ಗುಂಡೀಬೈಲು ಪಂಚಲಿಂಗೇಶ್ವರ ದೇಗುಲದಲ್ಲಿ ಅಪರೂಪದ ಶ್ವೇತ ವರ್ಣದ ಶಿವಲಿಂಗ


Team Udayavani, Feb 28, 2022, 5:14 PM IST

ಗುಂಡೀಬೈಲು ಪಂಚಲಿಂಗೇಶ್ವರ ದೇಗುಲದಲ್ಲಿ ಅಪರೂಪದ ಶ್ವೇತ ವರ್ಣದ ಶಿವಲಿಂಗ

ಸಾಗರ: ರಾಜ್ಯದಲ್ಲಿಯೇ ಅಪರೂಪವಾಗಿರುವ ಶ್ವೇತ ವರ್ಣದ ಶಿವಲಿಂಗ ಇರುವ ತಾಲೂಕಿನ ಕಾರ್ಗಲ್ ಸಮೀಪದ ಗುಂಡೀಬೈಲು ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಸಾಂಪ್ರದಾಯಿಕ ಮಹಾಶಿವರಾತ್ರಿ ಆಚರಣೆ ಪ್ರತಿ ವರ್ಷ ನಡೆಯುತ್ತದೆ. ಈ ಬಾರಿ ಮಂಗಳವಾರ ಕೂಡ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬಲು ಅಪರೂಪದ ಶಿವಲಿಂಗವನ್ನು 1997ರಲ್ಲಿ ಅಂದಿನ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಗಮನಿಸಿ, ಭದ್ರತೆಗಾಗಿ ಸರ್ಕಾರದ ಆರಾಧನಾ ಯೋಜನೆಯಡಿಯಲ್ಲಿ ಪುಟ್ಟ ದೇವಾಲಯವೊಂದನ್ನು ಕಟ್ಟಿಸಿ 1998 ರಲ್ಲಿ ಶಿವಲಿಂಗವನ್ನು ಮರಾಠಿ ಜನಾಂಗದ ಸಮುದಾಯದೊಂದಿಗೆ ಪ್ರತಿಷ್ಠಾಪಿಸಿದರು. ಅಂದಿನಿಂದ ಆದಿವಾಸಿ ಜನಾಂಗದವರು, ಕುಗ್ರಾಮದ ಗ್ರಾಮಸ್ಥರು ಸರಳವಾಗಿ ಮಹಾಶಿವರಾತ್ರಿಯಂದು ಜಾತ್ರೆ ನಡೆಸತೊಡಗಿದರು. ಕಾಲ ಕ್ರಮೇಣ ಈ ಜಾತ್ರೆ ವೈಭವದಿಂದ ನಡೆಯುತ್ತಿದೆ.

ನಾಡಿಗೆ ಬೆಳಕು ನೀಡಲು ಈ ಭಾಗದ ಅನೇಕ ಗ್ರಾಮಗಳು ಮುಳುಗಡೆಯಾದ ಸಮಯದಲ್ಲಿ ನೀರಿನಡಿಯಲ್ಲಿ ಸೇರಿದ ಶಿವಾಲಯದಲ್ಲಿದ್ದ ೪ ಅಡಿ ಎತ್ತರದ ಈ ಬಿಳಿ ಶಿವಲಿಂಗವನ್ನು ಯಾರೋ ತಳಕಳಲೆ ಜಲಾಶಯದ ಹಿನ್ನೀರಿನ ದಡದ ನೀರಿನಲ್ಲಿ ಮುಳುಗಿಸಿಟ್ಟಿದ್ದರು. ಕಾಲ ಕ್ರಮೇಣ ಗುಂಡೀಬೈಲು ಮರಾಠಿಕೇರಿ ಭಾಗದ ಕುಡಬಿ ಮರಾಠಿ ಜನಾಂಗದ ಹಿರಿಯರೊಬ್ಬರಿಗೆ ಈ ಶಿವಲಿಂಗ ಕಂಡು ಬಂತು. ಅವರು ಗ್ರಾಮಸ್ಥರ ಸಹಾಯದೊಂದಿಗೆ ಹಿನ್ನೀರ ದಡದ ಎತ್ತರದ ಗುಡ್ಡದ ಮೇಲೆ ಪುಟ್ಟ ಮಣ್ಣಿನಿಂದ ನಿರ್ಮಿಸಿದ ಗುಡಿ ಕಟ್ಟಿ ಲಿಂಗವಿರಿಸಿ ಪೂಜಿಸಲಾರಂಭಿಸಿದರು.

ಇದನ್ನೂ ಓದಿ: ಸಾಲು ಮರಗಳ ತೆರವಿಗೆ ಕಟ್ಟಬೇಕಾದುದುದು 395 ಕೋಟಿ, ಕಟ್ಟಿದ್ದು 43 ಲಕ್ಷ.!

ಕಾಳುಮೆಣಸಿನ ರಾಣಿ ಎಂದು ಖ್ಯಾತಿ ಪಡೆದಿದ್ದ ಗೇರುಸೊಪ್ಪ ಪ್ರಾಂತ್ಯದ ರಾಣಿ ಚೆನ್ನಾಭೈರಾದೇವಿ ಕಾಲದ್ದು ಎನ್ನಲಾದ ಶ್ವೇತ ವರ್ಣದ ಶಿವಲಿಂಗದ ಸನ್ನಿಧಿಯಲ್ಲಿ ಶರಾವತಿ ಕಣಿವೆಯ ಭಕ್ತರು ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಈ ಶ್ವೇತ ಶಿವಲಿಂಗದ ದರ್ಶನ ಸುಲಭಲಭ್ಯವಲ್ಲ. ತಾಲೂಕಿನ ಜೋಗ ಜಲಪಾತದಿಂದ ೩ ಕಿಮೀ ದೂರವಿರುವ ಕೆಪಿಸಿ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಮೊದಲು ಭದ್ರತಾ ಪರವಾನಗಿ ಪಡೆಯಬೇಕು. ನಂತರ ಬ್ರಿಡ್ಜ್ ಕ್ಯಾಂಪ್ ಮುಖ್ಯ ಭದ್ರತಾ ಗೇಟ್ ಮೂಲಕ ಹೆನ್ನಿ ವಡನ್ ಬೈಲು ಮಾರ್ಗವಾಗಿ ೪ ಕಿಮೀ ಕ್ರಮಿಸಿದರೆ ಶರಾವತಿ ಹಿನ್ನೀರ ದಡದಲ್ಲಿ ನೆಲೆಗೊಂಡಿರುವ ಗುಂಡೀಬೈಲು ಮರಾಠಿಕೇರಿಯಲ್ಲಿರುವ ಪಂಚಲಿಂಗೇಶ್ವರ ದೇಗುಲದಲ್ಲಿ ಬಿಳಿ ಶಿವಲಿಂಗದ ದರ್ಶನ ಪಡೆಯಬಹುದು.

ಶ್ವೇತ ವರ್ಣದಿಂದ ಕಂಗೊಳಿಸುವ ಈ ಶಿವಲಿಂಗ ೪ ಅಡಿ ಎತ್ತರವಿದೆ. ಬೆಲೆ ಕಟ್ಟಲಾರದ ಶಿಲಾಪದರು ಎಂಬ ಮಾಹಿತಿಯ ಕಾರಣ ಲಿಂಗವನ್ನು ೩ ಅಡಿಗಳಷ್ಟು ಪೀಠದ ಒಳಭಾಗದಲ್ಲಿರಿಸಿ ಸಂರಕ್ಷಿಸಲಾಗಿದೆ. ಶಿವಲಿಂಗದ ಮೇಲೆ ಬೆಳಕು ಚೆಲ್ಲಿದರೆ, ಬೆಳಕನ್ನು ತನ್ನೊಳಗಿನಿಂದ ಹೊರಸೂಸುವ ಗುಣವನ್ನು ಈ ಶಿಲೆ ಹೊಂದಿದೆ. ಇಂಥ ಗುಣ ಹೊಂದಿರುವ ಈ ಶಿವಲಿಂಗ ತೀರ್ಥರಾಮೇಶ್ವರ ಹೊರತುಪಡಿಸಿದರೆ ಇಲ್ಲಿ ಮಾತ್ರ ಇದೆ ಎಂಬುದು ಇತಿಹಾಸ ಸಂಶೋಧಕರ ಮಾತು.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.