ಇತಿಹಾಸದ ಅರಿವು ಮೂಡಿಸಿ
•ನಮ್ಮ ಪರಂಪರೆ ಪರಿಚಯ ಮಾಡಿಕೊಟ್ಟರೆ ಅಭಿಮಾನದಿಂದ ಬದುಕಲು ಸಾಧ್ಯ
Team Udayavani, May 21, 2019, 1:03 PM IST
ಶಿವಮೊಗ್ಗ: ವಸ್ತು ಸಂಗ್ರಹಾಲಯ ವೀಕ್ಷಣೆಗೆ ಹೊರಟ ಯುವಜನ ಚಾರಣ ಸಂಸ್ಥೆ ಸದಸ್ಯರು.
ಶಿವಮೊಗ್ಗ: ನಮ್ಮ ಇತಿಹಾಸ ಹಾಗೂ ಪರಂಪರೆಯನ್ನು ಸಮಗ್ರವಾಗಿ ಅರಿತವ ಮಾತ್ರ ಸಮರ್ಥವಾಗಿ ಭವಿಷ್ಯವನ್ನು ರೂಪಿಸಬಲ್ಲ ಎಂದು ಇತಿಹಾಸ ತಜ್ಞ ಹಾಗೂ ಹೆಸರಾಂತ ಪ್ರಾಚ್ಯವಸ್ತು ಸಂಗ್ರಹಕಾರ ಎಚ್. ಖಂಡೋಬರಾವ್ ಪ್ರತಿಪಾದಿಸಿದರು.
ನಗರದ ಹೊರವಲಯದಲ್ಲಿನ ಲಕ್ಕಿನಕೊಪ್ಪ ಅಮೂಲ್ಯ ಶೋಧ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ತಮಗೆ ನೀಡಲಾದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಲ್ಲಿ ಇತಿಹಾಸದ ಅರಿವನ್ನು ಮೂಡಿಸಬೇಕು. ನಮ್ಮ ಪರಂಪರೆಯ ಪರಿಚಯ ಮಾಡಿಕೊಡಬೇಕು. ಆಗ ಮಾತ್ರ ಅವರು ಅಭಿಮಾನದಲ್ಲಿ ಬದುಕಲು ಸಾಧ್ಯ ಎಂದರು.
ಇಂದು ಸಮಾಜದಲ್ಲಿ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಅವಜ್ಞೆ ಇದೆ. ಹೀಗಾಗಿ, ನಮ್ಮ ಪಠ್ಯ ಕ್ರಮದಲ್ಲಿಯೂ ಕೂಡಾ ಇತಿಹಾಸವನ್ನು ಸಮರ್ಥವಾಗಿ ಬಿಂಬಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮುಂದಿನ ಪೀಳಿಗೆ ನೈಜ ಇತಿಹಾಸದಿಂದ ವಂಚಿತವಾಗುವ ಅಪಾಯವಿದೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಶಕ್ತಿಮೀರಿ ಈ ಅಮೂಲ್ಯ ಶೋಧ ಎಂಬ ಪ್ರಾಚ್ಯ ವಸ್ತು ಸಂಗ್ರಹಾಲಯವನ್ನು ನಿರೂಪಿಸಲಾಗಿದೆ. ಇಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಂಗ್ರಹಿತವಾದ ಅಮೂಲ್ಯ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿದೆ ಎಂದು ಹೇಳಿದರು.
ಈ ಅಮೂಲ್ಯ ಶೋಧದಲ್ಲಿ ಸ್ವಂತ ಖರ್ಚಿನಿಂದ ಈವರೆಗೆ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಕ್ಯಾಂಟೀನ್ ಸೇರಿದಂತೆ, ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಆಸಕ್ತಿಯಿದೆ. ಹೀಗಾಗಿ ದಾನಿಗಳು ಮುಂದೆ ಬಂದು ಸಹಕಾರ ನೀಡಬೇಕು. ಇದು ಶ್ರಮದ ಸಾರ್ಥಕತೆ ಕಾಣುವುದು ಅದು ಪ್ರಯೋಜನವಾದಾಗ ಮಾತ್ರ್ತ್ರ. ಹೀಗಾಗಿ, ನಾಡಿನ ಜನತೆ ಸಾರ್ವಕಾಲಿಕ ಮಹತ್ವದ ಈ ಸಂಗ್ರಹಾಲಯದ ಬಗ್ಗೆ ಗಮನ ಹರಿಸಬೇಕು ಎಂದು ಕೋರಿದರು.
ಯುವಜನ ಚಾರಣ ಸಂಸ್ಥೆ ತನ್ನದೇ ಆದ ರೀತಿಯಲ್ಲಿ ಯುವ ಜನತೆ ಸೇರಿದಂತೆ ಸಾರ್ವಜನಿಕರಲ್ಲಿ ಸಾಹಸ ಪ್ರವೃತ್ತಿಯನ್ನು ಬೆಳೆಸುವಲ್ಲಿ ಗಮನಾರ್ಹ ಪಾತ್ರವಹಿಸಿದೆ. ಇದರ ಅಂಗವಾಗಿ, ಈಗ ಆರೋಗ್ಯದೆಡೆಗೆ ನಡಿಗೆ ಹೆಸರಿನಲ್ಲಿ ಶಿವಮೊಗ್ಗೆಯಿಂದ ಲಕ್ಕಿನಕೊಪ್ಪವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಈ ವಸ್ತು ಸಂಗ್ರಹಾಲಯ ವೀಕ್ಷಿಸಿದ್ದು ನಿಜಕ್ಕೂ ಕೂಡಾ ಅನುಕರಣೀಯ ಕಾರ್ಯ. ಸಾರ್ವಜನಿಕರಲ್ಲಿ ಈ ಸಾಹಸ ಪ್ರವೃತ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನ್ಮುಖವಾಗಲಿ ಎಂದು ಆಶಿಸಿದರು.
ಯುವಜನ ಚಾರಣ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಜಿ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಸ್. ಎಸ್. ವಾಗೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಯುವ ಮುಖಂಡ ಎಸ್. ದತ್ತಾತ್ರಿ, ಜಿಲ್ಲಾ ಸೈಕಲ್ ಕ್ಲಬ್ನ ಅಧ್ಯಕ್ಷ ಶ್ರೀಕಾಂತ್ ಹಾಗೂ ಅರೋಗ್ಯದೆಡೆಗೆ ನಡಿಗೆ ಕಾರ್ಯಕ್ರಮದ ಸಂಚಾಲಕ ಎಂ. ರಫಿ ಉಪಸ್ಥಿತರಿದ್ದರು.
ನಗರದ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದ ಆವರಣದಿಂದ ಬೆಳಿಗ್ಗೆ 5:30ಕ್ಕೆ ಆರಂಭಗೊಂಡ ಈ ಆರೋಗ್ಯದೆಡೆಗೆ ನಡಿಗೆ, ಲಕ್ಕಿನ ಕೊಪ್ಪದ ಅಮೂಲ್ಯ ಶೋಧದಲ್ಲಿ ಸಂಪನ್ನಗೊಂಡಿತು. 60ಕ್ಕೂ ಹೆಚ್ಚು ಉತ್ಸಾಹಿ ಸಾಹಸಿಗರು ಈ ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ