ಅಮ್ಮನ ಸಂಕಲ್ಪಕ್ಕೆ ಆಧುನಿಕ ಶ್ರವಣನ ಸ್ಕೂಟರ್ ಪಯಣ!


Team Udayavani, Jan 17, 2019, 10:03 AM IST

shiv-1.jpg

ಸಾಗರ: 125 ಕಿಮೀ ದೂರದ ಬೇಲೂರು- ಹಳೇಬೀಡನ್ನೇ ತನ್ನ 67 ವರ್ಷಗಳಲ್ಲಿ ನೋಡಿಲ್ಲ ಎಂದು ಅಮ್ಮ ಹೇಳಿದಾಗ ಮಗ ಸಂಕಲ್ಪ ತೆಗೆದುಕೊಂಡು 70 ವರ್ಷದ ತಾಯಿಯನ್ನು ತನ್ನ ಅಪ್ಪನ ಕಾಲದ 20 ವರ್ಷದ ಹಳೆಯ ಚೇತಕ್‌ ಸ್ಕೂಟರ್‌ನಲ್ಲಿ ದಕ್ಷಿಣ ಭಾರತದ ಮಠ- ಮಂದಿರ ಸೇರಿದಂತೆ ಪ್ರೇಕ್ಷಣೀಯ ಸ್ಥಳ ದರ್ಶನಕ್ಕೆ ಹೊರಟಿರುವ ಆಧುನಿಕ ಶ್ರವಣಕುಮಾರ ಬುಧವಾರ ಸಾಗರ ತಾಲೂಕಿನ ವರದಪುರದಲ್ಲಿ ಕಾಣಿಸಿಕೊಂಡರು.

ಮಾತೃ ಸೇವಾ ಸಂಕಲ್ಪ ಯಾತ್ರೆ: ಮೂಲತಃ ಮೈಸೂರಿನವರಾದ ಡಿ. ಕೃಷ್ಣಕುಮಾರ್‌ ಬೆಂಗಳೂರಿನಲ್ಲಿ 13 ವರ್ಷಗಳ ಕಾಲ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್‌ ತಂಡವನ್ನು ಮುನ್ನಡೆಸಿದವರು. ನಾಲ್ಕು ವರ್ಷಗಳ ಹಿಂದೆ ತಂದೆ ವೃದ್ಧಾಪ್ಯದಿಂದ ತೀರಿಕೊಂಡ ಸಂದರ್ಭದಲ್ಲಿ ತಾಯಿ ಚೂಡಾರತ್ನ ಅವರನ್ನು ನೋಡಿದ ಸ್ಥಳಗಳ ಕುರಿತಾಗಿ ಪ್ರಶ್ನಿಸಿದಾಗ ಸಿಕ್ಕ ಉತ್ತರ ಅವರನ್ನು ದಂಗುಪಡಿಸುತ್ತದೆ. ಚೂಡಾರತ್ನ ಅವರಿಗೆ ಒಬ್ಬನೇ ಮಗ. ವಿವಿಧ ಸಂಬಂಧಿಕರು ಹಾಗೂ ಓದು ಮಕ್ಕಳು ಸೇರಿದಂತೆ 10 ಜನ ಖಾಯಂ ಇದ್ದ ಸಂಸಾರವಾಗಿ ಎರಡು ಘಂಟೆ ಪಯಣದ ದೂರದ ಬೇಲೂರು- ಹಳೇಬೀಡನ್ನೇ ಚೂಡಾರತ್ನ ನೋಡಿರಲಿಲ್ಲ. ಈ ಸಂದರ್ಭದಲ್ಲಿ ಮಗ ‘ಮಾತೃ ಸೇವಾ ಸಂಕಲ್ಪ ಯಾತ್ರೆ’ ುನ್ನು ಕೈಗೊಳ್ಳಲು ತೀರ್ಮಾನಿಸಿ 2017ರ ಏಪ್ರಿಲ್‌ನಲ್ಲಿ ಉತ್ತರ ಭಾರತದತ್ತ ತೆರಳಲು ತಾಯಿಯನ್ನು ಕಾರಿನಲ್ಲಿ ಹತ್ತಿಸಿಕೊಳ್ಳುತ್ತಾರೆ. ಯಾವುದೇ ಅನುಕರಣೆ ಇಲ್ಲದಿದ್ದರೂ ಆಧುನಿಕ ಶ್ರವಣಕುಮಾರನ ಜನನವಾಗುತ್ತದೆ!

ಉತ್ತರ ಭಾರತದ ಯಾತ್ರೆಯಲ್ಲಿ ಕಾಶ್ಮೀರ, ದೆಹಲಿ, ವೈಷ್ಣೋದೇವಿ, ಗುಲ್‌ಮಾರ್ಗ್‌, ಶಂಕರಾಚಾರ್ಯ ಹಿಲ್‌, ಧಾಲ್‌ ಲೇಕ್‌, ಸೊನಾಮಾರ್ಗ ಮೊದಲಾದ ಸ್ಥಳಗಳನ್ನು 2017ರಲ್ಲಿ ಅಮ್ಮ- ಮಗ ದರ್ಶಿಸಿದರು. ಸುಮಾರು 40 ದಿನಗಳ ಪ್ರವಾಸ ನಡೆಸಿದ್ದರು. ಆದರೆ ಸಂಕಲ್ಪ ಪೂರ್ಣಗೊಂಡಿರಲಿಲ್ಲ. ಈ ವರ್ಷದ ಜನವರಿಗೆ ಅನ್ವಯಿಸುವಂತೆ ವೃತ್ತಿಯಿಂದ ಇಚ್ಛಾ ನಿವೃತ್ತಿ ಪಡೆದ ಕೃಷ್ಣಕುಮಾರ್‌ ಈ ಬಾರಿ ಅಪ್ಪನ ನೆನಪನ್ನು ಹೊತ್ತಿರುವ ಚೇತಕ್‌ ಸ್ಕೂಟರ್‌ ಬಳಸಿ ಸವಾರಿ ಹೊರಟರು. ಕಳೆದ ವರ್ಷದ ಜ. 16ರಂದು ದಕ್ಷಿಣ ಭಾರತ ಪ್ರವಾಸ ಆರಂಭಿಸಿದ್ದು, ಈಗಲೂ ಮನೆಗೆ ಮರಳಿಲ್ಲ. ಈಗಾಗಲೇ ಕೇರಳ, ತಮಿಳುನಾಡು, ತೆಲಂಗಾಣ, ಗೋವಾ, ಆಂಧ್ರಪ್ರದೇಶದ 29,425 ಕಿಮೀ ಸುತ್ತಿ ಶೃಂಗೇರಿ, ಮಂಗಳೂರು ಮೊದಲಾದ ಪ್ರದೇಶಗಳ ಐತಿಹಾಸಿಕ, ಧಾರ್ಮಿಕ, ಮಹತ್ವದ ಸ್ಥಳಗಳನ್ನು ಸಂದರ್ಶಿಸಿ ಸಾಗರ ತಾಲೂಕಿನ ವರದಹಳ್ಳಿಗೆ ಬಂದಿದ್ದಾರೆ.

ಈ ಕುರಿತು ‘ಉದಯವಾಣಿ’ ಜೊತೆ ಮಾತನಾಡಿದ ಕೃಷ್ಣಕುಮಾರ್‌, ಈ ಪ್ರವಾಸ ಆತ್ಮತೃಪ್ತಿಯ ಉದ್ದೇಶದ್ದು, ಸಾಧನೆಯ ಗುರಿಯದ್ದಲ್ಲ. ಯಾರಿಂದಲೂ ನಾವು ಆರ್ಥಿಕ ಬೆಂಬಲ ಕೇಳಿಲ್ಲ. ಸರಳ ಜೀವನಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸಿ ಈ ದಾರಿಗೆ ಬಂದಿದ್ದೇವೆ. ತಾಯಿ ಆರಾಮವಾಗೇ ಇರುವ ಕಾಲದಲ್ಲಿ ಅವರನ್ನು ಸುತ್ತಿಸಿ ಅವರನ್ನು ತೃಪ್ತಿಪಡಿಸಲು ನಿರ್ಧರಿಸಿರುವೆ. ಆದರೆ ನಿರ್ದಿಷ್ಟ ವೇಳಾಪಟ್ಟಿ ಹಾಕಿಕೊಂಡಿಲ್ಲ. ಗುರುವಾರ ಬೆಳಗ್ಗೆ ವರದಪುರದಿಂದ ತೆರಳಬೇಕು. ಅಮ್ಮ ಆಶಿಸಿದರೆ ಇನ್ನೊಂದು ದಿನ ಇರಲೂ ಸೈ. ನಾವು ಧಾವಂತದ ಬದುಕಿಗೆ ಗುಡ್‌ಬೈ ಹೇಳಿದ್ದೇವೆ ಎಂದರು.

ಪ್ರಪಂಚ ಕೆಟ್ಟಿಲ್ಲ…
ನಿಜವಾಗಿಯೂ ಈ ಲೋಕ ಕೆಟ್ಟಿಲ್ಲ. ಪ್ರಪಂಚದಲ್ಲಿ ಶೇ. 95ರಷ್ಟು ಒಳ್ಳೆಯ ಜನರೇ ಇದ್ದಾರೆ. ಆ ಕಾರಣದಿಂದಾಗಿಯೇ ನಾವು ಈ ಪ್ರವಾಸದಲ್ಲಿ ಒಂದು ದಿನ ಅರೆಹೊಟ್ಟೆಯಲ್ಲಿ ಮಲಗಿಲ್ಲ. ಸುಸಂಸ್ಕೃತರು ಲಭಿಸುತ್ತಿರುವುದರಿಂದಲೇ ಈವರೆಗೆ ಒಂದೂ ಹೊತ್ತು ಹೊಟೇಲ್‌ ಆಹಾರ ಪಡೆಯುವಂತಾಗಿಲ್ಲ ಎಂದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

1-asasas

Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.