ಕ್ಷೌರಿಕರಿಂದ ಕೋವಿಡ್ ಜಾಗೃತಿಗಾಗಿ ಸ್ವಯಂ ದಿಗ್ಬಂಧನ !

ಮನೆಗಳಿಗೆ ಹೋಗಿ ಕಟಿಂಗ್‌ ಮಾಡಿದರೆ 2000 ರೂ. ದಂಡ

Team Udayavani, May 20, 2020, 5:18 PM IST

20-April-20

ಹೊಸನಗರ: ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಲೇ ಇದೆ. ಆದರೂ ಜನರು ಕ್ಯಾರೇ ಅನ್ನದ ಘಟನೆಗಳು ನಡೆಯುತ್ತಿವೆ. ಆದರೆ ಹೊಸನಗರ ತಾಲೂಕಿನಲ್ಲಿ ಕ್ಷೌರಿಕ ವೃತ್ತಿ ಬಾಂಧವರು ಮಾದರಿಯಾಗುವಂತಹ ಕೆಲಸ ಮಾಡಿ ಜನರ ಗಮನ ಸೆಳೆದಿದ್ದಾರೆ.

ಹೌದು, ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಷೌರಿಕರು ಅಂಗಡಿಗಳನ್ನು ತಾವೇ ಸೀಲ್‌ ಡೌನ್‌ ಮಾಡಿಕೊಂಡು ಮೇ 31ರವರೆಗೆ ಕಾರ್ಯ ನಿರ್ವಹಿಸದಂತೆ ತೀರ್ಮಾನ ಮಾಡಿದ್ದಾರೆ. ಮಾತ್ರವಲ್ಲ, ತಮ್ಮ ತಮ್ಮ ಅಂಗಡಿಗಳನ್ನು ತಾವೇ ಲಾಕ್‌ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಹಾಗಾಗಿ ಹೊಸನಗರ ತಾಲೂಕಿನ ಕಾರಗಡಿ, ಬಟ್ಟೆಮಲ್ಲಪ್ಪ, ಬಾಣಿಗ, ಜಯನಗರ, ವಾರಂಬಳ್ಳಿ, ನಾಗರಕೊಡಿಗೆ, ನಗರ, ನಿಟ್ಟೂರು, ಸಂಪೇಕಟ್ಟೆ, ಮಾಸ್ತಿಕಟ್ಟೆ ಸೇರಿದಂತೆ ಬಹುತೇಕ ಕಡೆ ಮೇ 31ವರೆಗೆ ಸೆಲೂನ್‌ಗಳು ಬಂದ್‌ ಆಗಲಿವೆ.

ಸರ್ಕಾರದಿಂದ ಅವಕಾಶ: ಜನರ ಅಗತ್ಯಗಳಲ್ಲೊಂದಾದ ಕ್ಷೌರಿಕ ಅಂಗಡಿಗಳನ್ನು ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ತೆರೆಯಲು ಸರ್ಕಾರವೇ ಅವಕಾಶ ನೀಡಿದೆ. ಆದರೆ ಇಲ್ಲಿಯ ಕ್ಷೌರಿಕರು ಯಾವುದೇ ಅಪಾಯಕ್ಕೆ ಅವಕಾಶ ನೀಡದೆ ತಮ್ಮ ಅಂಗಡಿಗಳನ್ನು ಮೇ 31ರವರೆಗೆ ಮುಚ್ಚುವ ಮೂಲಕ ಸರ್ಕಾರದ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

ಕಳ್ಳದಾರಿಯಲ್ಲಿ ಮಾಡಿದರೆ ರೂ.2000 ದಂಡ: ಅಂಗಡಿಗಳನ್ನು ಮುಚ್ಚುವ ಮುನ್ನ ಸಭೆ ನಡೆಸಿದ ಕ್ಷೌರಿಕ ಬಾಂಧವರು ತಮಗೆ ತಾವೇ ಹಲವು ನಿಬಂಧನೆಗಳನ್ನು ಹಾಕಿಕೊಂಡಿದ್ದಾರೆ. ನಗರ ಹೋಬಳಿಯ ಕ್ಷೌರಿಕ ಬಾಂಧವರು ಒಂದು ಹೆಜ್ಜೆ ಮುಂದೆ ಹೋಗಿ, ಒಂದು ವೇಳೆ ಅಂಗಡಿಗಳನ್ನು ಮುಚ್ಚಿ ಕಳ್ಳದಾರಿಯಲ್ಲಿ ಮನೆಗಳಿಗೆ ಹೋಗಿ ಕ್ಷೌರ ಮಾಡಿ ಬರುವುದು ಕಂಡು ಬಂದರೆ ಅಂತವರಿಗೆ ರೂ.2000 ದಂಡ ಹಾಕಿ ಆ ಹಣವನ್ನು ಕೊರೊನಾ ಜಾಗೃತಿಗೆ ಬಳಸಲು ತೀರ್ಮಾನಿಸಿದ್ದಾರೆ.

ಒಂದೇ ಕೊಠಡಿಯಲ್ಲಿ ಕ್ಷೌರ ಸಲಕರಣೆ ಸೀಲ್‌!: ನಗರ ಹೋಬಳಿಯಲ್ಲಿ ಸುಮಾರು 35 ಸೆಲೂನ್‌ ಗಳಿವೆ. ಅಷ್ಟೂ ಜನರು ಕ್ಷೌರ ವೃತ್ತಿಗೆ ಬಳಸುವ ಸಲಕರಣೆಯನ್ನು ತರಿಸಿಕೊಂಡು ಒಂದೇ ಸೆಲೂನಿನ ಒಳಗಿಟ್ಟು ಲಾಕ್‌ ಮಾಡಿದ್ದಾರೆ. ಮೇ 31ರವರೆಗೆ ಆ ಕೊಠಡಿಯನ್ನು ತೆರೆಯದಿರಲು ಕೂಡ ನಿರ್ಧರಿಸಲಾಗಿದೆ. ಈ ವೇಳೆ ನಗರ ಹೋಬಳಿ ಸವಿತಾ ಸಮಾಜದ ಅಧ್ಯಕ್ಷ ಚಂದ್ರಶೇಖರ್‌ ಭಂಡಾರಿ, ಕಾರ್ಯದರ್ಶಿ ನವೀನ್‌ ಭಂಡಾರಿ, ಅಶೋಕ್‌, ತಾಲೂಕು ಕಾರ್ಯದರ್ಶಿ ಎಂ. ರಾಘವೇಂದ್ರ, ಗೌರವಾಧ್ಯಕ್ಷ ವೆಂಕಟೇಶ ಭಂಡಾರಿ, ಪ್ರಮುಖರಾದ ದೇವರಾಜ್‌ ಭಂಡಾರಿ, ಕೆ. ರಾಘವೇಂದ್ರ, ರಾಜೇಶ್‌, ಕೀರ್ತಿ, ಕಿಶೋರ್‌, ಅರುಣ ಭಂಡಾರಿ ಇದ್ದರು.

ಆರೋಗ್ಯ ಕಿಟ್‌, ವಿಮೆ ಒದಗಿಸಿ: ಈ ನಡುವೆ ಮುಂದಿನ ದಿನದಲ್ಲಿ ಕೋವಿಡ್ ಜೊತೆಗೆ ಕೆಲಸ ಮಾಡುವುದು ಅನಿವಾರ್ಯ. ಹಾಗಾಗಿ ಸಮಾಜದಲ್ಲಿ ವೃತ್ತಿ ಮಾಡುವಾಗ ಆರೋಗ್ಯ ಮತ್ತು ಜೀವ ರಕ್ಷಣೆ ಮುಖ್ಯ ಈ ನಿಟ್ಟಿನಲ್ಲಿ ಕ್ಷೌರಿಕ ವೃತ್ತಿಯನ್ನು ವಿಶೇಷವಾಗಿ ಪರಿಗಣಿಸಿ ಪ್ರತಿ ವೃತ್ತಿ ಬಾಂಧವರಿಗೆ ಆರೋಗ್ಯ ಕಿಟ್‌ ಜೊತೆಗೆ ಜೀವ ವಿಮೆ ಸೌಲಭ್ಯ ಒದಗಿಸುವಂತೆ ಕ್ಷೌರಿಕರು ಮನವಿ ಮಾಡಿದ್ದಾರೆ. ಒಟ್ಟಾರೆ ಶೋಷಿತ ಸಮುದಾಯಗಳಲ್ಲಿ ಒಂದಾದ ಕ್ಷೌರಿಕರು ಕೊರೊನಾ ವಿರುದ್ಧ ಹೋರಾಟಕ್ಕೆ ಸ್ವಯಂ ನಿಬಂಧನೆಗೊಳಪಟ್ಟು ಮಾದರಿ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ.

ಕೋವಿಡ್ ತಂದಿಟ್ಟ ಅಪವಾದದಿಂದ ದೂರವಿರುವ ಸಲುವಾಗಿ ಮತ್ತು ಜನರಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಸಲುವಾಗಿ ಮೇ 31ರವರೆಗೆ ಸೆಲೂನ್‌ಗಳನ್ನು ಮುಚ್ಚುವ ನಿರ್ಧಾರ ಮಾಡಲಾಗಿದ್ದು, ಸಹಕರಿಸುವಂತೆ ಕ್ಷೌರಿಕ ಬಾಂಧವರಿಗೆ ಮನವಿ ಮಾಡಲಾಗಿದೆ.
ಮಂಜಪ್ಪ ಟಿ., ಅಧ್ಯಕ್ಷರು,
ಭಂಡಾರಿ ಸಮಾಜ ಹೊಸನಗರ

ಈ ನಿರ್ಧಾರದಿಂದ ವೃತ್ತಿಯನ್ನೇ ನಂಬಿದ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಆದರೆ ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ಷೌರಿಕರು ಒಟ್ಟಾಗಿ ಕುಳಿತು ಈ ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್  ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಲಾಗಿದೆ.
ಚಂದ್ರಶೇಖರ್‌ ನಿಲ್ಸಕಲ್‌,
ಅಧ್ಯಕ್ಷರು ಸವಿತಾ ಸಮಾಜ ನಗರ ಹೋಬಳಿ

ಕುಮುದಾ ನಗರ

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

1-asasas

Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.