ರಾಮಾಯಣದಲ್ಲಿ ನಾಟಕೀಯ ಅಂಶ ಕಡಿಮೆ; ವಿಜಯ ವಾಮನ್‌

ನಾಟಕ ಪ್ರಯೋಗದ ನಿರ್ಬಂಧತೆಯ ನಡುವೆ ಸಮನ್ವಯತೆ ತರುವ ಪ್ರಯತ್ನ ಮಾಡಿದ್ದೇನೆ

Team Udayavani, Nov 28, 2022, 6:39 PM IST

ರಾಮಾಯಣದಲ್ಲಿ ನಾಟಕೀಯ ಅಂಶ ಕಡಿಮೆ; ವಿಜಯ ವಾಮನ್‌

ಸಾಗರ: ಬದಲಾವಣೆ ಬಯಸುವ ಪ್ರಯತ್ನದೆಡೆಗಿನ ತುಡಿತವನ್ನು ಸಮರ್ಥವಾಗಿ ಬಿಂಬಿಸುವ ಕೃತಿ “ಗ್ಲಾನಿ’ ಎಂದು ರಂಗ ನಿರ್ದೇಶಕ ವಿಜಯ ವಾಮನ್‌ ಹೇಳಿದರು.

ನಗರದ ಪರಸ್ಪರ ಸಾಹಿತ್ಯ ವೇದಿಕೆಯಿಂದ ಲೇಖಕ ಜಿ.ಎಸ್‌.ಭಟ್‌ ಅವರ “ಗ್ಲಾನಿ’ ರಂಗ ಕೃತಿ ಕುರಿತು ಲೇಖಕರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾಭಾರತಕ್ಕೆ ಹೋಲಿಸಿದರೆ ರಾಮಾಯಣದಲ್ಲಿ ನಾಟಕೀಯ ಅಂಶಗಳು ಕಡಿಮೆ. ಅಂತಹ ಅಂಶಗಳನ್ನೇ ಆಯ್ಕೆ ಮಾಡಿಕೊಂಡು ಯಕ್ಷಗಾನದ ಜೊತೆಗೆ ರಂಗವಸ್ತುವನ್ನು ಮೇಳೈಸಿರುವುದು ಗ್ಲಾನಿ ಕೃತಿಯ ವಿಶೇಷವಾಗಿದೆ.

ಕೃತಿಯಲ್ಲಿ ಬಳಕೆಯಾಗಿರುವ “ರಾಜಧರ್ಮ’ ಪದದ ಹಿಂದೆ ಸಮಕಾಲೀನ ರಾಜಕೀಯವನ್ನು ವಿಶ್ಲೇಷಿಸುವ ಆಯಾಮವಿದೆ ಎಂದು ಅಭಿಪ್ರಾಯಪಟ್ಟರು. ಸ್ಥಿರತೆಗಿಂತ ಎಲ್ಲವೂ ಚಲನಶೀಲವಾಗಿರಬೇಕು ಎಂಬ ಆಶಯದ ಧ್ವನಿಯ ಮೂಲಕ ಗ್ಲಾನಿ ರಂಗ ಕೃತಿಯು ವಿಶೇಷ ಅನುಭವ ನೀಡುತ್ತದೆ.

ಮೇಲ್ನೋಟಕ್ಕೆ ಇದರ ವಸ್ತು ಸರಳವಾಗಿ ಕಂಡರೂ ಸಂಕೀರ್ಣ ಸಂಗತಿಗಳನ್ನು ಅದು ಒಳಗೊಂಡಿದೆ. ಹಲವು ಕಥನಗಳನ್ನು ಕಟ್ಟುವ ಮೂಲಕ ರಂಗದ ಮೇಲೆ ತರುವ ಸಾಧ್ಯತೆಯನ್ನು ಕೃತಿಯು ಒಳಗೊಂಡಿದೆ ಎಂದು ಬರಹಗಾರ ದೇವೇಂದ್ರ ಬೆಳೆಯೂರು ಹೇಳಿದರು.

ರಾಮನ ಸದ್ಗುಣಗಳ ಜೊತೆಗೆ ಅವಗುಣಗಳನ್ನು ಕೂಡ ವಿಶ್ಲೇಷಣೆ ಮಾಡಿರುವುದು ಕೃತಿಯ ವಿಶೇಷತೆಯಾಗಿದೆ. ವ್ಯಕ್ತಿಯನ್ನು ದೇವರನ್ನಾಗಿ ಮಾಡುವ ಪ್ರಕ್ರಿಯೆ ಸ್ವತಃ ರಾಮನಿಗೂ ಇಷ್ಟವಿರಲಿಲ್ಲ ಎಂಬ ಧ್ವನಿಯನ್ನು ಕೃತಿಯಲ್ಲಿ ವ್ಯಕ್ತಪಡಿಸುವ ಮೂಲಕ ಈ ಬಗೆಯ ರಾಜಕಾರಣದಲ್ಲಿ ತೊಡಗಿರುವ ಬಲಪಂಥದ ಮಾದರಿ ಕೊನೆಯಾಗಬೇಕು ಎಂಬ ಆಶಯ ಲೇಖಕರಲ್ಲಿ ಇರುವಂತೆ ಕಾಣುತ್ತದೆ ಎಂದು ಉಪನ್ಯಾಸಕಿ ಎಂ.ಎಸ್‌. ಸರೋಜ ಅಭಿಪ್ರಾಯಪಟ್ಟರು.

ಲೇಖಕ ಜಿ.ಎಸ್‌. ಭಟ್‌, ದೃಶ್ಯದ ನಿರಂತರತೆಯನ್ನು ಕಾಪಾಡಿಕೊಳ್ಳುವ ಸಲುವಾಗಿಯೇ ಕೃತಿ ಲಕ್ಷ್ಮಣ ಹಾಗೂ ಸ್ತ್ರೀ ಪಾತ್ರಗಳನ್ನು ಒಳಗೊಂಡಿಲ್ಲ. ಇದಕ್ಕೊಂದು ಸಾಂಕೇತಿಕ ಅರ್ಥವಿದೆ. ಯಕ್ಷಗಾನದ ಚಲನಶೀಲತೆ ಮತ್ತು ನಾಟಕ ಪ್ರಯೋಗದ ನಿರ್ಬಂಧತೆಯ ನಡುವೆ ಸಮನ್ವಯತೆ ತರುವ ಪ್ರಯತ್ನ ಮಾಡಿದ್ದೇನೆ ಎಂದು ವಿವರಿಸಿದರು.

ಪರಸ್ಪರ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ| ಸಫ್ರಾಜ್‌ ಚಂದ್ರಗುತ್ತಿ, ಎಸ್‌.ಎಂ.ಗಣಪತಿ ಇದ್ದರು. ಸಿ.ಟಿ. ಬ್ರಹ್ಮಾಚಾರ್‌, ಡಾ| ಟಿ.ಎಸ್‌.ರಾಘವೇಂದ್ರ, ರಾಧಾಕೃಷ್ಣ ಬಂದಗದ್ದೆ, ಮೃತ್ಯುಂಜಯ, ಎಲ್‌.ಎಂ. ಹೆಗಡೆ, ಕೆ.ಜಿ. ರಾಮರಾವ್‌, ಡಾ| ದೇವೇಂದ್ರ ಕೆ.ಎಸ್‌., ಎಂ.ಎಸ್‌. ಕೃಷ್ಣಯ್ಯ ಮಾತನಾಡಿದರು.

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.