ಮರದ ಬೇರಿನಲ್ಲಿ ಸಿಲುಕಿದ ಕಾಡುಕೋಣ ಮರಿ-ಗಾಯ
Team Udayavani, May 27, 2020, 4:02 PM IST
ಹೊಸನಗರ: ಬಾಳಮನೆಯಲ್ಲಿ ಮರದ ಬೇರಿನಲ್ಲಿ ಕಾಲುಗಳು ಸಿಲುಕಿ ಗಾಯಗೊಂಡಿದ್ದ ಕಾಡುಕೋಣ ಮರಿಗೆ ವೈದ್ಯರು ಚಿಕಿತ್ಸೆ ನೀಡಿದರು
ಹೊಸನಗರ: ಧರೆಯಿಂದ ಇಳಿಯುವಾಗ ಮರದ ಬೇರಿನಲ್ಲಿ ಕಾಲುಗಳು ಸಿಲುಕಿಕೊಂಡ ಪರಿಣಾಮ ಕಾಡುಕೋಣ ಮರಿಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಗರ ವಲಯ ಅರಣ್ಯ ವ್ಯಾಪ್ತಿಯ ಬಾಳಮನೆಯಲ್ಲಿ ಮಂಗಳವಾರ ನಡೆದಿದೆ.
ಅಂಡಗದೂರು ಗ್ರಾಪಂ ವ್ಯಾಪ್ತಿಯ ಬಾಳಮನೆಯ ಮರವೊಂದರ ಬಳಿ ಕಾಡುಕೋಣ ಮರಿಯೊಂದು ಸಿಲುಕಿ ಕೊಂಡು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಡಿಆರ್ ಎಫ್ಒ ಯೋಗರಾಜ್, ಸಿಬ್ಬಂದಿ ರಾಮು ಸ್ಥಳಕ್ಕೆ ತೆರಳಿ ಕಾಡುಕೋಣ ಮರಿಯನ್ನು ಅರಣ್ಯ ಇಲಾಖೆ ಜೀಪ್ನಲ್ಲಿ ಪಶು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಗರ ಪಶು ಆಸ್ಪತ್ರೆಯ ಡಾ| ಮಹಮದ್ ಖಲೀಲ್, ಮರದ ಬೇರಿನಲ್ಲಿ ಕಾಲುಗಳು ಸಿಲುಕಿದ್ದರಿಂದ ಹಿಂಭಾಗದ ಕಾಲುಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡಿವೆ. ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ನೋಡಿ ಮುಂದಿನ ಚಿಕಿತ್ಸೆ ನೀಡಬೇಕೆಂದರು. ಅರಣ್ಯಾಧಿಕಾರಿ ಎಂ.ಪಿ.ಆದರ್ಶ ಮಾತನಾಡಿ, ಈಗಾಗಲೇ ಕಾಡುಕೋಣ ಮರಿಗೆ ಅರಣ್ಯ ಇಲಾಖೆಯ ಕ್ವಾರ್ಟರ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರೊಂದಿಗೆ ಮಾತನಾಡಿ ಅಗತ್ಯವಿದ್ದರೆ ತಾವರೆಕೊಪ್ಪಕ್ಕೆ ರವಾನಿಸಲಾಗುವುದೆಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ
Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್ವೈ