ಮತದಾನದಲ್ಲೂ ಪರಿಸರ ಪ್ರೇಮ!
Team Udayavani, May 14, 2018, 5:28 PM IST
ಶಿವಮೊಗ್ಗ: ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಯುವಕ-
ಯುವತಿಯರಲ್ಲಿ ಸಾಕಷ್ಟು ಸಂಭ್ರಮ ಮನೆ ಮಾಡಿತ್ತು. ಬಹುತೇಕರು ಮತದಾನ ಮಾಡಿದ ಬಳಿಕ ಉಗುರಿಗೆ
ಹಾಕಿದ ಶಾಹಿಯ ಗುರುತನ್ನು ಮೊಬೈಲ್ನಲ್ಲಿ “ಸೆಲ್ಫಿ’ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಮೊದಲ ಮತದಾನದ ಖುಷಿಯನ್ನು ಹಂಚಿಕೊಂಡರು.
ಮತ್ತೆ ಕೆಲವರು ಪ್ರಥಮ ಮತದಾನದ ಅನುಭವವನ್ನು ಸಮಾಜಮುಖೀ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ
ಮೂಲಕ ಸದಾ ನೆನಪಿನಲ್ಲುಳಿಯುವ ಮಾದರಿ ಕೆಲಸ ಮಾಡಿದ್ದಾರೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ಶಿವಮೊಗ್ಗ
ನಗರದ ಪಾರ್ಕ್ ಬಡಾವಣೆ ನಿವಾಸಿ ಹಾಗೂ ಬಿಕಾಂ ವಿದ್ಯಾರ್ಥಿನಿ ವೈಭವಿ ತನ್ನ ಮೊದಲ ಮತದಾನದ ನೆನಪಿಗಾಗಿ
ವ್ಯಕ್ತಪಡಿಸಿದ ಪರಿಸರ ಕಾಳಜಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಮೊದಲ ಮತದಾನದ ಸಂಭ್ರಮವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ವೈಭವಿ ಸೋಮಿನಕೊಪ್ಪದ
ಕೆಎಚ್ಬಿ ಕಾಲೋನಿಯಲ್ಲಿ ಹೊಂಗೆ ಗಿಡ ನೆಟ್ಟಿದ್ದಾರೆ. ತಾವು ನೆಟ್ಟ ಗಿಡದ ಪಕ್ಕ ಕುಳಿತುಕೊಂಡು, ಕಪ್ಪು ಶಾಹಿ ಹಾಕಿದ
ಬೆರಳನ್ನು ತೋರ್ಪಡಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಮತದಾನ ಮಾಡುತ್ತಿರುವ
ಕಾರಣ ಸಾಕಷ್ಟು ಎಗ್ಸೆ„ಟ್ ಆಗಿದ್ದೆ. ಜೊತೆಗೆ ಕುತೂಹಲವಿತ್ತು.
ಮತದಾನ ಮಾಡಿದ ನಂತರ ಖುಷಿಯಾಯ್ತು. ಈ ಖುಷಿಯನ್ನು ಒಳ್ಳೆಯ ಕೆಲಸ ಮಾಡುವ ಮೂಲಕ ನೆನಪಿಟ್ಟುಕೊಳ್ಳುವ ಕೆಲಸ ಮಾಡುವಂತೆ ತಂದೆ ಸಲಹೆ ನೀಡಿದರು. ಅದರಂತೆ ತಂದೆಯ ಜೊತೆ ತೆರಳಿ ಹೊಂಗೆ
ಗಿಡಗಳನ್ನು ಖರೀದಿಸಿ ನೆಟ್ಟಿದ್ದೇನೆ. ಆ ಗಿಡಗಳನ್ನು ದೊಡ್ಡದಾಗಿ ಮಾಡುವವರಿಗೂ ಪೋಷಣೆ ಮಾಡುತ್ತೇನೆ. ತಂದೆ ನೀಡಿದ ಸಲಹೆಯಿಂದ ತಮ್ಮಲ್ಲಿ ಪರಿಸರ ಪ್ರಜ್ಞೆ ಜಾಗೃತವಾಗುವಂತೆ ಮಾಡಿತು. ಜೊತೆಗೆ ಮತದಾನದ ಮಹತ್ವದ ಬಗ್ಗೆಯೂ ಅರಿವು ಉಂಟು ಮಾಡಿತು ಎಂದು ವೈಭವಿ ತಿಳಿಸಿದ್ದಾರೆ.
ಪ್ರಪ್ರಥಮ ಬಾರಿಗೆ ಮತದಾನ ಮಾಡುವ ಯುವಕ- ಯುವತಿಯರು ಮೊದಲ ಮತದಾನದ ಸವಿನೆನಪಿಗಾಗಿ
ಪ್ರಕೃತಿ ಸಂರಕ್ಷಣೆಯ ಕಾರ್ಯ ಮಾಡಬೇಕೆಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಓದಿದ್ದೆ.
ಈ ವಿಷಯವನ್ನು ತಮ್ಮ ಪುತ್ರಿಗೆ ತಿಳಿಸಿದ್ದೆ. ಅದರಂತೆ ಆಕೆ ಗಿಡಗಳನ್ನು ನೆಡುವುದರ ಜೊತೆಗೆ, ಪೋಷಣೆಯ ಜವಾಬ್ದಾರಿ ಹೊತ್ತಿಕೊಂಡಿದ್ದಾಳೆ. ಇದು ತಮ್ಮಲ್ಲಿ ಸಂತಸ ಉಂಟು ಮಾಡಿದೆ ಎಂದು ವೈಭವಿ ಅವರ ತಂದೆ ಕುಶಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ
MUST WATCH
ಹೊಸ ಸೇರ್ಪಡೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ