ಅಷ್ಟಾಂಗ ಯೋಗದಿಂದ ಮೋಕ್ಷ ಪ್ರಾಪ್ತಿ
Team Udayavani, Jun 22, 2021, 6:45 PM IST
ಶಿವಮೊಗ್ಗ: ಅಷ್ಟಾಂಗ ಯೋಗದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಯೋಗ, ಉತ್ತಮ ಕರ್ಮ ಮತ್ತು ಸದ್ವಿಚಾರಗಳನ್ನು ಪಾಲಿಸುವವರು ಎಲ್ಲರಿಗೂ ಒಳ್ಳೆಯದನ್ನು ಬಯಸುವವರು ಯೋಗಿಗಳಾಗುತ್ತಾರೆ. ಅಹಂಕಾರ ಇಲ್ಲದ ವರ್ತನೆಯಿಂದ ಮಾನವನ ಉದ್ಧಾರವಾಗುತ್ತದೆ ಎಂದು ಅವಧೂತರಾದ ಗೌರಿಗದ್ದೆಯ ವಿನಯ್ ಗುರೂಜಿ ಹೇಳಿದರು.
ವಿನೋಬ ನಗರದ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಸಚಿವ ಈಶ್ವರಪ್ಪ ದೇಣಿಗೆಯಿಂದ ನಿರ್ಮಿಸಿದ ಮುಖ್ಯದ್ವಾರದ ಸ್ವಾಗತ ಕಮಾನಿನ ಲೋಕಾರ್ಪಣೆ ಹಾಗೂ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ನಾನು ನನ್ನದು’ ಎಂಬ ಅಹಂಕಾರದ ವರ್ತನೆಯನ್ನು ಬಿಡುವುದೇ ಯೋಗ. ಯೋಗದಿಂದಲೇ ಭಾರತ ಇಂದು ವಿಶ್ವಗುರುವಾಗಿದೆ. ಮೊದಲು ನಿನ್ನಲ್ಲಿರುವ ಶಕ್ತಿಯನ್ನು ಜಾಗೃತಗೊಳಿಸಿ ನಾಡಿ ಶುದ್ಧೀಕರಣದಿಂದ ದೇಹಕ್ಕೆ ಮತ್ತು ಮನಸ್ಸಿಗೆ ಅಗತ್ಯವಾದ ಉತ್ತಿಷ್ಠ ಮತ್ತು ಜಾಗೃತ ಸ್ಥಿತಿಯನ್ನು ಯೋಗದಿಂದ ತಲುಪಬಹುದು. 40 ವರ್ಷದ ಮಹಿಳೆಯೊಬ್ಬರು ಯಾವುದೇ ಆಹಾರವನ್ನು ಸೇವಿಸದೇ ಯೋಗದಿಂದಲೇ ಬದುಕಿದ ಉದಾಹರಣೆ ಇದೆ. ನಮ್ಮ ದೇಶದಲ್ಲಿ ನೂರಾರು ಯೋಗ ಸಾಧಕರು ಅಸಾಮಾನ್ಯ ಸಾಧನೆ ಮಾಡಿದ್ದಾರೆ. “ಸೋಹಂ ಧ್ಯಾನ ನಾನು ನೀನೇ’ ಎಂದು ಪರಮಾತ್ಮನನ್ನು ಧ್ಯಾನಿಸುವುದೇ ಯೋಗವಾಗಿದೆ ಎಂದು ಹೇಳಿದರು.
ಸಮಚಿತ್ತದಲ್ಲಿರಲು ಯೋಗ ಬಿಟ್ಟರೆ ಬೇರೆ ಹಾದಿ ಇಲ್ಲ. ಭಜನೆಯಿಂದ ಭಾವಶುದ್ಧಿಯಾಗುತ್ತದೆ. ಯೋಗದಿಂದ ದೇಹ ಶುದ್ಧವಾಗುತ್ತದೆ. ಮಾತೆಯರು ಸಣ್ಣವರಿದ್ದಾಗಲೇ ಯೋಗಾಭ್ಯಾಸ ಆರಂಭಿಸಿ ತಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರ ನೀಡಬೇಕು. ಯಾರ ಸಹವಾಸವನ್ನು ಜಾಸ್ತಿ ಮಾಡುತ್ತೇವೆಯೋ ಅವರ ಗುಣವೇ ಬರುತ್ತದೆ. ಸಂಸ್ಕಾರದಿಂದ ಮಾತ್ರ ಭಾರತ ಇಷ್ಟು ದೊಡ್ಡ ಮಟ್ಟಿಗೆ ನಿಂತಿದೆ. ಜೀವನವನ್ನು ಯೋಗದಿಂದ ಪೂರ್ಣದ ಕಡೆಗೆ ತೆಗೆದುಕೊಂಡು ಹೋಗಬಹುದು ಎಂದರು.
ಕಂಡವರ ವಿಚಾರ ಮಾತನಾಡಿದರೆ ಅದು ಮೈಲಿಗೆಯಾಗುತ್ತದೆ. ಅದನ್ನು ಬಿಟ್ಟು ಎಲ್ಲರನ್ನೂ ಒಂದುಗೂಡಿಸುವ ಯೋಗದೆಡೆಗೆ ಮನಸ್ಸು ಮಾಡಿ ಎಂದು ತಿಳಿಸಿದರು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಬೇಡವಾದ್ದನ್ನು ಬಿಟ್ಟು ಬೇಕಾಗಿರುವುದನ್ನು ಮಾತ್ರ ಸ್ವೀಕರಿಸಿ. ಪಂಚೇಂದ್ರಿಯಗಳು ಉಪಕಾರದ ಜೊತೆಗೆ ಅಪಕಾರ ಮಾಡುತ್ತವೆ. ಅದನ್ನು ಹಿಡಿತದಲ್ಲಿಟ್ಟುಕೊಂಡು ಮನಸ್ಸನ್ನು ಯೋಗದೆಡೆಗೆ ಕೇಂದ್ರೀಕರಿಸಿದಾಗ ಸಾಧನೆ ಮಾಡಬಹುದು ಎಂದರು.
ಶಾಸಕ ಎಸ್. ರುದ್ರೇಗೌಡ, ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಡಾ| ಸಿ.ವಿ. ರುದ್ರಾರಾಧ್ಯ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪಾಲಿಕೆಸದಸ್ಯೆ ಅನಿತಾ ರವಿಶಂಕರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಎಸ್.ವೈ. ಅರುಣಾದೇವಿ ಇನ್ನಿತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ