ನಾಲೆ ನೀರು ಹರಿಯಲು ಕೈ ಹಿಡಿದ ನರೇಗಾ!
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಹೊಸ ಆಲೋಚನೆ ಫಲ! ಅಚ್ಚುಕಟ್ಟು ಪ್ರದೇಶದ ರೈತರು ಖುಷ್
Team Udayavani, Mar 22, 2021, 9:28 PM IST
ಶಿವಮೊಗ್ಗ: ಕೋವಿಡ್ ಸಂಕಷ್ಟದ ದಿನಗಳಲ್ಲಿ ಜನಸಾಮಾನ್ಯರು ಹೊಸ ಐಡಿಯಾಗಳೊಂದಿಗೆ ಬದುಕು ಕಟ್ಟಿಕೊಂಡರು. ಕೆಲವರು ಅದರಲ್ಲಿ ಯಶಸ್ವಿಯೂ ಆದರು. ಇಂತಹದ್ದೇ ಒಂದು ಪ್ರಯತ್ನದಲ್ಲಿ ಯಶ ಕಂಡ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಈಗ ರಾಜ್ಯಕ್ಕೆ ಮಾದರಿಯಾಗಿದೆ.
ಉದ್ಯೋಗ ಖಾತ್ರಿ ಸದ್ಬಳಕೆಗೆ ಪ್ರಾಧಿಕಾರ ಕೈಗೊಂಡ ನಿರ್ಧಾರದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳು ನಳನಳಿಸುತ್ತಿವೆ. ಬೇಸಿಗೆ ಬೆಳೆ ಅವ ಧಿಯಲ್ಲೂ ಯಾವುದೇ ಗಲಾಟೆ ಗದ್ದಲಗಳಿಲ್ಲದೆ ನಾಲೆಯ ಕೊನೆ ಭಾಗಕ್ಕೂ ನೀರು ಹರಿಯುತ್ತಿದೆ. ರೈತರು, ಕೂಲಿಕಾರರ ಸಂಜೀವಿನಿಯಾಗಿರುವ “ನರೇಗಾ’ ಈಗ ಅಚ್ಚುಕಟ್ಟು ಪ್ರದೇಶದ ರೈತರ ಕೈ ಹಿಡಿದಿದೆ.
ಕಾಲುವೆ ಹೂಳಿನಿಂದ ಗೋಳು:
ಭದ್ರಾ ಅಣೆಕಟ್ಟು ವ್ಯಾಪ್ತಿಯ ನಾಲೆಗಳು ಕಾಂಕ್ರೀಟೀಕರಣಗೊಂಡು ದಶಕಗಳೇ ಕಳೆದಿವೆ. ಹತ್ತು ವರ್ಷಗಳ ಹಿಂದಷ್ಟೇ ಕೆ.ಎಸ್. ಈಶ್ವರಪ್ಪ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ 1200 ಕೋಟಿ ರೂ. ವಿನಿಯೋಗಿಸಿ ಎರಡೂ ನಾಲೆಗಳು ಮತ್ತು ಉಪ ನಾಲೆಗಳನ್ನು ಸಂಪೂರ್ಣ ಆಧುನೀಕರಣಗೊಳಿಸಿದರೂ ಹೂಳಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಅಚ್ಚುಕಟ್ಟು ಪ್ರದೇಶದ ಹೊಲಗಳಲ್ಲಿನ ಮಳೆ ನೀರು ನುಗ್ಗಿ ಕಾಲುವೆಗಳಲ್ಲಿ ಹೂಳು ತುಂಬಿ ತುಳುಕುತ್ತಿತ್ತು. ಉಪ ಕಾಲುವೆಗಳ ಪಾಡು ಇದಕ್ಕಿಂತ ಕಡೆಯಾಗಿತ್ತು. ಪ್ರತಿ ವರ್ಷ ಮಳೆಗಾಲದಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಬೇಸಿಗೆ ಬೆಳೆಗೆ ನೀರು ಬಳಕೆ ಹೆಚ್ಚಾಗುವ ಕಾರಣ ಕೊನೆ ಭಾಗಕ್ಕೆ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಇದರಿಂದ ಮೇಲಿನ ಭಾಗದ ರೈತರು, ಕೆಳಭಾಗದ ರೈತರ ನಡುವೆ ಜಗಳ ಸಾಮಾನ್ಯವಾಗಿರುತ್ತಿತ್ತು. ಕಾಲುವೆ ಹೂಳು ತೆಗೆಸುವಂತೆ ರೈತರಿಂದ ತೀವ್ರ ಒತ್ತಡ ಇತ್ತು.
ಮಳೆಗಾಲದ ಬೆಳೆ ನಂತರ ನೀರು ಸ್ಥಗಿತಗೊಳಿಸುವ ಅವ ಧಿಯಲ್ಲಿ ಹೂಳು ತೆಗೆಯುವುದು ವಾಡಿಕೆ. ಕೊರೊನಾ ಸಂಕಷ್ಟದಿಂದ ರಾಜ್ಯ ಸರ್ಕಾರದಿಂದ ಅನುದಾನ ಬರುವುದು ತಡವಾಗಿತ್ತು. ಆಗ ಹೊಳೆದಿದ್ದೆ “ನರೇಗಾ’.
ನರೇಗಾದಡಿ ಕಾಲುವೆಗಳು ಲಕ..ಲಕ..:
ನಾಲೆಗಳಲ್ಲಿ ನ.20 ರಿಂದ ಡಿ.31ರವರೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಹೂಳು ತೆಗೆಸಲು 425 ಕೋಟಿ ರೂ. ಅನುದಾನಕ್ಕಾಗಿ ಪ್ರಾಧಿಕಾರದಿಂದ ಸಿಎಂ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ನಿಗದಿತ ಅವ ಧಿಯಲ್ಲಿ ಅನುದಾನ ದೊರಕಿರಲಿಲ್ಲ. ಆ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ನರೇಗಾ ಹಣ ಬಳಸಿಕೊಳ್ಳುವ ಆಲೋಚನೆ ಮಾಡಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಮನವೊಲಿಸಿ ಜಿಪಂ ಸಿಇಒ ಎಂ.ಎಲ್. ವೈಶಾಲಿ ಅವರನ್ನು ಸಂಪರ್ಕಿಸಿ ಉದ್ಯೋಗ ಖಾತ್ರಿ ಯೋಜನೆಯ ಉಪಯೋಗ ಪಡೆಯಲು ನಿರ್ಧರಿಸಿದರು.
ಎಲ್ಲರ ಸಹಕಾರದಿಂದ ಈಗ ಭದ್ರಾ ನಾಲೆಗಳ ಹೂಳು ಬಹುತೇಕ ಖಾಲಿಯಾಗಿದ್ದು ನೀರು ಅವ ಧಿಗೂ ಮುನ್ನವೇ ಕೊನೆ ಭಾಗಕ್ಕೆ ತಲುಪಿದೆ. ಬರೀ ಶಿವಮೊಗ್ಗದಲ್ಲಷ್ಟೇ ಅಲ್ಲದೇ ದಾವಣಗೆರೆ ಭಾಗದ ರೈತರು ಅವ ಧಿಗೆ ಮುನ್ನವೇ ನೀರು ಕಂಡು ಹರ್ಷಚಕಿತರಾಗಿ ಮೆಕ್ಕೆಜೋಳದ ಬದಲು ಈ ಬಾರಿ ಭತ್ತ ಬೆಳೆದಿದ್ದಾರೆ.
ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ