ರಾಜ್ಯ ಒಡೆದರೆ ಕೈ-ತೆನೆಗೆ ಉಳಿಗಾಲವಿಲ್ಲ
Team Udayavani, Aug 2, 2018, 6:35 AM IST
ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕ ನಿರ್ಲಕ್ಷಿಸಿದ್ದು ಈಗ ಅಭಿವೃದ್ಧಿಯಾಗಿಲ್ಲ ಎಂದು ರಾಜ್ಯ ಒಡೆಯಲು ಮುಂದಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಉಳಿಯುವುದಿಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ
ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ, ಧರ್ಮ, ಪ್ರಾಂತದ ಹೆಸರಿನಲ್ಲಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಒಡೆಯುವುದು ಸುಲಭದ ಕೆಲಸವಲ್ಲ. ನಂಜುಂಡಪ್ಪ ವರದಿ ಅನ್ವಯ ಬಿಡುಗಡೆಯಾದ ಹಣ ಸದ್ಭಳಕೆಯಾಗಿಲ್ಲ ಎಂದರು. 371ನೇ ವಿ ಧಿಯಡಿ ಬಂದ ಹಣ ಸಮರ್ಪಕವಾಗಿ ಬಳಸಿಲ್ಲ. ಇಲ್ಲಿ ಉದ್ಯೋಗ ಭರ್ತಿಯೂ ಆಗಿಲ್ಲ ಎಂದು ಆರೋಪಿಸಿದರು.