ರಾಣಿ ನಾಶ ಸೇರಿದಂತೆ ಒಟ್ಟು ರೂ.22.24 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.
ಹುಂಚಾ ಹೋಬಳಿಯಲ್ಲಿ 7 ಮನೆ, 28 ಎಕರೆ ಕೃಷಿ ಜಮೀನು, 2 ಎಕರೆ ಅಡಕೆ ತೋಟ, 4 ಪ್ರಾಣಿನಾಶ ಎಲ್ಲಾ
ಸೇರಿ ಒಟ್ಟು ರೂ.2.17 ಲಕ್ಷ ನೀಡಲಾಗಿದೆ ಎಂದರು. ಶಾಸಕ ಹರತಾಳು ಹಾಲಪ್ಪ ಮಾಹಿತಿ ನೀಡಿ, ಕಸಬಾ
ಹೋಬಳಿಯಲ್ಲಿ ಕಾಲು ಸಂಕ ದಾಟುವಾಗ ಕಾಲು ಜಾರಿ ಆಕಸ್ಮಿಕ ಮರಣ ಹೊಂದಿದ ಎರಡು ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ಸೇರಿದಂತೆ ಒಟ್ಟು 10.69 ಲಕ್ಷ ನೆರೆ ಹಾನಿ ಸಂತ್ರಸ್ತರಿಗೆ ಪರಿಹಾರ ವಿತರಸಲಾಗಿದೆ ಎಂದು
ತಿಳಿಸಿದರು. ಕೆರೆಹಳ್ಳಿ ಹೋಬಳಿಯಲ್ಲಿ 20ಮನೆ ಹಾನಿ, ಒಂದು ಪ್ರಾಣಿ ಹಾನಿ ಸೇರಿದಂತೆ ಸುಮಾರು ರೂ.5.1 ಲಕ್ಷ
ಪರಿಹಾರ ನೀಡಲಾಗಿದೆ ಎಂದರು.
ನೆರೆ ಹಾನಿ ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ಎಲ್ಲಾ ಇಲಾಖೆಗಳ ಸಹಕಾರದಿಂದ ಮಾಡಿ. ಲೋಪವಾದರೆ
ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದರು. ಜಿಪಂ ಸದಸ್ಯರಾದ ಸುರೇಶ ಸ್ವಾಮಿರಾವ್, ಶ್ವೇತಾ ಬಂಡಿ, ತಾಪಂ ಅಧ್ಯಕ್ಷ ವಾಸಪ್ಪ ಗೌಡ, ಉಪಾಧ್ಯಕ್ಷೆ ಸುಶೀಲಮ್ಮ, ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಕಾರ್ಯ ನಿರ್ವಾಹಕ ಅಧಿಕಾರಿ ರಾಮಚಂದ್ರ ಭಟ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
ನನ್ನ ಆರೋಪಗಳಿಗೆ ಬಿಎಸ್ವೈ ಪ್ರತಿಕ್ರಿಯೆ ನೀಡಲೇ ಬೇಕು: ಈಶ್ವರಪ್ಪ