ನಾಟಿ ಔಷಧ ಬಂದ್; ರೋಗಿಗಳ ಪರದಾಟ
Team Udayavani, Mar 26, 2021, 9:50 PM IST
ಆನಂದಪುರ: ಕೋವಿಡ್ ಹಿನ್ನೆಲೆಯಲ್ಲಿ ನರಸೀಪುರ ನಾಟಿ ಔಷಧ ನೀಡುವುದು ಬಂದ್ ಮಾಡುವಂತೆ ಗ್ರಾಮಾಡಳಿತದಿಂದ ನಾಟಿವೈದ್ಯರಿಗೆ ನೋಟಿಸ್ ನೀಡಲಾಗಿದೆ. ವಿಷಯತಿಳಿಯದೆ ಸ್ಥಳಕ್ಕಾಗಮಿಸಿದ ಸಾವಿರಾರು ಮಂದಿ ರೋಗಿಗಳು ಪರದಾಡಿದರು.
ಆನಂದಪುರ ಹಾಗೂ ಸುತ್ತಮುತ್ತಈಗಾಗಲೇ ನಾಲ್ಕೈದು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆಸಾರ್ವಜನಿಕರ ದೂರಿನ ಮೇರೆಗೆ ಗ್ರಾಮಾಡಳಿತ ಆನಂದಪುರ ಸಮೀಪದ ಶಿವಗಂಗೆಯಲ್ಲಿ ನೀಡುತ್ತಿದ್ದ ನಾಟಿ ಔಷಧಿಯನ್ನು ತಾತ್ಕಾಲಿಕವಾಗಿ ಬಂದ್ಮಾಡುವಂತೆ ಗ್ರಾಮಾಡಳಿತ ನೋಟಿಸುನೀಡಿದೆ. ಹೊರ ರಾಜ್ಯದಿಂದ ಬಹುತೇಕರೋಗಿಗಳು ಬರುವುದರಿಂದ ರೋಗಉಲ್ಬಣವಾಗಬಹುದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಔಷಕೊಡುವುದನ್ನು ಬಂದ್ ಮಾಡುವಂತೆ ಗ್ರಾಮಾಡಳಿತ ನೋಟಿಸ್ನಲ್ಲಿ ತಿಳಿಸಿದೆ. ಅಲ್ಲದೆ ಆನಂದಪುರ ವ್ಯಾಪ್ತಿಯಲ್ಲಿನ ಎಲ್ಲಾ ಶುಂಠಿ ಕಣಗಳಿಗೆ ಮಹಾರಾಷ್ಟ್ರದಿಂದ ಶುಂಠಿ ಬರುತ್ತಿದ್ದು ಇಲ್ಲಿ ಬರುವಂತಹ ಚಾಲಕರು ಮತ್ತು ಕ್ಲೀನರ್ಗಳು ಯಾವುದೇ ಪರೀಕ್ಷೆಗೆಒಳಪಡದೆ ಬರುತ್ತಿದ್ದಾರೆ. ಅವರಿಂದ ಎಲ್ಲಾದರೂ ಸೋಂಕು ಕಂಡು ಬಂದರೆ ಈ ಭಾಗಕ್ಕೆ ರೋಗ ಹರಡುವ ಸಂಭವ ಇರುವುದರಿಂದ ಶುಂಠಿ ಕಣದವರು ಮಹಾರಾಷ್ಟ್ರದ ವಾಹನವನ್ನು ಶುಂಠಿ ಕಣಕ್ಕೆ ತರಬಾರದು ಎಂದು ಶುಂಠಿ ಕಣದ ಮಾಲೀಕರಿಗೂ ಕೂಡ ನೋಟಿಸ್ ನೀಡಿರುವುದಾಗಿ ಗ್ರಾಪಂ ಅಧ್ಯಕ್ಷೆ ನವೀನರವೀಂದ್ರ, ಉಪಾಧ್ಯಕ್ಷ ಮೋಹನ್ ಕುಮಾರ್ಹಾಗೂ ಪಂಚಾಯತ್ ಅಭಿವೃದ್ಧಿ ಅ ಧಿಕಾರಿಇಂದಿರಾ ಜ್ಯೋತಿ ಅವರು ಪತ್ರಿಕೆಗೆತಿಳಿಸಿದ್ದಾರೆ.
ರೋಗಿಗಳ ಪರದಾಟ: ಔಷಧಿಗಾಗಿ ಬುಧವಾರ ರಾತ್ರಿಯೇ ಅನೇಕಪ್ರದೇಶಗಳಿಂದ ಸಾವಿರಾರು ರೋಗಿಗಳು ಬಂದಿದ್ದು ಔಷಧ ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ಆದೇಶದಂತೆ ಔಷಧ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ನಾಟಿ ವೈದ್ಯರು ರೋಗಿಗಳಿಗೆ ತಿಳಿಸಿದರು. ತಕ್ಷಣ ರೋಗಿಗಳುಆನಂದಪುರ ಗ್ರಾಪಂಗೆ ಧಾವಿಸಿದರು. ಇಲ್ಲಿನಗ್ರಾಪಂ ಅಧಿಕಾರಿ ಹಾಗೂ ಪ್ರತಿನಿಧಿ ಗಳ ಮನವೊಲಿಸಲು ರೋಗಿಗಳು ಪ್ರಯತ್ನಪಟ್ಟರೂ ´ವಿಫಲವಾಯಿತು.
ನಾಟಿವೈದ್ಯರನ್ನು ಸಂಪರ್ಕಿಸಿ ಕೊರಿಯರ್ ಮೂಲಕ ಔಷಧಿ ಪಡೆದುಕೊಳ್ಳುವಂತೆ ರೋಗಿಗಳಿಗೆ ಪಂಚಾಯತ್ ಆಡಳಿತ ತಿಳಿಸಿತು. ಗ್ರಾಪಂಮುಂದೆ ಜಮಾಯಿಸಿದ್ದ ರೋಗಿಗಳನ್ನು ಪೊಲೀಸರ ಸಹಕಾರದಿಂದ ಹಿಂದಕ್ಕೆಕಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ