ಕಾಯಿಲೆ ಪೀಡಿತರಲ್ಲಿ ಹೊಸ ಆಶಾಕಿರಣ


Team Udayavani, Jan 2, 2018, 3:06 PM IST

02-34.jpg

ಸಾಗರ: ತಾಲೂಕಿನ ಹಂದಿಗೋಡಿನಲ್ಲಿ ತಮ್ಮ ಹೊಸ ವರ್ಷ ಆಚರಣೆಯನ್ನು ಜಿಲ್ಲಾಧಿಕಾರಿ ಡಾ| ಲೋಕೇಶ್‌ ಹಂದಿಗೋಡು ಕಾಯಿಲೆ ಪೀಡಿತರ ನಡುವೆ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಸೋಮವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಹಂದಿಗೋಡು ಕಾಯಿಲೆ ಪೀಡಿತರಿಗೆ 2018ರ ಹೊಸ ವರ್ಷ ವಿಶೇಷ ರೀತಿಯಲ್ಲಿ ಅನುಭವವಾಗುವಂತೆ ಖುದ್ದು ಜಿಲ್ಲಾಧಿಕಾರಿ ಡಾ| ಲೋಕೇಶ್‌ ಅಲ್ಲಿಗೆ ಭೇಟಿ ನೀಡಿ, ಹೊಸ ವರ್ಷದ ಆಚರಣೆಯ ಪ್ರತೀಕವಾಗಿ ಕೇಕ್‌ ಕತ್ತರಿಸಿ ಕಾಯಿಲೆ ಪೀಡಿತರಿಗೆ ತಿನ್ನಿಸಿ ಶುಭಾಷಯಗಳನ್ನು ಹಂಚಿಕೊಂಡರು. ತಮ್ಮ ಸ್ವಂತ ಹಣದಿಂದ ಅವರಲ್ಲಿ ಪುರುಷರಿಗೆ ಪಂಚೆ, ಶರ್ಟ್‌ ಹಾಗೂ ಮಹಿಳೆಯರಿಗೆ ಸೀರೆ ರವಿಕೆ ಕಣಗಳನ್ನು ವಿತರಿಸಿದರು. ಇದರ ಜೊತೆಗೆ ಅವರಿಗಾಗಿ ಪ್ಲೇಟ್‌, ಲೋಟ, ಸೋಪು, ಟೂತ್‌ಪೇಸ್ಟ್‌ ಮೊದಲಾದ ಜೀವನಾವಶ್ಯಕ ವಸ್ತುಗಳಿದ್ದ ವಿಶೇಷ ಕಿಟ್‌ ಒಂದನ್ನು 28ರಿಂದ 30 ಜನರಿಗೆ ವಿತರಿಸಿದರು.

ಜಿಲ್ಲೆಯಲ್ಲಿರುವ ಸುಮಾರು 212 ಹಂದಿಗೋಡು ಕಾಯಿಲೆ ಪೀಡಿತರ ಕುರಿತು ವಿಶೇಷ ಕಾಳಜಿ ಹೊಂದಿರುವ ಜಿಲ್ಲಾ ಧಿಕಾರಿಗಳು ಕಳೆದ ತಿಂಗಳು ಕೂಡ ಹಂದಿಗೋಡಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಜನರ ನೆರವಿಗೆ ತಾವು ಇರುವುದಾಗಿ ಭರವಸೆ ನೀಡಿದ್ದರಾದರೂ, ಹೊಸ ವರ್ಷಕ್ಕೆ ಈ ರೀತಿಯ ಅಚ್ಚರಿಯ ಭೇಟಿ, ಉಡುಗೊರೆಗಳನ್ನು ಕೊಡುವುದರ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ಈ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಯಿಲೆ ಪೀಡಿತರಿಗೆ ಸ್ಥಳದಲ್ಲೇ ಬಂದು ಬಯೋಮೆಟ್ರಿಕ್‌ ಪಡೆದು ಪಡಿತರ ವಿತರಿಸುವುದು ಹಾಗೂ ಗುಡಿ ಕೈಗಾರಿಕೆ ತರಬೇತಿ ಕುರಿತು ತಾವು ನೀಡಿದ ಸೂಚನೆಗಳನ್ನು
ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ಹಾಗೂ ತಾಪಂ ಇಒ ಡಾ| ಕಲ್ಲಪ್ಪ ಜಾರಿಗೆ ತರದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಗುಡಿ ಕೈಗಾರಿಕೆಗಳನ್ನು ನಡೆಸುವುದರಿಂದ ಸಂಕಷ್ಟದಲ್ಲಿರುವವರ ಆರ್ಥಿಕ ಶಕ್ತಿ ಸುಧಾರಿಸುತ್ತದೆ. ಈ ಹಿಂದೆ ಇಲ್ಲಿನ ನೇಯ್ಗೆ ಘಟಕದಲ್ಲಿ ಉತ್ಪಾದನೆಯಾಗುತ್ತಿದ್ದ ರಗ್ಗು, ಹೊದಿಕೆ ಮಾರುಕಟ್ಟೆ ಸಮಸ್ಯೆಯಾದಂತೆ ಈ ಬಾರಿ ಆಗದಂತೆ ಮಾರುಕಟ್ಟೆ
ಕುರಿತಾಗಿಯೂ ಆಡಳಿತ ಚಿಂತಿಸುತ್ತದೆ ಎಂದು ಭರವಸೆ ನೀಡಿದರು. ಹೆಚ್ಚು ಪ್ರಚಾರ ನೀಡದೆ, ಪತ್ರಕರ್ತರಿಗೆ ಸುಳಿವನ್ನೂ ನೀಡದೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಸಾಗರ ಉಪವಿಭಾಗದ ಸಹಾಯಕ ಆಯುಕ್ತ ನಾಗರಾಜ್‌ ಆರ್‌.ಸಿಂಗ್ರೇರ್‌, ತಾಲೂಕು ವೈದ್ಯಾಧಿಕಾರಿ ಡಾ| ಕೆ.ಪಿ.ಅಚ್ಚುತ್‌, ಹಂದಿಗೋಡು ಸಂಚಾರಿ ಘಟಕದ ವೈದ್ಯಾಧಿ ಕಾರಿ ಡಾ| ವಾಸುದೇವ್‌, ಹಿರಿಯ ಆರೋಗ್ಯ ಸಹಾಯಕಿ ಶಾಲಿನಿ, ಆಶಾ ಕಾರ್ಯಕರ್ತೆ ತ್ರಿವೇಣಿ, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್‌ ಹಂದಿಗೋಡು ಸಾಥ್‌ ನೀಡಿದ್ದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.