ಮಂಗನ ಕಾಯಿಲೆ ತಡೆಗೆ ಬಂತು ಹೊಸ ಮದ್ದು! 


Team Udayavani, Jan 30, 2019, 12:30 AM IST

e-18.jpg

ಶಿವಮೊಗ್ಗ: ಮಲೆನಾಡನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಹಾಗೂ ಕರಾವಳಿಯ ಕೆಲ ಭಾಗಗಳಲ್ಲಿ ಆತಂಕ ಸೃಷ್ಟಿಸಿರುವ ಮಂಗನ ಕಾಯಿಲೆ ತಡೆಗೆ ಹೊಸ ಔಷಧವೊಂದು ಸಿದ್ಧವಾಗಿದೆ. ಕಾಯಿಲೆ ಹರಡೋದನ್ನು ತಡೆಯಲು ಮದ್ದು ಕಂಡು ಹಿಡಿಯುವಲ್ಲಿ ಯುವಕನೊಬ್ಬ ಯಶಸ್ವಿಯಾಗಿದ್ದು, ಆಯುಷ್‌ ಇಲಾಖೆ ಪ್ರಮಾಣ ಪತ್ರ ದೊರೆತರೆ ಹೊಸ ಮದ್ದು ಜನರಿಗೆ ಸಿಗುವ ಕಾಲ ದೂರವಿಲ್ಲ.
ಮಲೆನಾಡಿನ ಬಹುಮುಖ್ಯ ಬೆಳೆಯಾದ ಅಡಕೆಯಿಂದ ಚಹಾಪುಡಿ ಸೇರಿ ಹಲವು ಹೊಸ ವಸ್ತುಗಳನ್ನು ಕಂಡುಹಿಡಿದು ಸಫಲರಾಗಿರುವ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ನಿವೇದನ್‌ ನೆಂಪೆ ಈಗ ಮಂಗನಕಾಯಿಲೆ ತಡೆಗೆ ಔಷಧ ಕಂಡುಹಿಡಿದಿದ್ದಾರೆ.

ಉಣ್ಣೆ ಕಡಿತಕ್ಕೆ ತಡೆ: ಈ ಕಾಯಿಲೆ ಉಣ್ಣೆ (ಉಣುಗು) ಕಚ್ಚುವುದರಿಂದ ಹರಡಲಿದ್ದು, ಮನುಷ್ಯನಿಗೆ ಉಣ್ಣೆ ಕಚ್ಚುವುದನ್ನು ತಡೆದರೆ ರೋಗ ಹರಡಲು ಸಾಧ್ಯವೇ ಇಲ್ಲ. ಉಣ್ಣೆ ಕಚ್ಚದಂತೆ ತಡೆಯಲು ಈಗಾಗಲೇ ಆರೋಗ್ಯ ಇಲಾಖೆಯಿಂದ ಡಿಎಂಪಿ ಎಣ್ಣೆ 
ಕೊಡಲಾಗುತ್ತಿದೆ. ಆದರೆ ಇದರ ಲಭ್ಯತೆ ಹಾಗೂ ಪರಿಣಾಮಗಳು ವ್ಯತಿರಿಕ್ತವಾಗಿರುವುದರಿಂದ ಬಳಕೆ ಪ್ರಮಾಣ ಕಡಿಮೆ. ಅನಿವಾರ್ಯವಾಗಿ ಬಳಸಿದರೂ ಚರ್ಮದ ಸಮಸ್ಯೆ, ಇತರೆ ವ್ಯಾಧಿಗಳು ಕಾಣಿಸಿಕೊಳ್ಳುವುದರಿಂದ ಜನ ಭಯದಿಂದಲೇ ಬಳಸುತ್ತಾರೆ. ಇದನ್ನು ಅರಿತ ಯುವಕ ಗಿಡಮೂಲಿಕೆಗಳಿಂದ ಔಷಧ (ಆಯಿಂಟ್‌ಮೆಂಟ್‌) ತಯಾರಿಸಿ ಅದನ್ನು ಬಳಸಿ ಯಶಸ್ವಿಯಾಗಿದ್ದಾನೆ.

ಏನಿದು ಮದ್ದು ?: ಥೈಮೋಕ್ವಿನನ್‌(thymoquinone) ಎಂಬ ಔಷಧಿ ಉಣ್ಣೆಯನ್ನು ಹತ್ತಿರಕ್ಕೆ ಬರದಂತೆ ತಡೆಯಲಿದೆ. ಈ ಥೈಮೋಕ್ವಿನನ್‌ ಎಂಬ ಔಷಧಿ ಮಲೆನಾಡು ಭಾಗದಲ್ಲಿ ಸಿಗುವ ಕಪ್ಪು ಜೀರಿಗೆ ಸಂಸ್ಕರಿಸಿದರೆ ಸಿಗಲಿದೆ. ಇದರ ಬಗ್ಗೆ ಕಾಲೇಜು
ದಿನಗಳಲ್ಲೇ ಸಂಶೋಧನೆ ನಡೆಸಿದ್ದ ನಿವೇದನ್‌ ಈಬಾರಿ ಮಹಾಮಾರಿ ಮಂಗನಕಾಯಿಲೆ ಆರ್ಭಟ ಹೆಚ್ಚಾಗುತ್ತಿದ್ದಂತೆ ಮತ್ತೆ ಪರೀಕ್ಷೆಗಿಳಿದು ಪ್ರಾಥಮಿಕ ಹಂತದಲ್ಲಿ ಪಾಸಾಗಿದ್ದಾನೆ. ಕಪ್ಪು ಜೀರಿಗೆ citronella (ಥೈಮೋಕ್ವಿನನ್‌) ಜತೆ ಮಾಮೂಲಿ ಜೀರಿಗೆಯನ್ನು
ಸಂಸ್ಕರಿಸಿ ಇದಕ್ಕೆ ಬಳಸಲಾಗುತ್ತಿದೆ. ಜೆಲ್‌ ರೂಪದಲ್ಲಿ ಇರುವ ಅದನ್ನು ಮೈ, ಕೈಗೆ ಸವರಿಕೊಳ್ಳಬಹುದಾಗಿದೆ. 

ಸೊಳ್ಳೆಗೂ ಮದ್ದು: ಸರಕಾರಿ ಆಸ್ಪತ್ರೆಯಲ್ಲಿ ಕೊಡುತ್ತಿರುವ ಡಿಎಂಪಿ ಆಯಿಲ್‌ ಮೂಲತಃ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಬಳಕೆಯಾಗುತ್ತಿತ್ತು. ಇದನ್ನು ಉಣ್ಣೆಗಳ ನಿಯಂತ್ರಣಕ್ಕೂ ಬಳಸಲಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಯುವಕ ಉಣ್ಣೆ ಜತೆ
ಸೊಳ್ಳೆಗಳನ್ನೂ ನಿಯಂತ್ರಿಸಲು ಅದಕ್ಕೆ ಸಿಟ್ರೋನೆಲ್ಲ (ಸೊಳ್ಳೆಗಳನ್ನು ದೂರವಿಡುವ ಎಣ್ಣೆ) ಮಿಕ್ಸ್‌ ಮಾಡಿದ್ದಾನೆ. ಸಿಟ್ರೋನೆಲ್ಲ ಎಣ್ಣೆಯು ನೈಸರ್ಗಿಕವಾಗಿ ಸಿಗುವ ಹುಲ್ಲೆಣ್ಣೆಯಿಂದ ಸಂಸ್ಕರಿತವಾದದ್ದು.

ಸಂಶೋಧನೆಯಲ್ಲಿ ಯಶಸ್ವಿ: ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ನಿವೇದನ್‌ ನೆಂಪೆ ಕಾಲೇಜು ದಿನಗಳಲ್ಲಿ ಮಲೆನಾಡನ್ನು ಬಾ ಧಿಸುತ್ತಿರುವ ಮಂಗನ ಕಾಯಿಲೆ, ಹಂದಿಗೋಡು ಕಾಯಿಲೆ ಬಗ್ಗೆ ಸಂಶೋಧನೆ ಕೈಗೊಂಡು ಸ್ವಲ್ಪಮಟ್ಟಿನ ಯಶಸ್ಸು ಕಂಡಿದ್ದರು. ಈ ವರ್ಷ ಹಳೆ ಸಂಶೋಧನೆಗಳಿಗೆ ಮರುಚಾಲನೆ ನೀಡಿ ಯಶಸ್ಸು ಕಂಡಿದ್ದಾರೆ. ಮನೆಯ ಹಿರಿಯರು ಹೇಳುತ್ತಿದ್ದ ವಿಷಯಗಳೇ ಇವರ ಸಂಶೋಧನೆಗೆ ಸ್ಫೂರ್ತಿಯಾಗಿವೆ. ಅಲ್ಲದೇ ಥೈಮೋಕ್ವಿನನ್‌ ಔಷಧದ ಬಗ್ಗೆ ಈಗಾಗಲೇ ಸಾವಿರಾರು ಸಂಶೋಧನೆಗಳಾಗಿವೆ. ಇದನ್ನು ನೇರವಾಗಿ ತಿನ್ನಬಹುದು. ಮುಖಕ್ಕೂ ಹಚ್ಚಬಹುದು ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುತ್ತಾರೆ ನಿವೇದನ್‌.

ಮಲೆನಾಡಿನ ಕೆಲ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಬಗ್ಗೆ ಹೆಚ್ಚಿನ ಸಂಶೋಧನೆಗಳಾಗಿಲ್ಲ. ವೈರಸ್‌ ವಿರುದಟಛಿ ಔಷಧಿ ಕಂಡುಹಿಡಿಯುವಷ್ಟು ನಮ್ಮಲ್ಲಿ ಪರಿಕರಗಳಿಲ್ಲ. ಉಣ್ಣೆ ಮೂಲಕ ಹರಡುವ ಕಾಯಿಲೆ ಆಗಿರುವುದರಿಂದ ಅದು ಕಡಿಯದಂತೆ ಮಾಡಲು ಔಷಧ ಕಂಡುಹಿಡಿಯಲಾಗಿದೆ. ಆಯುಷ್‌ ಇಲಾಖೆ ಅನುಮತಿ ಕೊಟ್ಟರೆ ಉಚಿತವಾಗಿ ವಿತರಿಸಲಾಗುವುದು.
● ನಿವೇದನ್‌ ನೆಂಪೆ, ಯುವ ವಿಜ್ಞಾನಿ

● ಶರತ್‌ ಭದ್ರಾವತಿ

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.