ರಾಜ್ಯದ ಕತ್ತಲು ನೀಗಿಸುತ್ತಿರುವ ಶರಾವತಿ


Team Udayavani, May 21, 2019, 6:00 AM IST

20smg-1

ಶಿವಮೊಗ್ಗ: ಅತಿ ಕಡಿಮೆ ದರಕ್ಕೆ ರಾಜ್ಯಕ್ಕೆ ವಿದ್ಯುತ್‌ ಪೂರೈಸುವ ಶರಾವತಿ ಜಲ ವಿದ್ಯುದಾಗಾರ ನಾಲ್ಕು ವರ್ಷದ ನಂತರ ನಿರಂತರವಾಗಿ ವಿದ್ಯುತ್‌ ಪೂರೈಸುತ್ತಿದೆ. ನಾಲ್ಕು ವರ್ಷ ನಂತರ ಡ್ಯಾಂ ಗರಿಷ್ಠ ಮಟ್ಟಕ್ಕೇರಿದ್ದರಿಂದ ವಿದ್ಯುತ್‌ ಉತ್ಪಾದನೆ ನಿರಂತರವಾಗಿ ನಡೆಯುತ್ತಿದೆ.

ಇಡೀ ರಾಜ್ಯಕ್ಕೆ ಶಾಖೋತ್ಪನ್ನ ಘಟಕ, ಸೋಲಾರ್‌, ಪವನ ವಿದ್ಯುತ್‌ ಕೇಂದ್ರಗಳು ಬೆಳಗ್ಗೆ ವಿದ್ಯುತ್‌ ಕೊಟ್ಟರೆ, ಶರಾವತಿ ಜಲ ವಿದ್ಯುದಾಗಾರ ರಾತ್ರಿ ಪಾಳಿಯಲ್ಲಿ ಎಡಬಿಡದೆ ಕೆಲಸ ಮಾಡುತ್ತಿದೆ. ಗೇರುಸೊಪ್ಪ, ಶರಾವತಿ, ಎಲ್ಪಿಎಚ್, ಎಂಜಿಎಚ್‌ನ 10 ಯುನಿಟ್‌ಗಳೂ ಸಕ್ರಿಯವಾಗಿದ್ದು ಗರಿಷ್ಠ ಪ್ರಮಾಣದ ಉತ್ಪಾದನೆ ನಡೆಯುತ್ತಿದೆ.

ರಾಜ್ಯದ ಪ್ರತಿದಿನದ ಬೇಡಿಕೆ 230 ಮಿಲಿಯನ್‌ ಯುನಿಟ್. ಅದರಲ್ಲಿ ಅಂದಾಜು 19 ಮಿಲಿಯನ್‌ ಯುನಿಟ್ ಅನ್ನು ಶರಾವತಿಯಿಂದ ಪೂರೈಸಲಾಗುತ್ತಿದೆ. ಸೋಲಾರ್‌ ಘಟಕಗಳು ಬೆಳಗ್ಗಿನ ಅವಧಿಯಲ್ಲಿ ಮಾತ್ರ ಕಾರ್ಯನಿರ್ವಹಿಸುವುದರಿಂದ ರಾತ್ರಿಗೆ ಅಗತ್ಯವಿರುವ ವಿದ್ಯುತ್‌ ಅನ್ನು ಶರಾವತಿ ಪೂರೈಸುತ್ತಿದೆ. ಗರಿಷ್ಠ 24 ಮಿಲಿಯನ್‌ ಯುನಿಟ್ವರೆಗೂ ವಿದ್ಯುತ್‌ ಪೂರೈಸುವ ಶಕ್ತಿಯನ್ನು ಇಲ್ಲಿನ ಜಲ ವಿದ್ಯುದಾಗಾರ ಹೊಂದಿದೆ.

2018-19ನೇ ಸಾಲಿನಲ್ಲಿ 4500 ಮಿಲಿಯನ್‌ ಯುನಿಟ್ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ರಾಯಚೂರಿನ ಥರ್ಮಲ್ ಪವರ್‌ ಏನಾದರೂ ಕೈಕೊಟ್ಟರೆ ಶರಾವತಿ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. 2015ರಿಂದ 2018ರವರೆಗೆ ಅಣೆಕಟ್ಟು ಶೇ. 60ರಷ್ಟು ಮಾತ್ರ ಭರ್ತಿಯಾಗಿದ್ದರಿಂದ ಅಂದಾಜು 3 ಸಾವಿರದಿಂದ 3200 ಮಿಲಿಯನ್‌ ಯುನಿಟ್ವರೆಗೆ ಮಾತ್ರ ವಿದ್ಯುತ್‌ ಉತ್ಪಾದನೆ ಮಾಡಲಾಗಿತ್ತು. ಆದರೆ ಈ ಬಾರಿ ಎಲ್ಲ ವಿದ್ಯುತ್‌ ಕೇಂದ್ರಗಳು ಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅಧಿಕ ಒತ್ತಡ ಇಲ್ಲದೇ ಕೆಲಸ ನಡೆಯುತ್ತಿದೆ.

ಅತಿ ಕಡಿಮೆ ಬೆಲೆ: ಪ್ರತಿ ಯುನಿಟ್ ವಿದ್ಯುತ್‌ಗೆ 3ರಿಂದ 5 ರೂ. ವರೆಗೆ ಖರ್ಚು ಮಾಡಿ ಖರೀದಿ ಮಾಡುವ ರಾಜ್ಯ ಸರಕಾರ ಶರಾವತಿ ಜಲವಿದ್ಯುದಾಗಾರದಿಂದ ಕೇವಲ 44 ಪೈಸೆಗೆ ಒಂದು ಯುನಿಟ್ ವಿದ್ಯುತ್‌ ಖರೀದಿಸುತ್ತಿದೆ. ಗೇರುಸೊಪ್ಪದಿಂದ 1.66 ರೂ.ಗೆ ಖರೀದಿ ಮಾಡುತ್ತಿದೆ. ಅತಿ ಕಡಿಮೆ ಬೆಲೆಗೆ ಹಾಗೂ ಪರಿಸರಕ್ಕೆ ಯಾವುದೇ ಹಾನಿ ಇಲ್ಲದಂತೆ ವಿದ್ಯುತ್‌ ಪೂರೈಕೆ ಮಾಡುವ ರಾಜ್ಯದ ಏಕೈಕ ಜಲ ವಿದ್ಯುದಾಗಾರ ಇದಾಗಿದೆ.

ರಾಜ್ಯದಲ್ಲಿ ಪ್ರತಿ ದಿನ 200ರಿಂದ 230 ಮಿಲಿಯನ್‌ ಯುನಿಟ್ ವಿದ್ಯುತ್‌ ಬೇಡಿಕೆ ಇರುತ್ತದೆ. ಬೇಸಿಗೆಯಲ್ಲಿ ಗರಿಷ್ಠ ಪ್ರಮಾಣದ ಬೇಡಿಕೆ ಇದೆ. ಇದರ 10ನೇ ಒಂದು ಭಾಗದ ವಿದ್ಯುತ್‌ ಅನ್ನು ಶರಾವತಿ ಒಂದೇ ಪೂರೈಸುತ್ತದೆ. ಈ ವರ್ಷ ಮಳೆ ಉತ್ತಮವಾಗಿದ್ದರಿಂದ ಅವಧಿಗೆ ಮುನ್ನವೇ ಅಣೆಕಟ್ಟು ಭರ್ತಿಯಾಗಿತ್ತು.

ಜೂನ್‌ 30ರವರೆಗೂ ಲಭ್ಯ: ಲಿಂಗನಮಕ್ಕಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಆಧಾರದ ಮೇಲೆ ಜೂನ್‌ 30 ರವರೆಗೂ ದಿನಕ್ಕೆ ಅಂದಾಜು 19 ಮಿಲಿಯನ್‌ ಯುನಿಟ್ ವಿದ್ಯುತ್‌ ಉತ್ಪಾದನೆ ಮಾಡಬಹುದು ಎಂದು ಇಂಜಿನಿಯರ್‌ಗಳು ಅಂದಾಜಿಸಿದ್ದಾರೆ. ಈ ಬಾರಿಯೂ ಮುಂಗಾರು ಉತ್ತಮವಾಗಿ ಆರಂಭವಾದರೆ ಜೂನ್‌ ಕೊನೆ ವಾರದೊಳಗೆ ಜಲಾಶಯಕ್ಕೆ ನೀರು ಬರಲಿದೆ. ಇದರಿಂದ ಉತ್ಪಾದನೆ ಮುಂದುವರಿಸಬಹುದು. ಮೇ 11ರಂದು ಲಿಂಗನಮಕ್ಕಿ ಜಲಾಶಯದ ಮಟ್ಟ 1762.50 ಮೀಟರ್‌, ಒಳಹರಿವು 503 ಕ್ಯೂಸೆಕ್‌, ಹೊರಹರಿವು 6318.80 ಕ್ಯೂಸೆಕ್‌ ಇತ್ತು.

ಬೆಳಗ್ಗೆ ವೇಳೆ ಸೋಲಾರ್‌ ಹಾಗೂ ಪವನ ವಿದ್ಯುತ್‌ ಕೇಂದ್ರಗಳು ಬೇಡಿಕೆ ಪೂರೈಸುತ್ತಿವೆ. ಆದ್ದರಿಂದ ರಾತ್ರಿ ವೇಳೆಗೆ ಶರಾವತಿ ಜಲ ವಿದ್ಯುದಾಗಾರದಿಂದ ವಿದ್ಯುತ್‌ ಪೂರೈಸಲಾಗುತ್ತಿದೆ. ಲಭ್ಯವಿರುವ ನೀರಿನ ಪ್ರಕಾರ ಜೂನ್‌ 30ರವರೆಗೂ ಅಂದಾಜು 19 ಮಿಲಿಯನ್‌ ಯೂನಿಟ್‌ನಲ್ಲಿ ವಿದ್ಯುತ್‌ ಉತ್ಪಾದಿಸಬಹುದು.
-ಮೋಹನ್‌, ಚೀಫ್‌ ಇಂಜಿನಿಯರ್‌, ಶರಾವತಿ ಜಲ ವಿದ್ಯುದಾಗಾರ

-ಶರತ್‌ ಭದ್ರಾವತಿ

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.