ಯಡಿಯೂರಪ್ಪ ನುಡಿದಂತೆ ನಡೆದುಕೊಂಡಿದ್ದಾರೆ, ನಮ್ಮಲ್ಲಿ ಗುಂಪುಗಾರಿಕೆಯಿಲ್ಲ: ಎಸ್.ಟಿ.ಸೋಮಶೇಖರ್
Team Udayavani, Jun 1, 2020, 12:40 PM IST
ಶಿವಮೊಗ್ಗ: ನಮ್ಮ ಶಾಸಕರು ಮೂರು ತಿಂಗಳ ನಂತರ ಎಲ್ಲೋ ಒಂದು ಕಡೆ ಸೇರಿದ್ದಾರೆ. ಅದರಲ್ಲಿ ಗುಂಪುಗಾರಿಕೆ ಏನಿಲ್ಲ. ಯಾವುದೇ ಆ ರೀತಿಯ ಸಭೆಗಳು ನಡೆದಿಲ್ಲ. ಇದೆಲ್ಲಾ ನೂರಕ್ಕೆ ನೂರು ಸುಳ್ಳು ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸರ್ಕಾರದ ವಿರುದ್ಧ ಅಸಮಾಧಾನ ಸಭೆ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ನಮ್ಮನ್ನೆಲ್ಲಾ ಮಂತ್ರಿ ಮಾಡಿತ್ತೇವೆ ಎಂದಿದ್ದರು. ಅದರಂತೆ ಮಂತ್ರಿ ಮಾಡಿದ್ದಾರೆ ಎಂದರು.
ನಾನು, ಬಸವರಾಜ್ ಎಲ್ಲರೂ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡ್ತಿದ್ದೇವೆ. ಮಂತ್ರಿಯಾಗಲು ಇನ್ನೂ ಮೂರು ಜನ ಬಾಕಿ ಇದ್ದಾರೆ. ಅವರಿಗೆ ಕೊಡಿ ಎಂದು ಕೇಳಿದ್ದೆವು. ಅವಾಗಲೂ ಅವರ ಜೊತೆಗೆ ಇದ್ದೆವು. ಈಗಲೂ ಅವರ ಜೊತೆಗೆ ಇರುತ್ತೇವೆ ಎಂದು ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಸೇರಿ ಹಲವರು ಸೇರಿ ನಡೆಸಿದ ರಹಸ್ಯ ಸಭೆ ಸದ್ಯ ರಾಜ್ಯ ರಾಜಕಾರಣದ ಸಂಚಲನ ಉಂಟು ಮಾಡಲು ಕಾರಣವಾಗಿದೆ. ಅದರಲ್ಲೂ ಬಸನ ಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ