ನದಿದಾಟಲು ಹೋಗಿ ತುಂಗಾನದಿ ಪಾಲದ ರಾವಣ!
Team Udayavani, Oct 29, 2021, 3:17 PM IST
ತೀರ್ಥಹಳ್ಳಿ: ದೀಪಾವಳಿ ಹಬ್ಬದ ಅಂಗವಾಗಿ ಹಾವೇರಿ ಜಿಲ್ಲೆಯ ಕನಕಪುರ ಮೂಲದ ರಾವಣ ವೇಷದಾರಿ ಶಿರಸಿ,ಸಿದ್ದಪುರ ಮಂಗಳೂರು ಸೇರಿದಂತೆ ಅನೇಕ ಊರುಗಳಲ್ಲಿ ವೇಷ ಧರಿಸಿ ಹೊಟ್ಟೆ ಪಾಡಿಗೆ ತಿರುಗಿ ತೀರ್ಥಹಳ್ಳಿಗೆ ಬಂದಿದ್ದ ಹಕ್ಕಿ ಪಿಕ್ಕಿ ಜನಾಂಗದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತುಂಗಾ ನದಿಯ ಜಯಚಾಮರಾಜೇಂದ್ರ ಕಮಾನು ಸೇತುವೆ ಪಕ್ಕ ಸಿನಿಮೀಯ ರೀತಿಯಲ್ಲಿ ನೀರಿಗಿಳಿದು ನದಿಯಲ್ಲಿ ನಾಪತ್ತೆಯಾದ ಘಟನೆ ಗುರುವಾರ ಸಂಜೆ ನಾಲ್ಕು ಘಂಟೆಗಳ ಅವಧಿಯಲ್ಲಿ ನಡೆದಿದ್ದು, ಆತನಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:- ಜೊತೆಗಿರದ ಜೀವ ಎಂದಿಗೂ ಜೀವಂತ…! ‘ಕೋಟ್ಯಾಧಿಪತಿ’ಯನ್ನು ಕಳೆದುಕೊಂಡ ಕರುನಾಡು
ರಾಮ, ಲಕ್ಷ್ಮಣ, ಆಂಜನೇಯ, ರಾವಣ ವೇಷ ಹಾಕಿ ಕೈಯಲ್ಲಿ ಶೃತಿ ಪೆಟ್ಟಿಗೆ ಹಿಡಿದು ತಮ್ಮದೇ ಕಂಠಸಿರಿಯಲ್ಲಿ ಹಾಡುತ್ತ ದಸರಾದಲ್ಲಿ ಉತ್ತಮ ಕಲೆ ಬಿಂಬಿಸುವ ಮೂಲಕ ಈ ಜೋಡಿ ಗಮನ ಸೆಳೆದಿತ್ತು.
ಕುಡಿದ ಮತ್ತಿನಲ್ಲಿ ರಾವಣನ ಸ್ಟೈಲ್ ಅಲ್ಲಿ ನದಿಗೆ ಹಾರಿದ!
ಪಟ್ಟಣದ ಕುರುವಳ್ಳಿ ಗಣಪತಿ ಪೆಂಡಲ್ ಹಿಂಬದಿಯ ಮರಳು ದಂಡೆಬಳಿಯ ತುಂಗಾ ನದಿಯಲ್ಲಿ ಈ ಘಟನೆ ನಡೆದಿದ್ದು, ರಾವಣನ ವೇಷಧಾರಿ ಗೋವಿಂದ 45 ವರ್ಷ ವ್ಯಕ್ತಿ ಪಕ್ಕದ ಸೇತುವೆ ಮೇಲೆ ನಡೆದುಕೊಂಡು ಹೊಗುವಬದಲು ಕುಡಿದ ಮತ್ತಲ್ಲಿ ರಾವಣನ ವೇಷದಲ್ಲೇ ನದಿದಾಟಲು ಆಳದ ಅರಿವು ಇಲ್ಲದೆ ಹೊಳೆಗೆ ಇಳಿದಿದ್ದಾನೆ. ಈತ ಸ್ಥಳೀಯ ಮದ್ಯದ ಅಂಗಡಿಯಲ್ಲಿ ಹೇಳಿ ಬಂದಿದ್ದು, ಹೊಳೆ ದಂಡೆಯಲ್ಲೂ ನಾನು ರಾವಣನ ರೀತಿ ಹೊಳೆ ದಾಟುತ್ತೇನೆ ನೋಡಿ ಎಂದಿದ್ದಾನೆ. ಬಳಿಕ ನೀರಿಗೆ ಇಳಿದು ನಾಪತ್ತೆಯಾಗಿದ್ದಾನೆ.
ಶೋಧ ಕಾರ್ಯ
ತೀರ್ಥಹಳ್ಳಿ ಪೊಲೀಸರು, ಅಗ್ನಿ ಶಾಮಕ ದಳದವರು ಗುರುವಾರ ದಿಂದ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದು ಆದರೆ ಶುಕ್ರವಾರ ಮಧ್ಯಾಹ್ನ ಆದರು ಇನ್ನು ಮೃತದೇಹ ಪತ್ತೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ