ಎರಡು ವರ್ಷದ ಬಳಿಕ ಕೆಳದಿಯ ಕೆರೆಯಲ್ಲಿ ಮೀನು ಶಿಕಾರಿ : ಗಮನ ಸೆಳೆದ ಕಾಟ್ಲ ಮೀನು
Team Udayavani, May 15, 2022, 3:52 PM IST
ಸಾಗರ: ಕೊರೊನಾ ಲಾಕ್ಡೌನ್ನಿಂದ ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ಕೆರೆ ಬೇಟೆ ನಡೆದಿರದ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಂತರ ಈ ಬಾರಿ ಮಲೆನಾಡಿನಾದ್ಯಂತ ಕೆರೆಗಳಲ್ಲಿ ಮೀನು ಹಿಡಿಯುವ ಕೆರೆ ಬೇಟೆ ವಿಜೃಂಭಣೆಯಿಂದ ನಡೆಯುತ್ತಿದ್ದು ಕೆಳದಿಯ ಕೆರೆಬೇಟೆಯಲ್ಲಿ 8 ಕೆಜಿ ಗಾತ್ರದ ಕಾಟ್ಲ ಮೀನು ಸೆರೆ ಸಿಕ್ಕು ಗಮನ ಸೆಳೆಯಿತು.
ತಾಲೂಕಿನ ಕೆಳದಿಯ ಮಠದ ಕೆರೆಯಲ್ಲಿ ಕೆರೆ ಬೇಟೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ನೀರಿಗಿಳಿದು ಮೀನು ಹಿಡಿಯಲು ಮುಂದಾದರು. ಹೆಂಗಸರು ಮಂಕರಿ ಹಿಡಿದು ಗೋರಿ, ಸಣ್ಣ ಮೀನು ಹಿಡಿದರೆ, ಪುರುಷರು ಬಿದಿರಿನಿಂದ ತಯಾರಿಸಿದ ಕುಣಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಮೀನುಗಳನ್ನು ಬೇಟೆಯಾಡಿದರು. ಮುರಗೋಡು, ಕುಚ್ಚಿ, ಚೇಳು, ಕಾಟ್ಲ ಅಲ್ಲದೇ ದೊಡ್ಡ ದೊಡ್ಡ ಗಾತ್ರದ ಮೀನುಗಳನ್ನು ಹಿಡಿದರು. ಇಡೀ ಊರಿನ ಜನರು ಮೀನು ಹಿಡಿದು ಸಂಭ್ರಮಿಸಿದರು.
ಕೆರೆಯಲ್ಲಿ ಒಂದು ಕಡೆ ಮೀನು ಸಿಕ್ಕ ಖುಷಿ, ಇನ್ನೊಂದು ಕಡೆ ಎಲ್ಲರೂ ಒಟ್ಟಿಗೆ ಓಡಾಡುವಾಗ ಗದ್ದಲವೋ ಗದ್ದಲ. ಕೆರೆಯಲ್ಲಿ ಭಾರಿ ಗಾತ್ರದ ಮೀನುಗಳು ಕೂಡ ಬಲೆಗೆ ಸಿಕ್ಕವು. ಮೀನು ಹಿಡಿದ ಮೇಲೆ ಅದರಲ್ಲಿ ಸಾಂಬಾರು ತಯಾರಿಸಿ ಅಕ್ಕಿ ರೊಟ್ಟಿ ಸುಟ್ಟು ಹತ್ತಿರದ ಸಂಬಂಧಿಕರು, ಅಳಿಯಂದಿರನ್ನು ಆಹ್ವಾನಿಸಿ ಔತಣ ಏರ್ಪಡಿಸುತ್ತಾರೆ. ಕೆರೆಬೇಟೆಯಲ್ಲಿ ಸ್ಥಳೀಯರಿಗೆ, ಒಂದು ಮನೆಯಿಂದ ಒಬ್ಬೊಬ್ಬರಿಗೆ ಮಾತ್ರ ಅವಕಾಶವಿತ್ತು. ಕೆರೆಬೇಟೆಯಲ್ಲಿ 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಪ್ರತಿಯೊಬ್ಬರು ಕೆರೆ ಮೀನನ್ನು ಹಿಡಿದು ಅದನ್ನು ವಿವಿಧ ಆಹಾರ ಪದಾರ್ಥಗಳನ್ನು ಮಾಡಿ ತಿನ್ನಬೇಕು ಎನ್ನುವುದು ಕೆರೆ ಬೇಟೆಯ ಉದ್ದೇಶ ಎಂದು ಪ್ರಗತಿಪರ ಕೃಷಿಕ ರಮೇಶ್ ಈ. ತಿಳಿಸಿದರು.
ಇದನ್ನೂ ಓದಿ : ರಮ್ಯಾ ವಿರುದ್ಧ ಸೂಕ್ತ ಕ್ರಮಕ್ಕೆ ಗೋಪಾಲಕೃಷ್ಣ ಬೇಳೂರು ಒತ್ತಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ