ಹಾಲಪ್ಪ ವಿರುದ್ಧ ಕುತಂತ್ರ ನಡೆಸಿಲ್ಲ: ಬೇಳೂರು
Team Udayavani, Apr 1, 2018, 6:55 AM IST
ಶಿವಮೊಗ್ಗ: ಹರತಾಳು ಹಾಲಪ್ಪರ ವಿರುದ್ಧ ಯಾವುದೇ ಕುತಂತ್ರ ನಡೆಸಿಲ್ಲ. ಸಿಗಂದೂರು ಚೌಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಿ ಹೇಳಲೂ ಸಿದ್ಧ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶನಿವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲಪ್ಪರಿಗೆ ಆಹ್ವಾನ ನೀಡುತ್ತೇನೆ, ಅವರು ಸಿಗಂದೂರು ದೇವಸ್ಥಾನಕ್ಕೆ ಬರಲಿ. ಇಬ್ಬರೂ ಆಣೆ ಮಾಡೋಣ. ನನ್ನ ತಪ್ಪಿದ್ದರೆ ಆ ತಾಯಿ ನನಗೆ ಶಿಕ್ಷೆ ಕೊಡಲಿ. ಅವರು ಯಾವ ದೇವರ ಮೇಲೆ ಪ್ರಮಾಣ ಮಾಡುತ್ತಾರೆ ಹೇಳಲಿ, ನಾನೂ ಸಿದ್ಧನಿದ್ದೇನೆ ಎಂದರು.
ಕಾಗೋಡು ತಿಮ್ಮಪ್ಪ ತಮ್ಮ ಸೋದರ ಮಾವ ನಿಜ. ಆದರೆ ರಾಜಕೀಯಕ್ಕೆ ಬಂದರೆ ನಾವಿಬ್ಬರೂ ಬದ್ಧ ವೈರಿಗಳೇ. ಸಾಗರ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧೆಗೆ ಕಾಗೋಡು ತಿಮ್ಮಪ್ಪ ಬೇಕು. ಈ ಬಾರಿ ಅವರನ್ನು ಸೋಲಿಸಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್