ಸ್ವಂತ ಶಕ್ತಿಯಿಂದ ಅಧಿಕಾರದಲ್ಲಿದ್ದೇವೆ, ನಮಗೆ ಜೆಡಿಎಸ್ ಅನಿವಾರ್ಯವಲ್ಲ: ರೇಣುಕಾಚಾರ್ಯ
Team Udayavani, Dec 21, 2020, 4:00 PM IST
ಶಿವಮೊಗ್ಗ: ನಾವು ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರದಲ್ಲಿದ್ದೇವೆ. ಬಿಜೆಪಿಗೆ ಜೆಡಿಎಸ್ ಅನಿವಾರ್ಯವಲ್ಲ. ಅದರೆ ಜೆಡಿಎಸ್ ಗೆ ಯಾವ ಅನಿವಾರ್ಯತೆ ಇದೆಯೋ ನನಗೆ ಗೊತ್ತಿಲ್ಲ. ನಾವಂತೂ ಸ್ವತಂತ್ರವಾಗಿ ಸ್ಫರ್ಧೆ ಮಾಡುತ್ತೇವೆ ಹಾಗೂ ಗೇಲ್ಲುತ್ತೇವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಮೋದಿಯವರ ವರ್ಚಸ್ಸು ಹಾಗೂ ಕಾರ್ಯಕರ್ತರ ಶ್ರಮವಿದೆ. ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಸರ್ಕಾರ ಹಾಗೂ ನಾಯಕರುಗಳು ಕೆಲಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಸೇರಿದಂತೆ ತಾ.ಪಂ ಹಾಗೂ ಜಿ.ಪಂನಲ್ಲಿ ಹೆಚ್ಚಿನ ಸ್ಥಾನ ಗೇಲ್ಲುತ್ತೇವೆ. 2023 ರಲ್ಲಿ ಬಿಜೆಪಿ ಮತ್ತೋಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಾಣಿಜ್ಯ ನಗರ ದಾವಣಗೆರೆ ಇತಿಹಾಸ ಹೊಂದಿದ್ದು, ಒಂದು ಅವಕಾಶ ಕೊಡಿ ಎಂದಿದ್ದೇವೆ. ಈ ಬಗ್ಗೆ ದಾರಿಯಲ್ಲಿ, ಬೀದಿಯಲ್ಲಿ ಮಾತನಾಡಿದರೆ ಸರಿಯಾಗಲ್ಲ. ಈ ಬಗ್ಗೆ ಸಿಎಂ ಹಾಗೂ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾನು ಬದ್ಧ ಎಂದರು.
ಇದನ್ನೂ ಓದಿ:ಕಾಂಗ್ರೆಸ್, ಮುಸ್ಲಿಂ ಲೀಗ್ ಬಿಟ್ಟು ಯಾರೇ ಬೆಂಬಲ ನೀಡಿದರೂ ಅಭ್ಯಂತರವಿಲ್ಲ: ಈಶ್ವರಪ್ಪ
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ಒಂದು ಸಂಘಟನೆಗಳು ಬೇರೆಯವರಿಗೆ ಆದರ್ಶವಾಗಿರಬೇಕು. ಅದರ ಹೆಸರಿನಲ್ಲಿ ವಂಚನೆ, ಬ್ಲಾಕ್ ಮೇಲ್ ಮಾಡೋದು ಸರಿಯಲ್ಲ. ರೈತರಿಗೆ ಹಣ ಕೊಡಿಸುವುದಾಗಿ ಕೋಡಿಹಳ್ಳಿ ವಂಚನೆ ಮಾಡಿ, ಲೂಟಿ ಹೊಡೆದಿದ್ದಾರೆ. ರೈತರ ಜೊತೆಗೆ ಈಗ ಕೆಎಸ್ಆರ್ಟಿಸಿ ನೌಕರರಿಗೂ ವಂಚನೆ ಮಾಡಿದ್ದಾರೆ. ಹುಚ್ಚುಚ್ಚಾಗಿ ಹಾಗೂ ಹತಾಶ ಭಾವನೆಯಿಂದ ಮಾತಾನಾಡುತ್ತಿದ್ದಾರೆ. ದಲ್ಲಾಳಿ ಮುಖ್ಯಸ್ಥರ ಜೊತೆ ರೈತರು ಬರಬೇಡಿ. ನಿಮ್ಮ ಸಮಸ್ಯೆ ಇದ್ದರೇ ನೇರವಾಗಿ ಹೇಳಿಕೊಳ್ಳಿ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ