ಸನ್ಮಾನದ ಬದಲಾಗಿ ನೆರೆ ಸಂತ್ರಸ್ತರಿಗಾಗಿ ಟವೆಲ್ ಸ್ವೀಕರಿಸಿದ ಸಚಿವ ಕೆ.ಎಸ್. ಈಶ್ವರಪ್ಪ
Team Udayavani, Aug 25, 2019, 11:55 AM IST
ಶಿವಮೊಗ್ಗ: ಸಚಿವರಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸನ್ಮಾನವನ್ನು ನಿರಾಕರಿಸಿ ಬದಲಾಗಿ ನೆರೆ ಸಂತ್ರಸ್ತರಿಗಾಗಿ ಟವೆಲ್ ಸ್ವೀಕರಿಸಿದರು.
ನಗರದ ಕೋಟೆ ಸೀತಾ ರಾಮಾಂಜನೇಯ ದೇವಾಲಯದಲ್ಲಿ ಪತ್ನಿ ಸಮೇತರಾಗಿ ಪೂಜೆ ಸಲ್ಲಿಸಿದ ಈಶ್ವರಪ್ಪ, ನಂತರ ಶಿವಮೊಗ್ಗ ನಗರ ಬಿಜೆಪಿ ಆಯೋಜಿಸಿರುವ ನೆರವಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಿಎಸ್ ವೈ ಸರಕಾರದಲ್ಲಿ ಸಚಿವರಾಗಿರುವುದಕ್ಕೆ ಏರ್ಪಡಿಸಿದ್ದ ಸನ್ಮಾನವನ್ನು ನಿರಾಕರಿಸಿದ ಈಶ್ವರಪ್ಪ ಅವರು ಬದಲಾಗಿ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ ಕಾರ್ಯಕ್ರಮ ಆಯೋಜನೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಎಂ.ಎಲ್.ಸಿ. ಆಯನೂರು ಮಂಜುನಾಥ್, ಉಪಮೇಯರ್ ಚನ್ನಬಸಪ್ಪ ಸೇರಿದಂತೆ, ಹಲವು ಮುಖಂಡರು ಭಾಗಿಯಾಗಿದ್ದರು.