ಖುಷಿ, ಸಂಭ್ರಮದ ಬೌಂಡರಿ-ಸಿಕ್ಸರ್‌!

ಕಲಗಾರಿನಲ್ಲಿ ಹವ್ಯಕರ ಹೊನಲು- ಬೆಳಕಿನ ಕ್ರಿಕೆಟ್‌ ಹಬ್ಬ | ಕಿರಿಯರನ್ನೂ ಮೀರಿಸಿದ ಹಿರಿಯರು

Team Udayavani, Feb 24, 2020, 5:37 PM IST

24-February-31

ಸಾಗರ: ಸಾಗರದಲ್ಲಿ ನಾಡಿನ ದೊಡ್ಡ ಜಾತ್ರೆಗಳಲ್ಲೊಂದಾದ ಮಾರಿಕಾಂಬಾ ಜಾತ್ರೆಯ ಹಿನ್ನೆಲೆಯಲ್ಲಿ ನಗರದೊಳಗೆ ಜನರ ಗೌಜು, ವಾಹನಗಳ ಅಬ್ಬರದಲ್ಲಿ ಟ್ರಾಫಿಕ್‌ ಜಾಮ್‌, ಹೆಜ್ಜೆಗಳ ಭಾರಕ್ಕೆ ನಲುಗಿ ಭೂಮಿಯಿಂದ ಎದ್ದ ಧೂಳಿನ ಹಬ್ಬದ ವಾತಾವರಣಕ್ಕೆ ಭಿನ್ನವಾಗಿ ಭಾನುವಾರ ಸಂಜೆ ತಾಲೂಕಿನ ತಾಳಗುಪ್ಪ ಸಮೀಪದ ಕಲಗಾರಿನಲ್ಲಿ ಆಹ್ಲಾದಕರ ಚುಮುಚುಮು ಚಳಿ ವಾತಾವರಣದಲ್ಲಿ ಸಮುದಾಯ, ಸಂಬಂಧಗಳನ್ನು ಗಟ್ಟಿ ಮಾಡುವ ಹೊನಲು ಬೆಳಕಿನ ಕ್ರಿಕೆಟ್‌ ಹಬ್ಬ ನಡೆದಿತ್ತು. ಬೇರೆ ಬೇರೆ ಊರುಗಳಲ್ಲಿ ಉದ್ಯೋಗ ನಿಮಿತ್ತ ವಾಸ್ತವ್ಯ ಹೂಡಿದ ಈ ಭಾಗದ ಹವ್ಯಕ ಸಮುದಾಯದ ಯುವಕರೂ ಸೇರಿದಂತೆ ಊರಿನ ಹಿರಿಯರು, ಕಿರಿಯರು ಒಟ್ಟಾಗಿ ಕ್ರಿಕೆಟ್‌ ಆಡಿದರು.

ಬೌಲಿಂಗ್‌, ಬ್ಯಾಟಿಂಗ್‌ ಜೊತೆಗೆ ಭಾಷಣಗಳೂ ಇದ್ದವು. ಅಂತಿಮವಾಗಿ ರುಚಿಕರವಾದ ಊಟ ಕೂಡ ಕಾದಿತ್ತು. ಕಲಗಾರಿನಲ್ಲಿ ನಡೆದ ದ್ವಿತೀಯ ವರ್ಷದ ಹವ್ಯಕ ಕ್ರಿಕೆಟ್‌ ಹಬ್ಬದಲ್ಲಿ ಹಿರಿಯರಾದ ಸೀತಾರಾಮ ಹೆಗಡೆ, ಮೋಹನ ಹೆಗಡೆ, ಜಯಕೃಷ್ಣ ಜಿ.ಎಸ್‌. ಮೊದಲಾದವರು ಬ್ಯಾಟು ಬೀಸಿ, ಬೌಲ್‌ ಮಾಡುವ ಮೂಲಕ ಹುರಿದುಂಬಿಸಿದರು. ಹಿರಿಯರು ಮತ್ತು ಕಿರಿಯರ ನಡವೆ ಪ್ರತ್ಯೇಕವಾಗಿ ಪ್ರದರ್ಶನ ಪಂದ್ಯವೇರ್ಪಡಿಸಿದಾಗಲೂ ಹಿರಿಯರೇ ಗೆದ್ದರು. ಮ್ಯಾಚ್‌ ಫಿಕ್ಸಿಂಗ್‌ ಆಗಿತ್ತೇ ಎಂಬ ಅನುಮಾನಕ್ಕೆ ಆಸ್ಪದ ನೀಡುವಂತೆ ಸೋತ ಕಿರಿಯರೇ ಹಿರಿಯರ ಜಯವನ್ನು ಆಚರಿಸಿ ಖುಷಿಯನ್ನು ಇಮ್ಮಡಿಗೊಳಿಸಿದರು.

ಬೌಲಿಂಗ್‌ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದ ಹಿರಿಯ ತಬಲ ಮತ್ತು ವೇಣುವಾದಕ ನಟೇಶ್‌ ಹೆಗಡೆ, ಕೇವಲ ಯುವಜನರಿಗೆ ಮಾತ್ರ ಸೀಮಿತವಾಗದೆ ಸುತ್ತಮುತ್ತಲಿನ ಎಲ್ಲ ಪೋಷಕರಿಗೂ ಸಹ ಅವಕಾಶವಿಟ್ಟಿರುವುದು ವಿನೂತನ ಕ್ರಮ. ವರ್ಷಕ್ಕೊಮ್ಮೆಯಾದರೂ ಹೀಗೆ ಊರಿನ ಮಕ್ಕಳು ಒಂದೆಡೆ ಸೇರಿ ಆಡಿ ನಕ್ಕು ನಲಿಯುವುದರಿಂದ ದೂರವಾಗುವ ಮನಸ್ಸುಗಳು ಒಂದಾಗುತ್ತವೆ. ಹಾಡು, ಹರಟೆ, ಹರ್ಷಗಳ ಸಮ್ಮಿಳನವಾಗುವ ಇಂತಹ ಹಬ್ಬಗಳು ಕೋಟಿ ರೂ. ಕೊಟ್ಟರೂ ಸಿಗದಂತವು ಎಂಬುದನ್ನು ನಾವು ಮರೆಯಬಾರದು ಎಂದರು.

ಗ್ರಾಮದ ಹಿರಿಯ ಛಾಯಾಗ್ರಾಹಕ ಆರ್‌. ಎಂ. ಹೆಗಡೆ ಮಾತಿನ ಬ್ಯಾಟ್‌ ಬೀಸಿ, ತಾಲೂಕಿನಲ್ಲಿ ಹವ್ಯಕ ಸಮುದಾಯದ ಬಹುತೇಕ ಯುವಕರು ಉದ್ಯೋಗ ನಿಮಿತ್ತ ಹಾಗೂ ಭವಿಷ್ಯದ ವಿವಾಹ ವಿಚಾರಗಳಲ್ಲಿ ಪರ ಊರಿನಲ್ಲಿ ಬದುಕು ಕಟ್ಟಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹಳ್ಳಿಗಳಲ್ಲಿ ಕೇವಲ ಹಿರಿಯರು ಅನಿವಾರ್ಯ ಕಾರಣಗಳಿಂದ ಉಳಿದು ಊರುಗಳು ವೃದ್ಧಾಶ್ರಮದ ಅನುಭವ ಬರುವಂತೆ ಆಗುತ್ತಿದೆ. ಈ ನಿಟ್ಟಿನಲ್ಲಿ ಈ ರೀತಿಯ ಚಟುವಟಿಕೆ ಊರಿನವರ ಸೋರಿಹೋಗುತ್ತಿರುವ ಉತ್ಸಾಹವನ್ನು ಮರಳಿ ತರುವಂತೆ ಆಗಿದೆ ಎಂದು ಸ್ಟ್ರೆಟ್‌ ಡ್ರೈವ್‌ ಮಾಡಿದರು.

ರಾತ್ರಿ 7-30ರಿಂದ ಬೆಳಗಿನ 6 ಗಂಟೆಯವರೆಗೆ 8 ತಂಡಗಳು ಸತತವಾಗಿ ಒಬ್ಬರ ಮೇಲೊಬ್ಬರು ಹೋರಾಡಿ ಅಂತಿಮವಾಗಿ ಬಚ್ಚಗಾರು ತಂಡವು ಹಬ್ಬದ ಪ್ರಥಮ ಹಾಗೂ ಹೂವಿನ ಮನೆ ತಂಡವು ದ್ವಿತೀಯ ಉತ್ತಮ ತಂಡಗಳಾಗಿ ಹೊರಹೊಮ್ಮಿದವು. ಅತ್ಯುತ್ತಮ ದಾಂಡುಗಾರನಾಗಿ ಸಚಿನ್‌ ತಲವಾಟ, ಅತ್ಯುತ್ತಮ ಎಸೆತಗಾರನಾಗಿ ಮಂಜುನಾಥ ಕೆ.ಎಸ್‌. ದೊಂಬೆ ಪ್ರದರ್ಶನ ನೀಡಿದರು.

ನಿರ್ಣಾಯಕರಾಗಿ ಬಿ.ಆರ್‌. ದೇವಪ್ಪ ಮತ್ತು ಪುಟ್ಟಸ್ವಾಮಿ ಕಾರ್ಯನಿರ್ವಹಿಸಿದರು. ಆರಂಭಿಕ ಸಾಂಕೇತಿಕ ಸಮಾರಂಭದಲ್ಲಿ ಗಿರಿಧರ ಟಿ. ಸ್ವಾಗತಿಸಿದರು. ಪ್ರಶಾಂತ ಕೆ.ಜಿ. ಪ್ರಾಸ್ತಾವಿಕ ನುಡಿಗಳನ್ನು ಆಡಿದರೆ ಹಿರಿಯ ಕ್ರಿಕೆಟ್‌ ಆಟಗಾರ ಮತ್ತು ಪಂಡಿತ್‌ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ನಾಗೇಂದ್ರ ಪಂಡಿತ್‌, ಸಾಗರ ನಗರಸಭಾ ಸದಸ್ಯ ಗಣೇಶ ಪ್ರಸಾದ, ತಾಳಗುಪ್ಪದ ಯುವ ಉದ್ಯಮಿ, ಕೃಷಿಕ ಗಣೇಶ ಹೆಗಡೆ ಸಂಭ್ರಮಕ್ಕೆ ಸಾಕ್ಷಿಯಾದರು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.