ಲಿಂಗನಮಕ್ಕಿ ಜಲಾಶಯದ ಒಂದು ಗೇಟ್ ನಿಂದ ನೀರು ಬಿಡುಗಡೆ: ಶರಾವತಿ ನದಿಗೆ ಬಾಗಿನ ಅರ್ಪಣೆ
Team Udayavani, Aug 2, 2021, 3:41 PM IST
ಬೆಂಗಳೂರು: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದು ಶರಾವತಿಗೆ ನದಿಗೆ ಬಾಗಿನ ಅರ್ಪಿಸಿ, ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರು ಹೊರಗೆ ಬಿಡಲಾಯಿತು.
ಬೆಳಗ್ಗೆ ಕೆಪಿಸಿ ಅಧಿಕಾರಿಗಳು ಶರಾವತಿ ನದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಾಗಿನ ಅರ್ಪಣೆ ಮಾಡಿದರು. ಕೆಪಿಸಿ ಅಧಿಕಾರಿಗಳು, ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗೇಟ್ ನಿಂದ ನೀರು ಹೊರಗೆ: ಲಿಂಗನಮಕ್ಕಿ ಜಲಾಶಯದ ಗೇಟ್ ನಿಂದ ಇವತ್ತು ಸಾಂಪ್ರದಾಯಿಕವಾಗಿ ಕೆಲವು ನಿಮಿಷ ನೀರು ಹೊರಗೆ ಬಿಡಲಾಯಿತು. ಜಲಾಶಯ ಅರ್ಧ ಭರ್ತಿಯಾದ ಬಳಿಕ ಒಂದು ಗೇಟ್ ಮೂಲಕ ಸ್ವಲ್ಪ ಪ್ರಮಾಣದ ನೀರನ್ನು ಹೊಳಗೆ ಹರಿಸಲಾಗುತ್ತದೆ.
ಇದನ್ನೂ ಓದಿ:ಯಡಿಯೂರಪ್ಪನವರ ಪಾಪದ ಕೆಲಸಗಳನ್ನು ಬೊಮ್ಮಾಯಿ ಮುಂದುವರಿಸಲೇಬೇಕಾಗಿದೆ : ಸಿದ್ದರಾಮಯ್ಯ
ಜಲಾಶಯದಲ್ಲಿ 1795 ಅಡಿ ನೀರು ಸಂಗ್ರಹವಾದರೆ, ಅರ್ಧ ಭರ್ತಿಯಾ ದಂತಾಗಲಿದೆ. ಇಷ್ಟು ನೀರು ಸಂಗ್ರಹವಾದರೆ ಗೇಟ್ ಮಟ್ಟಕ್ಕೆ ನೀರು ಬರುತ್ತದೆ. ಆ ಸಂದರ್ಭದಲ್ಲಿ ಬಾಗಿನ ಅರ್ಪಿಸಿ ಗೇಟ್ನಿಂದ ಸ್ವಲ್ಪ ಪ್ರಮಾಣದ ನೀರು ಹೊರಗೆ ಹರಿಸಲಾಗುತ್ತದೆ.
ಇವತ್ತು ಎಷ್ಟಿದೆ ನೀರು?: ಶರಾವತಿ ನದಿ ಭಾಗದಲ್ಲಿ ಕಳೆದ ತಿಂಗಳು ಭಾರಿ ಮಳೆಯಾಗಿದೆ. ಈ ಹಿನ್ನಲೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿತ್ತು. ಇದರಿಂದ ಜಲಾಶಯದ ನೀರಿನ ಮಟ್ಟ ಬಹುಬೇಗ ಏರಿಕೆಯಾಗಿದೆ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಇವತ್ತು 1807.20 ಅಡಿಯಷ್ಟು ನೀರಿನ ಸಂಗ್ರಹವಿದೆ. 14,481 ಕ್ಯೂಸೆಕ್ ಒಳಹರಿವು ಇದೆ. ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಭಾಗದಲ್ಲಿ 3.40 ಮಿ.ಮೀ ಮಳೆಯಾಗಿದೆ. ಇದರಿಂದ ಜಲಾಶಯದ ಒಳ ಹರಿವು ಇನ್ನಷ್ಟು ಹೆಚ್ಚಳವಾಗುವ ಸಂಭವವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ