ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕ್ರಮ: ವೀಣಾ


Team Udayavani, Jan 2, 2019, 9:17 AM IST

1-january-12.jpg

ಸಾಗರ: ಮುಂಬರುವ ದಿನಗಳಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಸಾಗರದ ಕೆನೆಲ್‌ ಕ್ಲಬ್‌ ಹಾಗೂ ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ನಗರಸಭೆಯ ವ್ಯಾಪ್ತಿಯ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ವೀಣಾ ಪರಮೇಶ್ವರ್‌ ತಿಳಿಸಿದರು.

ಸಹ್ಯಾದ್ರಿ ಕೆನೆಲ್‌ ಕ್ಲಬ್‌, ಸಾಗರ ಪಶುಪಾಲನಾ ಇಲಾಖೆ ಮತ್ತು ಕನಾಟಕ ಪಶುವೈದ್ಯರ ಸಂಘ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ನಡೆದ ಮಲೆನಾಡು ಪೆಟ್‌ ಶೋ ಉದ್ಘಾಟಿಸಿ ಅವರು ಮಾತನಾಡಿದರು. ಮಾನವನ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾಯಿ ಸಾಕುವವರಿಗೆ ಪರವಾನಗಿ ನಿಯಮ ಹಾಗೂ ರೇಬಿಸ್‌ ಲಸಿಕೆ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.

ಪಶುಪಾಲನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ| ಟಿ.ಎನ್‌. ಸದಾಶಿವ ಇದ್ದರು. ಗೀತಾ ಶ್ರೀನಾಥ ಅಧ್ಯಕ್ಷತೆ ವಹಿಸಿದ್ದರು. ಡಾ| ಎನ್‌.ಎಚ್‌. ಶ್ರೀಪಾದ ರಾವ್‌ ನಿರೂಪಿಸಿದರು. ನಾಯಿಗಳ ಪ್ರದರ್ಶನ ಹಾಗೂ ಸ್ಪರ್ಧೆಗೆ ಮುನ್ನ ನಾಯಿಗಳ ಪಾಲನೆ, ಪೋಷಣೆ, ಗುಣಲಕ್ಷಣಗಳು, ರೇಬೀಸ್‌ ಮತ್ತು ತರಬೇತಿ ಬಗ್ಗೆ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಶ್ವಾನ ಪ್ರದರ್ಶನ: ಇದರಲ್ಲಿ 16 ವಿವಿಧ ತಳಿಯ 192 ನಾಯಿಗಳು ಭಾಗವಹಿಸಿದ್ದವು. ಶ್ವಾನ ಪ್ರಪಂಚದಲ್ಲಿಯೇ ಅತ್ಯಂತ ಆಕರ್ಷಕ ತಳಿಗಳಾದ ಗೋಲ್ಡನ್‌ ರಿಟ್ರೀವರ್‌ನಿಂದ ಹಿಡಿದು ದೈತ್ಯ ತಳಿಗಳಾದ ಗ್ರೇಟ್‌ ಡೇನ್‌, ಸೈಂಟ್‌ ಬರ್ನಾಡ್‌ ಗಮನ ಸೆಳೆದವು. ಲವಲವಿಕೆಯ ಲ್ಯಾಬ್ರಡಾರ್‌ ನಾಯಿಗಳ ಸಂಖ್ಯೆ ಹೆಚ್ಚಿತ್ತು. ಅಪರೂಪದ ತಳಿಗಳಾದ ಸೈಬೀರಿಯನ್‌ ಹಸ್ಕಿ, ಬೀಗಲ್‌, ಅಮೆರಿಕನ್‌ ಬುಲ್‌ ಡಾಗ್‌, ಬುಲ್‌ ಟೆರ್ರಿಯರ್‌, ಲಾಸಾ ಆಪ್ಸೋ, ಶಿಟ್ಟು, ಪಗ್‌, ಕಾಕರ್‌ಸ್ಪೇನಿಯಲ್‌ ಹಾಗೂ ಬಿಜಾಪುರದ ಮುಧೋಳ ಹೌಂಡ್‌ ತಳಿಗಳು ಶ್ವಾನ ಪ್ರೇಮಿಗಳ ಮನ ಸೆಳೆದವು. 

ಮುಖ್ಯ ತೀರ್ಪುಗಾರರಾಗಿ ಮೈಸೂರಿನ ಶ್ವಾನ ತಜ್ಞ ಡಾ| ಸಿ.ಎಸ್‌. ಅರುಣ್‌, ಡಾ| ಜಯರಾಮಯ್ಯ ಜೊತೆಗೆ ಡಾ| ಬಸವೇಶ್ವರ ಹೂಗಾರ್‌, ಡಾ| ಸುನೀಲ್‌ ಕುಮಾರ್‌ ಶಿಕಾರಿಪುರ ಸಹಕರಿಸಿದರು. ಡಾ|ಕೆ.ಎಂ.ನಾಗರಾಜ್‌ ನಾಯಿಗಳ ತಳಿ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಮೊದಲ ಬಾರಿಗೆ ಬೆಕ್ಕುಗಳ ಪ್ರದರ್ಶನ ಕೂಡ ನಡೆಯಿತು.

ಶ್ವಾನಮರಿ ವಿಭಾಗದಲ್ಲಿ ಚಾಂಪಿಯನ್‌ ಶಿಪ್‌ ಪ್ರಶಸ್ತಿಯನ್ನು ಹರೀಶ್‌ ವಿ. ಸಾಗರ ಅವರ ಜರ್ಮನ್‌ ಶೆಫರ್ಡ್‌ ತನ್ನದಾಗಿಸಿಕೊಂಡಿತು. ರನ್ನರ್‌ ಅಪ್‌ ಪ್ರಶಸ್ತಿಗಳನ್ನು ಅಕ್ಷಯ ಶಿರಸಿ ಅವರ ಗೋಲ್ಡನ್‌ ರಿಟ್ರೀವರ್‌ ಹಾಗೂ ಮಹೇಶ್‌ ಹೆಗಡೆ ಆವಿನಹಳ್ಳಿ ಅವರ ಲ್ಯಾಬ್ರಡಾರ್‌ ಪಡೆಯಿತು. ಶಂಕರ್‌ ಸಾಗರ್‌ ಅವರ ಶೀಡ್‌ದು ಮತ್ತು ಡಾ| ವಾಣಿಶ್ರೀ ಭಟ್‌ ಅವರ ನೈಜೀರಿಯಾದ ಲಾಸ್‌ ಆ್ಯಪ್ಸೋ ಸಮಾಧಾನಕರ ಬಹುಮಾನ ಪಡೆದವು.

ವಯಸ್ಕ ಶ್ವಾನ ವಿಭಾಗದಲ್ಲಿ ಸುಜನ್‌ ಸಿದ್ಧಾಪುರ ಅವರ ಜರ್ಮನ್‌ ಶೆಫರ್ಡ್‌ ಚಾಂಪಿಯನ್‌ ಪಟ್ಟ ಪಡೆದರೆ, ಕಲ್ಕೊಪ್ಪ ಚೈತನ್ಯ ಅವರ ಡಾಬರ್‌ ಮನ್‌ ಮತ್ತು ಸಾಗರದ ರವಿಗೌಡ ಅವರ ಲ್ಯಾಬ್ರಡಾರ್‌ ಮೊದಲಿನೆರಡು ರನ್ನರ್‌ ಅಪ್‌ ಸ್ಥಾನ ಗಿಟ್ಟಿಸಿಕೊಂಡವು. ವರಕೋಡಿನ ಅನಘ ಅವರ ರಾಟ್‌ವೀಲರ್‌ 4ನೇ, ಶಿರಸಿ ಅವಿನಾಶ್‌ ಅವರ ಬುಲ್‌ ಟೆರ್ರಿಯರ್‌ 5ನೇ, ನಗರದ ರತನ್‌ ಅವರ ಬಾಕ್ಸರ್‌ 6ನೇ ಸ್ಥಾನ ಪಡೆಯಿತು. ಮುಂದಿನೆರಡು ಸ್ಥಾನಗಳನ್ನು ಕಿರಣ್‌ರ ಪಗ್‌, ಮಂಜುಸಾಗರ ಅವರ ಡ್ಯಾಷ್‌ಹೌಂಡ್‌ ಪಡೆಯಿತು. ಪ್ರತಿಯೊಂದು ವಿಭಾಗದಲ್ಲಿ ಮೊದಲ ಸ್ಥಾನ ಪಡೆದವು ಚಾಂಪಿಯನ್‌ ಪಟ್ಟಕ್ಕೆ ಸ್ಪರ್ಧಿಸಿದ್ದವು

70 ಸಾವಿರ ವಿಮಾನ ವೆಚ್ಚ!
ಈ ಮುನ್ನ ನೈಜೀರಿಯಾದಲ್ಲಿದ್ದಾಗ ಸಾಕುತ್ತಿದ್ದ ಲಾಸ್‌ ಆ್ಯಪ್ಸೋ  ಪುಟ್ಟ ನಾಯಿಯನ್ನು ಡಾ| ವಾಣಿಶ್ರೀ ಭಟ್‌ ವಿಮಾನದಲ್ಲಿ ತಮ್ಮೊಂದಿಗೆ ಭಾರತಕ್ಕೆ ತರಲು ಅದಕ್ಕೆ ಪಾಸ್‌ಪೋರ್ಟ್‌, ವೀಸಾ ಮಾಡಿಸಿ 70 ಸಾವಿರ ರೂ. ವೆಚ್ಚ ಮಾಡಿದ್ದರು. ಅದು ಇಲ್ಲಿ ಪ್ರದರ್ಶನಗೊಂಡು ಸಮಾಧಾನಕರ ಬಹುಮಾನ ಪಡೆಯಿತು.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.