ನುಚ್ಚು ನೂರಾದ ರೈತ ಕುಟುಂಬಗಳ ಬದುಕು


Team Udayavani, Aug 13, 2019, 3:17 PM IST

——-1

ತೀರ್ಥಹಳ್ಳಿ: ಭೂಕುಸಿತ ಉಂಟಾದ ಹೆಗಲತ್ತಿ ಗ್ರಾಮದ ಜಮೀನಿನ ನೋಟ.

ತೀರ್ಥಹಳ್ಳಿ: ಮಳೆ ನಿಂತರೂ ಆ ಗ್ರಾಮದ ನೊಂದ ರೈತರ ನೋವಿನ ಹನಿ ಇನ್ನೂ ನಿಂತಿಲ್ಲ… ಆ ಊರಿನ ಚಿತ್ರಣ ನೋಡಿದರೆ ಎಂತವರ ಮನವೂ ಕಲಕುತ್ತದೆ. ಭಾರೀ ಮಳೆಗೆ ಭೂ ಕುಸಿತದಿಂದ ಉಂಟಾದ ಅನಾಹುತಕ್ಕೆ ಗದ್ದೆ-ತೋಟಗಳು ನುಚ್ಚುನೂರಾದ ಹೆಗಲತ್ತಿ ಗ್ರಾಮದ ರೈತರ ಪಾಡು ನಿಜಕ್ಕೂ ಪ್ರಕೃತಿಯ ಮುನಿಸು ಹೀಗೇಕೆ ಎಂಬ ಪ್ರಶ್ನೆ ಮೂಡುತ್ತದೆ.

ಮಂಡಗದ್ದೆ ಹೋಬಳಿಯಲ್ಲಿ ಬರುವ ಶಿಂಗನಬಿದರೆ ಗ್ರಾಪಂ ವ್ಯಾಪ್ತಿಯ ಹೆಗಲತ್ತಿ ಗ್ರಾಮ ಮಂಡಗದ್ದೆಯಿಂದ 15 ಕಿಮೀ ದೂರದಲ್ಲಿದೆ. ಬಡ ಕುಟುಂಬಗಳು ಹೊಂದಿರುವ ಅಲ್ಪಸ್ವಲ್ಪ ಕೃಷಿ ಜಮೀನು ಕೂಡ ಜವರಾಯನ ಅಟ್ಟಹಾಸಕ್ಕೆ ಸಿಲುಕಿದೆ.

25 ಬಡಕುಟುಂಬಗಳು ವಾಸಿಸುವ ಅಂದಾಜು 50 ಎಕರೆ ಪ್ರದೇಶದಲ್ಲಿನ ಅಡಕೆ ತೋಟ ಹಾಗೂ ಗದ್ದೆಗಳು ಭೂಕುಸಿತದ ಆರ್ಭಟಕ್ಕೆ ಸರ್ವನಾಶವಾಗಿದೆ. ಈ ಭಾಗದ ಬಡ ರೈತರು ಹಲವು ವರ್ಷಗಳಿಂದ ಬೆವರು ಸುರಿಸಿ ಕನಸು ಕಟ್ಟಿ ಬೆಳೆಸಿದ ಕೃಷಿ ಜಮೀನು ಏಕಾಏಕಿ ಮಳೆಯ ಆರ್ಭಟಕ್ಕೆ ಕೊಚ್ಚಿ ಹೋಗಿರುವುದು ಅಲ್ಲಿನ ರೈತರಿಗೆ ಜೀವಮಾನದಲ್ಲಿ ಮರೆಯಲಾಗದ ಘಟನೆಯಾಗಿದೆ.

ಹೆಗಲತ್ತಿ ಪ್ರದೇಶದ ಮಲೆಮಹಾದೇಶ್ವರ ಪಕ್ಕದ ಗುಡ್ಡ ಶನಿವಾರ ಮಧ್ಯರಾತ್ರಿ ಭೋರ್ಗರೆದು ಸುರಿದ ಮಳೆಗೆ ಭೂಕುಸಿತವುಂಟಾದಾಗ ಆ ರೈತ ಕುಟುಂಬದವರು ನಿದ್ದೆಯಲ್ಲಿದ್ದರು. ಆದರೆ ಮರುದಿನ ಆ ಕುಟುಂಬಗಳಿಗೆ ಈ ದೃಶ್ಯ ನೋಡಿ ಬರಸಿಡಿಲು ಬಡಿದಂತಾಗಿದೆ. ಕಳೆದ 2 ದಿನಗಳಿಂದ ಆ ಭಾಗಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಸಾಂತ್ವನ, ಭರವಸೆಗಳನ್ನು ನೀಡುತ್ತಿದ್ದರೂ ಕೊಚ್ಚಿ ಹೋದ ಕೃಷಿ ಜಮೀನು ಮತ್ತೆ ಬರುವುದಿಲ್ಲವೆಂಬ ಅಳಲನ್ನು ಜನರ ಮುಂದೆ ತೋಡಿಕೊಳ್ಳುತ್ತಿದ್ದಾರೆ.

ಸರ್ಕಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಅಲ್ಲಿಯ ಅನಾಹುತದ ಬಗ್ಗೆ ಆ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬಹುದು. ಆದರೆ ನಾಳಿನ ಬದುಕಿನ ಕನಸುಕಟ್ಟಿ ಬೆಳೆಸಿದ ಅಡಕೆ ತೋಟ ಹಾಗೂ ಗದ್ದೆಗಳು ಸರ್ವನಾಶವಾಗಿರುವುದು ಮತ್ತೆ ಸಿಗುವುದೇ ಎಂಬ ದುಖಃದ ಮಡುವಿನಲ್ಲಿ ಆ ರೈತ ಕುಟುಂಬಗಳು ಕಣ್ಣೀರಾಗಿದ್ದಾರೆ.

 

•ರಾಂಕೊ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.