ಮಾರಿ ಜಾತ್ರೆ; ಹೋವಳೆ ಕುಟುಂಬಕ್ಕೆ ಸೀರೆ ಬಾಗಿನದ ಗೌರವ


Team Udayavani, Feb 17, 2020, 4:02 PM IST

17-February-21

ಸಾಗರ: ಸಾಂಪ್ರದಾಯಿಕ ಮತ್ತು ಧಾರ್ಮಿಕ ವಿಧಿ-  ವಿಧಾನಗಳ ಆಚರಣೆಯಲ್ಲಿ ಒಂದಿನಿತು ಮುಕ್ಕಾಗುವುದನ್ನು ಒಪ್ಪದ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬೆಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವ ಶಾಸ್ತ್ರಕ್ಕೆ ಮೊದಲು ವಧುವಿಗೆ ಹೊಸ ಸೀರೆ, ಬಂಗಾರ, ಬಾಸಿಂಗ ತಂದು ಸಿಂಗರಿಸುವ ಜವಾಬ್ದಾರಿ ಪ್ರತಿ ಬಾರಿಯೂ ಸಾಗರದ ನಾಮದೇವ ಸಿಂಪಿ ಸಮಾಜದ ದಿ.
ಗೋವಿಂದ ರಾವ್‌ ಹೋವಳೆ ಕುಟುಂಬದವರದಾಗುವುದು ವಿಶೇಷ.

ಹಿಂದೊಮ್ಮೆ ಅವತ್ತಿನ ಲೋಕಸಭಾ ಸದಸ್ಯ, ನಗರದ ಕೆ.ಜಿ. ಶಿವಪ್ಪನವರು ಜಾತ್ರಾ ಮೂರ್ತಿಗೆ ತಾವು ಸೀರೆ ನೀಡುವ ಕುರಿತು ಸಮಾಲೋಚಿಸಿದಾಗ, ಪೋತರಾಜನಿಂದ ತನ್ನ ಜಾತ್ರಾ ಮೂರ್ತಿಗೆ ಸೀರೆ ಬೇರೆಯವರು ನೀಡುವುದನ್ನು ನಾನು ಒಪ್ಪುವುದಿಲ್ಲ ಎಂದು ತಾಯಿ ಹೇಳಿಸಿದ್ದಳಂತೆ. ಆಗ ಶಿವಪ್ಪ ತಾಯಿಯ ಇಚ್ಛೆಗೆ ತಲೆಬಾಗಿ ತಾವು ನೀಡಬೇಕೆಂದಿದ್ದ ಸೀರೆಯನ್ನು ಜಾತ್ರೆಯ ದಿನದಂದು ಸಮರ್ಪಿಸಿದ ಕತೆಯನ್ನೂ ಹಲವರು ಹೇಳುತ್ತಾರೆ.

ಮಾರಿಕಾಂಬೆಗೆ ಹೊಸ ಸೀರೆಯನ್ನು ನೀಡುವ ಪದ್ಧತಿ 60ಕ್ಕೂ ಹೆಚ್ಚು ವರ್ಷದಿಂದ ನಡೆಸಿಕೊಂಡು ಬರುತ್ತಿರುವುದು ನಗರದ ನಾಮದೇವ ಸಿಂಪಿ ಸಮಾಜದ ದಿ. ಗೋವಿಂದರಾವ್‌ ಹೋವಳೆ ಕುಟುಂಬದವರು. ಗೋವಿಂದರಾವ್‌ ನಗರದ ತಿಲಕ್‌ ರಸ್ತೆಯಲ್ಲಿ ಭವಾನಿ ಕ್ಲಾತ್‌ ಸ್ಟೋರ್‌ ಎಂಬ ಉಡುಪಿನ ಅಂಗಡಿ ನಡೆಸುತ್ತಿದ್ದರು. ಅವರು ಆಗಿನಿಂದಲೂ ಮಾರಮ್ಮನಿಗೆ ಜಾತ್ರಾ ಮೂರ್ತಿಗೆ ಸೀರೆ ಕೊಟ್ಟು ಅದನ್ನು ಜಾತ್ರೆಯ ಹಿಂದಿನ ದಿನದಂದು ಮೂರ್ತಿಗೆ ಉಡಿಸಿ ಅಲಂಕಾರ ಮಾಡುತ್ತಿದ್ದರು.

ಹಿಂದಿನ ಜಾತ್ರೆಯವರೆಗೂ (2017) ಅವರೇ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದರು. ಈ ಬಾರಿ ಅವರು ನಿಧನ ಹೊಂದಿದ ಕಾರಣ ಅವರ ಮಕ್ಕಳಾದ ಹೋವಳೆ ಭವಾನಿ ಶಂಕರ್‌ರಾವ್‌, ವಿನಾಯಕ್‌ ರಾವ್‌, ಅರುಣ್‌ ಕುಮಾರ್‌ ಮತ್ತು ರಾಜರಾಮ್‌ ರಾವ್‌ ಮತ್ತು ಮೊಮ್ಮಗ ಡಾ| ಕಿರಣ್‌ಕುಮಾರ ರಾವ್‌ ಅವರು ಮುಂದುವರಿಸಿದ್ದಾರೆ. ಈ ಬಾರಿ ಗೋವಿಂದರಾವ್‌ ಅವರ ದ್ವಿತೀಯ ಪುತ್ರ ವಿನಾಯಕ ರಾವ್‌ ದೇವಿಗೆ ಸೀರೆ ಉಡಿಸಿ ಸಿಂಗರಿಸಲಿರುವರು. ಅವರು ಹೇಳುವಂತೆ ದೇವಿಗೆ ಸೀರೆ ಉಡಿಸಲು ಸುಮಾರು 5 ಗಂಟೆ ತಗಲುತ್ತದೆ. ದೇವಿಯ ಜಾತ್ರಾ ಮೂರ್ತಿಗೆ ಉಡಿಸಲು ಹಸಿರು ಬಣ್ಣದ ರೇಷ್ಮೆಯ 4 ಸೀರೆ ಬಳಸಲಾಗುತ್ತದೆ. ಸೆರಗಿಗೆ ಪ್ರತ್ಯೇಕ ಸೀರೆ, ರವಿಕೆಗೆ 5 ಮೀಟರ್‌ ಬಟ್ಟೆ ಮತ್ತು ಪ್ರತಿ ಕೈಗಳಿಗೆ ಒಂದು ಮೀಟರ್‌ ಬಟ್ಟೆ ಬೇಕಾಗುತ್ತದೆ. ಈ ಕುಟುಂಬ ಈಗಾಗಲೇ 20ಕ್ಕೂ ಹೆಚ್ಚು ಜಾತ್ರೆಗೆ ಸೀರೆ ನೀಡಿದ್ದು, ಈ ಬಾರಿಯೂ ಆ ಸಂಪ್ರದಾಯ ಮುಂದುವರಿಯಲಿದೆ.

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

1-asasas

Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.