ಬಿಎಸ್ವೈ ರಾಜಕಾರಣಕ್ಕೆ ಅಂಟಿದ ವಿಷ: ಕಾಗೋಡು
Team Udayavani, Oct 21, 2018, 6:15 AM IST
ತೀರ್ಥಹಳ್ಳಿ: ಈ ಉಪ ಚುನಾವಣೆ ಯಾರಿಗೂ ಬೇಡವಾಗಿತ್ತು. ಆದರೆ, ಬಿಜೆಪಿಯ ಅಪ್ಪ-ಮಗನಿಂದಾಗಿ ಈ ಚುನಾವಣೆ ಬರುವಂತಾಗಿದೆ. ರಾಜಕಾರಣಕ್ಕೆ ವಿಷವಾಗಿರುವ ಈ ಅಪ್ಪ-ಮಗನಿಗೆ ಈ ಬಾರಿ ಸರಿಯಾದ ಪಾಠ ಕಲಿಸಬೇಕಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ವಿರುದ್ಧ ಕಿಡಿಕಾರಿದರು. ಮತದಾರ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾಲೀಕನಿದ್ದಂತೆ. ಈ ಚುನಾವಣೆ ಯಾರಿಗೂ ಬೇಕಾಗಿರಲಿಲ್ಲ. ಆದರೆ, ಅಪ್ಪ-ಮಕ್ಕಳ ಭ್ರಷ್ಟ ಹಣದಿಂದ ಚುನಾವಣೆ ಬರುವಂತಾಗಿದೆ. ಯಡಿಯೂರಪ್ಪ ಚುನಾವಣೆಯನ್ನು ಸಂತೆಯ ಸಾಮಾನೆಂದು ಭಾವಿಸಿದ್ದಾರೆ.
ರಾಜಕಾರಣವನ್ನು ವ್ಯಾಪಾರೀಕರಣ ಮಾಡಲು ಹೊರಟಿರುವ ಯಡಿಯೂರಪ್ಪ, ಹಿಂದೆ ಸಂಸದರಾಗಿದ್ದಾಗ ಈ ಕ್ಷೇತ್ರಕ್ಕೆ ಏನು ಮಾಡಿದ್ದರು. ನಂತರ ಸಂಸದರಾದ ಅವರ ಮಗ ರಾಘವೇಂದ್ರ ಕ್ಷೇತ್ರಕ್ಕೆ ಮಾಡಿದ್ದಾದರೂ ಏನು ಎಂಬುದನ್ನೆಲ್ಲ ಜನ ಅರಿಯಬೇಕಿದೆ ಎಂದರು. ಜಿಲ್ಲೆಯ ಜನತೆ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಯಡಿಯೂರಪ್ಪ ಮತ್ತು ರಾಘವೇಂದ್ರನನ್ನು ಬುಡಸಮೇತ ಕಿತ್ತು, ರಾಜಕಾರಣಕ್ಕೆ ಅಂಟಿದ ವಿಷವನ್ನು ತೆಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK