ಕೊಳಕ ಮಂಡಲ ನುಂಗಿದ ನಾಗರ!
Team Udayavani, Nov 24, 2018, 4:55 PM IST
ಶಿವಮೊಗ್ಗ: ನಾಗರ ಹಾವೊಂದು ಹೊಟ್ಟೆ ಹಸಿವಿನಿಂದ ಕೊಳಕ ಮಂಡಲ ಹಾವನ್ನು ನುಂಗಿದ್ದ ಅಪರೂಪದ ಘಟನೆ ಗುರುವಾರ ನಗರದಲ್ಲಿ ನಡೆದಿದೆ. ನಗರದ ಹೊರವಲಯ ಸೋಮಿನಕೊಪ್ಪದ ಬನಶಂಕರಿ ಬಡಾವಣೆಯಲ್ಲಿ ದಾಮೋದರ್ ಎಂಬವರ ಮನೆಯ ಮುಂದೆ ನಾಗರ ಹಾವೊಂದು ಮಲಗಿಕೊಂಡಿತ್ತು. ಎಷ್ಟೇ ಓಡಿಸಿದರೂ ಸಹ ಹಾವು ಹೋಗದೆ ಅಲ್ಲೇ ಇತ್ತು. ತಕ್ಷಣ ದಾಮೋದರ್ ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿದ್ದಾರೆ. ಸ್ನೇಕ್ ಕಿರಣ್ ಬಂದ ನಂತರ ಹಾವನ್ನು ಹಿಡಿಯಲು ಹೋದಾಗ ಅದು ಕೊಳಕ ಮಂಡಲವನ್ನು ಹೊರ ಹಾಕಿದೆ. ಅಷ್ಟರಲ್ಲಾಗಲೇ ಕೊಳಕ ಮಂಡಲ ಸಾವನ್ನಪ್ಪಿತ್ತು. ಸ್ನೇಕ್ ಕಿರಣ್ ನಾಗರ ಹಾವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದಿದ್ದಾರೆ. ಹಾವುಗಳು ಆಹಾರ ಅರಸಿಕೊಂಡು ಹೋಗುವಾಗ ಅಪರೂಪಕ್ಕೆ ಈ ರೀತಿ ಘಟನೆಗಳು ನಡೆಯುತ್ತವೆ ಎನ್ನುತ್ತಾರೆ ಉರಗ ರಕ್ಷಕ ಸ್ನೇಕ್ ಕಿರಣ….
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು