ಶಾಲಾ ಸಮವಸ್ತ್ರ ಬಟ್ಟೆಯ ಟೆಂಡರ್‌ ದರ ಹೆಚ್ಚಳವಾಗಲಿ​​​​​​​


Team Udayavani, Dec 2, 2018, 6:00 AM IST

ban02121807medn.jpg

ಶಿವಮೊಗ್ಗ: ಕಳೆದ ಬಾರಿ ಕಡಿಮೆ ದರಕ್ಕೆ ಶಾಲಾ ಮಕ್ಕಳ ಸಮವಸ್ತ್ರದ ಬಟ್ಟೆ ಕೇಳಿದ್ದ ರಾಜ್ಯ ಸರಕಾರ, ಈ ಬಾರಿಯೂ ಇದನ್ನು ಮುಂದುವರಿಸಬಹುದೆಂಬ ಆತಂಕ ನೇಕಾರರನ್ನು ಕಾಡುತ್ತಿದೆ. ಜಿಎಸ್‌ಟಿ, ನೋಟ್‌ ಬ್ಯಾನ್‌ ಹೊಡೆತದಿಂದ ತತ್ತರಿಸಿರುವ ನೇಕಾರರು, ಈ ಬಾರಿಯಾದರೂ ಸರಕಾರ ತಮ್ಮ ಕೈ ಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಬಾರಿ ಮೈಸೂರಿನ ವ್ಯಕ್ತಿಯೊಬ್ಬರು ಅತಿ ಕಡಿಮೆ ದರಕ್ಕೆ ಅಂದರೆ, ಮೀಟರ್‌ಗೆ 40ರೂ.ಗೆ ಶಾಲಾ ಮಕ್ಕಳ ಬಟ್ಟೆ ಟೆಂಡರ್‌ ಪಡೆದಿದ್ದರು. ಇದನ್ನೇ ಮುಂದಿಟ್ಟುಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಇದೇ ದರಕ್ಕೆ ಬಟ್ಟೆ ಕೊಡಬೇಕೆಂದು ನೇಕಾರರಿಗೆ ತಿಳಿಸಿದ್ದರು. ಅಲ್ಲದೆ, ಏಪ್ರಿಲ್‌ನಲ್ಲಿ ಟೆಂಡರ್‌ ನೀಡಿದ್ದರಿಂದ ನೇಕಾರರು ಬಟ್ಟೆ ಕೊಡಲು ಸಾಧ್ಯವಾಗದೆ ತಿರಸ್ಕರಿಸಿದ್ದರು. ಪ್ರತಿ ಬಾರಿಯೂ ಅಧಿ ಕಾರಿಗಳು ನವೆಂಬರ್‌, ಡಿಸೆಂಬರ್‌ನಲ್ಲಿ ಸಭೆ ನಡೆಸುತ್ತಾರೆ. ಆದರೆ, ಮಾರ್ಚ್‌, ಏಪ್ರಿಲ್‌ ವೇಳೆಗೆ ಟೆಂಡರ್‌ ಕರೆಯುತ್ತಾರೆ. ಜೂನ್‌ ಒಳಗೆ ಬಟ್ಟೆ ಕೊಡಲು ಕೇಳುತ್ತಾರೆ. ಇಷ್ಟು ಕಡಿಮೆ ಸಮಯದಲ್ಲಿ ಬಟ್ಟೆ ಕೊಡುವುದು ಕಷ್ಟ. ಡಿಸೆಂಬರ್‌ ಅಥವಾ ಜನವರಿ ಒಳಗೆ ಎಲ್ಲ ಪ್ರಕ್ರಿಯೆ ಮುಗಿದರೆ ಅನುಕೂಲವಾಗಲಿದೆ ಎನ್ನುವುದು ನೇಕಾರರ ಮಾತು.

ದರ ಹೆಚ್ಚಿಸಲಿ:
ಕಳೆದ ಬಾರಿ 40ರೂ.ಗೆ ಕೊಡಲಾಗಿತ್ತು. ಇಷ್ಟು ಕಡಿಮೆ ದರದಲ್ಲಿ ಉತ್ತಮ ದರ್ಜೆಯ ಬಟ್ಟೆ ಒದಗಿಸುವುದು ಕಷ್ಟದ ಮಾತು. ಒಂದು ಮೀಟರ್‌ ಬಟ್ಟೆಗೆ ಕನಿಷ್ಠ 50 ರೂ.ಖರ್ಚು ಬರುತ್ತದೆ. ಸರಕಾರ ದೊಡ್ಡ ಕಂಪನಿಗಳ ಲೆಕ್ಕದಲ್ಲಿ ನೇಕಾರರನ್ನು ಪರಿಗಣಿಸಿರುವುದು ದುರಂತ. ಒಂದು ಮೀಟರ್‌ ಬಟ್ಟೆಗೆ 50 ರೂ.ಖರ್ಚು ಬರುತ್ತದೆ. 24ರೂ.ದಾರಕ್ಕೆ, ಕಾರ್ಮಿಕರ ಸಂಬಳ, ಬಣ್ಣ ಕಟ್ಟಲು 7.50 ರೂ., ಟ್ರಾನ್ಸ್‌ಪೊàರ್ಟ್‌ಗೆ 50 ಪೈಸೆ, ಲ್ಯಾಬ್‌ ಟೆಸ್ಟ್‌ ಮತ್ತು ಕಟಿಂಗ್‌ ವೇಸ್ಟ್‌ಗೆ 2.60 ರೂ., ಅಲ್ಲದೆ, ಟೆಂಡರ್‌ ಕೊಡಿಸಿದ್ದಕ್ಕೆ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ 2.36 ರೂ. ಕಮಿಷನ್‌ ಕೊಡಬೇಕಾಗುತ್ತದೆ. ಹಾಗಾಗಿ, ಕಡಿಮೆ ದರಕ್ಕೆ ಕೊಡಬೇಕಾದರೆ ಕ್ವಾಲಿಟಿಯಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ದರ ಹೆಚ್ಚಿಸಿದರೆ ಉತ್ತಮ ಎಂಬುದು ನೇಕಾರರ ಒತ್ತಾಯ.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ಬಾರಿ ಬೆಳಗಾವಿ ವಿಭಾಗದ 10 ಜಿಲ್ಲೆಗಳಿಗೆ ಅಂದಾಜು 40 ಲಕ್ಷ ಮೀಟರ್‌ ಬಟ್ಟೆ ಟೆಂಡರ್‌ ನೀಡುತ್ತಿದೆ. 2016-17ರಲ್ಲಿ 30 ಲಕ್ಷ ಮೀಟರ್‌ ಬಟ್ಟೆಗೆ ಟೆಂಡರ್‌ ನೀಡಲಾಗಿತ್ತು. ಮೀಟರ್‌ಗೆ 53ರೂ.ದರ ನಿಗದಿ ಮಾಡಲಾಗಿತ್ತು. 2017-18ರಲ್ಲಿ 25 ಲಕ್ಷ ಮೀಟರ್‌ ಬಟ್ಟೆಯನ್ನು 49ರೂ.ಗೆ ಕೇಳಲಾಗಿತ್ತು. 2018-19ರಲ್ಲಿ 40 ರೂ.ನಿಗದಿ ಮಾಡಲಾಗಿತ್ತು. ಸರಕಾರ ವರ್ಷದಿಂದ ವರ್ಷಕ್ಕೆ ದರವನ್ನು ಕಡಿಮೆ ಮಾಡುತ್ತಿದೆ. ಆದರೆ, ಉತ್ಪಾದನಾ ವೆಚ್ಚ ಮಾತ್ರ ಅ ಧಿಕವಾಗುತ್ತಿದೆ. ಕನಿಷ್ಠ ಮೀಟರ್‌ಗೆ 50ರೂ.ಮಾಡಿದರೆ ಜವಳಿ ಉದ್ಯಮಿಗಳು ಉಸಿರಾಡಬಹುದು ಎನ್ನುತ್ತಾರೆ ಜವಳಿ ಉದ್ಯಮಿ ಕರಿಬಸಪ್ಪ.

ರಾಜ್ಯದಲ್ಲಿ ಪವರ್‌ ಲೂಮ್‌ ನೇಕಾರರು 5 ಸಾವಿರ, ಕೈಮಗ್ಗ ನೇಕಾರರು ಅಂದಾಜು 5 ಸಾವಿರ ಮಂದಿ ಇದ್ದಾರೆ. ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ ಮುಂಚಿತವಾಗಿಯೇ ಟೆಂಡರ್‌ ನೀಡಲಾಗುತ್ತದೆ. ಅಲ್ಲದೆ, ಕನಿಷ್ಠ 15ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಸರಕಾರ ಅವರಿಗೆ ನೀಡಿದಷ್ಟು ಆದ್ಯತೆಯನ್ನು ನಮಗೂ ನೀಡಬೇಕು ಎಂಬುದು ಅವರ ಒತ್ತಾಯ.

ಬೆಳಗಾವಿಯಲ್ಲಿ ಡಿ.5ರಂದು ನಿಗಮದ ವ್ಯವಸ್ಥಾಪಕರ ಜತೆ ಸಭೆಯಿದೆ. ಶಾಲಾ ಮಕ್ಕಳ ಬಟ್ಟೆ ಟೆಂಡರ್‌ನ್ನು ಜನವರಿ ಒಳಗೆ ನೀಡಿದರೆ ಸಾಕಷ್ಟು ಅನುಕೂಲವಾಗುತ್ತದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ನೇಕಾರರಿಗೆ ಬಲ ನೀಡಿದಂತಾಗುತ್ತದೆ.
– ಮಂಜುನಾಥ್‌, ಜವಳಿ ಉದ್ಯಮಿ, ದಾವಣಗೆರೆ

– ಶರತ್‌ ಭದ್ರಾವತಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.