ಉತ್ಸವ ಆಚರಣೆ ಅಕ್ಷಮ್ಯ ಅಪರಾಧ: ಈಶ್ವರಪ್ಪ
Team Udayavani, Feb 16, 2018, 6:35 AM IST
ಶಿವಮೊಗ್ಗ: ಹಿಂದೂಗಳ ಮಾರಣ ಹೋಮ ನಡೆಸಿ ವಿಜಯನಗರ ಸಾಮ್ರಾಜ್ಯ ಧ್ವಂಸ ಮಾಡಿದ ಬಹಮನಿ ಸುಲ್ತಾನನ ಉತ್ಸವ ಆಯೋಜಿಸುವುದರ ಜತೆಗೆ ಪಾಕಿಸ್ತಾನದ ನಾಯಕ ಶಾಹಿದ್ ಅಬ್ಟಾಸಿ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹಮನಿ ಸುಲ್ತಾನನ ಜಯಂತಿಯನ್ನು ಆಚರಣೆ ಮಾಡಲು ಹೊರಟಿರುವುದು ಅಕ್ಷಮ್ಯ ಅಪರಾಧ. ಯಾವುದೇ ಕಾರಣಕ್ಕೂ ಆಚರಣೆ ಮಾಡಬಾರದು. ಹಿಂದೂಗಳ ಕಗ್ಗೊಲೆ ನಡೆಸಿದ ಬಹಮನಿ ಸುಲ್ತಾನನ ಉತ್ಸವವನ್ನು ಆಯೋಜಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಹಮ್ಮದ್ ಬಿನ್ ತುಘಲಕ್ಗಿಂತ ಕೀಳುಮಟ್ಟದ ಆಡಳಿತ ನೀಡುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ಮಾರ್ಚ್ 6 ರಂದು ಉತ್ಸವ ಆಚರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್ ಹೇಳಿಕೆ ನೀಡಿದರೆ, ಬಹಮನಿ ಉತ್ಸವ ಆಚರಣೆ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ ನೀಡುತ್ತಾರೆ. ಸರ್ಕಾರದ ಗಮನಕ್ಕೆ ತಾರದೆ ಉತ್ಸವ ಮಾಡುವುದಕ್ಕೆ ಹೊರಟಿರುವ ಸಚಿವ ಶರಣ ಪ್ರಕಾಶ್ರನ್ನು ಮಂತ್ರಿಮಂಡಲದಿಂದ ಕಿತ್ತು ಹಾಕುತ್ತೇನೆ ಎಂಬ ದಿಟ್ಟ ಹೆಜ್ಜೆಯನ್ನು ಮುಖ್ಯಮಂತ್ರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಿದೆ. ಇದೀಗ ಬಹಮನಿ ಸುಲ್ತಾನರ ಉತ್ಸವ ಆಚರಣೆಗೂ ಮುಂದಾಗಿದೆ. ಅಷ್ಟೇ ಏಕೆ, ಪಾಕ್ ನಾಯಕ ಶಾಹಿದ್ ಅಬ್ಟಾಸಿ ಜಯಂತಿಯನ್ನು ರಾಜ್ಯ ಸರ್ಕಾರದಿಂದಲೇ ಆಚರಣೆ ಮಾಡಲಿ. ರಾಮ ಮಂದಿರ ಒಡೆದು ಹಾಕಿದ ಬಾಬರ್ ಜಯಂತಿಯನ್ನೂ ಆಚರಣೆ ಮಾಡಲಿ. ಗೋರಿಗಳಲ್ಲಿ ಮಲಗಿರುವ ದೇಶ ವಿರೋಧಿಗಳನ್ನು ಮೇಲಕ್ಕೆ ಕರೆ ತಂದು ಜಯಂತಿ ಆಚರಿಸಲಿ. ಹಿಂದೂಗಳನ್ನು ಗೋರಿಯೊಳಕ್ಕೆ ಕೂರಿಸಲಿ ಎಂದು ಕಿಡಿ ಕಾರಿದರು.
ಹಿಂದೂಗಳ ಹತ್ಯೆ ನಡೆಸಿದ ಕ್ರೂರ ವ್ಯಕ್ತಿಯ ಉತ್ಸವ ಮಾಡುತ್ತೇನೆ ಎಂಬ ಸಚಿವರ ಹೇಳಿಕೆ ಕೇವಲ ಹಿಂದೂಗಳಿಗಷ್ಟೆ ಅಲ್ಲ. ರಾಷ್ಟ್ರಪ್ರೇಮಿಗಳಿಗೆ ಮಾಡಿದ ಅಪಮಾನವಾಗಿದೆ. ಸಚಿವರು ಕೂಡಲೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?