ಕಾಗೋಡು ಹೋರಾಟಕ್ಕೆ ಕೊಳಗವೇ ಪ್ರೇರಣೆ
Team Udayavani, Nov 4, 2021, 6:26 PM IST
ಸಾಗರ: ಅಂದು ಕಾಗೋಡಿನಲ್ಲಿ ಭೂ ಹೋರಾಟಆರಂಭವಾಗಲು ಕೊಳಗ ಕಾರಣವಾಯಿತು.ಕಾಗೋಡಿನ ಕೆ.ಜಿ. ಒಡೆಯರ್ ಹಾಗೂಗಣಪತಿಯಪ್ಪ ಆತ್ಮೀಯ ಸ್ನೇಹಿತರಾಗಿದ್ದರು.
ಸ್ವಾತಂತ್ರ ಸತ್ಯಾಗ್ರಹದಲ್ಲಿ ಒಟ್ಟಿಗೆ ಭಾಗವಹಿಸಿದ್ದರು.ಒಡೆಯರ್ ಬಗ್ಗೆ ತಮ್ಮ ಜೀವಿತಾವಧಿ ವರೆಗೂಅಪಾರ ಗೌರವ ಇಟ್ಟುಕೊಂಡಿದ್ದ ಗಣಪತಿಯಪ್ಪ ಅಂದಿನ ರೈತ ಪರ ಹೋರಾಟದ ನಾಯಕತ್ವವಹಿಸಲು ಕಾರಣವಾಗಿದ್ದೇ ಕೊಳಗ ಎಂದು ಆನಂದಪುರ ಮುರುಘಾಮಠದ ಮಲ್ಲಿಕಾರ್ಜುನಮುರುಘಾರಾಜೇಂದ್ರ ಸ್ವಾಮೀಜಿವಿಶ್ಲೇಷಿಸಿದರು.ತಾಲೂಕಿನ ಜಂಬಗಾರಿನಲ್ಲಿ ಡಾ|ಎಚ್.ಗಣಪತಿಯಪ್ಪ ಸ್ಮಾರಕ ಭೂಮಣ್ಣಿ ಪಾರ್ಕ್ನಾಮಫಲಕ ಅನಾವರಣಗೊಳಿಸಿ ಮಾತನಾಡಿದಅವರು, ಗಣಪತಿಯಪ್ಪ ನಮ್ಮ ಮಠಕ್ಕೆ ಬಂದಾಗಅನೇಕ ವಿಚಾರಗಳ ಸಂಘರ್ಷ ನಡೆಯುತ್ತಿತ್ತು.
ಅದರಲ್ಲಿ ಭೂ ಹೋರಾಟದ ಬಗ್ಗೆ ನನ್ನಲ್ಲಿ ಚರ್ಚೆಮಾಡುತ್ತಿದ್ದರು. ಹೋರಾಟದ ನಾಯಕತ್ವವನ್ನುವಿದ್ಯಾವಂತ ವಿಚಾರವಾದಿಯಾಗಿದ್ದ ಗಣಪತಿಯಪ್ಪ ಉಳುವವನೇ ಹೊಲದೊಡೆಯ ಎಂಬವಿಚಾರಕ್ರಾಂತಿಯ ಮೂಲಕ ವಹಿಸಿದ್ದು, ಅಂದಿನರೈತರಿಗೆ ಭೂಮಿಯ ಹಕ್ಕು ಬೇಕೆಂಬ ಆಶಯವೂಅಹಿಂಸಾ ವಾದಿ ಹೋರಾಟದ ರೂಪ ತಾಳಿತುಎಂದು ನೆನಪಿಸಿಕೊಂಡರು.ಬಸವಣ್ಣ ನಡೆಸಿದ ಸಮಾನತೆಯ ಸಮಾಜನಿರ್ಮಾಣದ ಪರಿಕಲ್ಪನೆಗೆ ಸಮೀಪವಾದವಿಷಯವೇ ಹೊರತು ಗಣಪತಿಯಪ್ಪ ಯಾವುದೇಜಾತಿ ಮತಗಳ ವಿರುದ್ಧ ನಡೆಸಿದ ಹೋರಾಟವಲ್ಲ.ಇದೇ ಪ್ರಕಾರ ಅನೇಕ ವಿಚಾರಗಳನ್ನುವಿವರಿಸುತ್ತಿದ್ದ ಗಣಪತಿಯಪ್ಪನವರು, ಮಠಕ್ಕೆಆತ್ಮೀಯರಾಗಿದ್ದರು.
ಇಂತಹ ಆದರ್ಶಗಳನ್ನುಮುಂದಿಟ್ಟುಕೊಂಡ ಅವರ ಪುತ್ರ ಕೃಷ್ಣಗಣಪತಿಯಪ್ಪ ಸಹ ತಂದೆಯವರ ಆದರ್ಶಗಳನ್ನುಕ್ರೋಢೀಕರಿಸಿಕೊಂಡು ತಾವೂ ಇಂತಹಸಮಾಜಮುಖೀ ಕೆಲಸಗಳನ್ನು ಮಾಡುತ್ತಿರುವುದುಸಂತೋಷದ ವಿಷಯ ಎಂದು ಹೇಳಿದರು.ಕೊಳಗ ಕೃತಿ ರಚಿಸಿದ ಹಿರಿಯ ಸಾಹಿತಿಡಾ|ನಾ.ಡಿಸೋಜಾ ಅವರಿಗೆ ಆತ್ಮಭೂಷಣ ಪ್ರಶಸ್ತಿಪ್ರದಾನ ಮಾಡಿ ಗೌರವಿಸಲಾಯಿತು. ವಿಶೇಷಆಹ್ವಾನಿತರಾದ ವಿದ್ವಾನ್ ಗಜಾನನ ಜೋಯಿಸ್ಅವರನ್ನು ಸನ್ಮಾನಿಸಲಾಯಿತು.
ಕಳೆದ ಸಾಲಿನಆತ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಿಥಿಲಾ, ಭೂಮಣ್ಣಿಪಾರ್ಕ್ ಟ್ರಸ್ಟ್ ಗೌರವಾಧ್ಯಕ್ಷರಾದ ಮಂಜಮ್ಮಎಚ್. ಗಣಪತಿಯಪ್ಪ, ಸುರೇಶ್ ಗೌಡ, ಬರದಳ್ಳಿಲೋಕೇಶ್, ಲಲಿತಾ ಹೊಯ್ಸಳ, ವಿಜಯ ಕೃಷ್ಣಜಿ., ಪ್ರಜ್ವಲ್ ಕೆ., ಲೋಹಿಯಾ ಕೆ.ಎಚ್., ಆರ್.ಕೊಳಗಿ, ಕೋದಂಡ ಆರ್. ಇತರರು ಇದ್ದರು.ಶ್ರೀ ಜನ್ಯ ಮತ್ತು ಜಾನ್ಸಿ ನಿತ್ಯೋತ್ಸವ ಗೀತೆಹಾಡಿದರು. ಸವಿತಾ ಪ್ರಾರ್ಥಿಸಿ, ಶ್ರೀಕೃಷ್ಣ ಜಿ.ಸ್ವಾಗತಿಸಿ, ಪಂಚಮಿ ಸಾಗರ ನಿರೂಪಿಸಿ, ಅಂಬಿಕಾವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ