ಮರಗಳ ಕಡಿತ: ಪರಿಸರವಾದಿಗಳ ವ್ಯಾಪಕ ಆಕ್ರೋಶ


Team Udayavani, Apr 13, 2021, 6:45 PM IST

13-21

 ಸಾಗರ: ತಾಲೂಕಿನ ಖಂಡಿಕಾ ಗ್ರಾಪಂನ ಕೋಡ್ಸರದ ಸೊಪ್ಪಿನ ಬೆಟ್ಟದಲ್ಲಿ ಅರಣ್ಯ ಇಲಾಖೆ ಅಧಿ ಕಾರಿಗಳು ಹಾಗೂ ಅರಣ್ಯ ನಾಟ ಗುತ್ತಿಗೆದಾರರು ಶಾಮೀಲಾಗಿ, ಗ್ರಾಮದ ಮನೆಯ ಮೇಲೆ ಕಾಡಿನ ಮರಗಳು ಉರುಳಿ ಅಪಾಯವಾಗಬಹುದು ಎಂಬ ಕಾರಣವೊಡ್ಡಿ ಏಳು ಅಪರೂಪದ ಬೃಹತ್‌ ಮರಗಳನ್ನು ಕಡಿದುರುಳಿಸಿದ ಘಟನೆ ಸೋಮವಾರ ನಡೆದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪರಿಸರ ಕಾರ್ಯಕರ್ತ, ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆಯ ಕಾರ್ಯದರ್ಶಿ ಅಖೀಲೇಶ್‌ ಚಿಪ್ಪಳಿ ಪತ್ರಿಕೆಯೊಂದಿಗೆ ಮಾತನಾಡಿ, ಸ್ಥಳೀಯ ನಿವಾಸಿಗಳಿಂದ ಮನೆಗಳಿಗೆ ಅಪಾಯವಿದೆ ಎಂಬ ಮನವಿ ಪತ್ರವನ್ನು ನಾಟಾ ಗುತ್ತಿಗೆದಾರರು ಕೊಡಿಸುತ್ತಾರೆ. ಅಧಿ ಕಾರಿಗಳನ್ನು ಚೆನ್ನಾಗಿ ಉಪಚರಿಸಿ ಅನುಮತಿ ಪಡೆದುಕೊಳ್ಳಲಾಗುತ್ತದೆ. ನಂತರ ಈ ಮರಗಳ ಹರಾಜು ಪ್ರಕ್ರಿಯೆ ನಡೆಸಿ ಗುತ್ತಿಗೆದಾರರಿಗೆ ಅಧಿಕೃತವಾಗಿಯೇ ಕಾಡುಗಳ ನಾಶಕ್ಕೆ ಅನುಮತಿ ಕೊಡುವ ವ್ಯವಸ್ಥಿತ ತಂತ್ರ ಈಗ ಹೆಚ್ಚು ವ್ಯಾಪಕವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನೂರಾರು ವರ್ಷ ಕಳೆದರೂ ಇಲ್ಲಿನ ಮರಗಳು ಮನೆಗಳಿಗೆ ಯಾವ ಹಾನಿಯನ್ನೂ ಉಂಟುಮಾಡುತ್ತಿರಲಿಲ್ಲ. ಒಂದು ದೊಡ್ಡ ಹಲಸು, ಮತ್ತೂಂದು ಸಣ್ಣಹಲಸು, ಬೃಹತ್‌ ಗಾತ್ರದ ತಾರೆ, ನಾಟ ಮೌಲ್ಯದಲ್ಲಿ ಬಂಗಾರದ ಬೆಲೆಯ ಬರಣಿಗೆ, ಹೊನ್ನೆ, ನೇರಲು, ಗೆಣಸು ಜಾತಿಯ ಐವತ್ತು ವರ್ಷ ದಾಟಿದ ಮರಗಳೂ ಇಲ್ಲಿದ್ದವು. ತಾಂತ್ರಿಕವಾಗಿ ನಾಲ್ಕು ಮರಗಳ ಕಡಿತಲೆಗೆ ಪರವಾನಗಿ ಪಡೆದು ಒಟ್ಟು ಏಳು ಮರಗಳನ್ನು ಉರುಳಿಸಲಾಗಿದೆ. ಸ್ಥಳೀಯ ಜನ ಕೂಡ ತಮ್ಮೂರಿನ ಪರಿಸರ ಹಾಳಾಗುತ್ತಿದ್ದರೂ ಈ ಕುರಿತು ಪ್ರತಿಭಟಿಸುವುದನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿದರ ಕಾರ್ಯಕರ್ತ ಜಯಪ್ರಕಾಶ್‌ ಗೋಳಿಕೊಪ್ಪ ಮಾತನಾಡಿ, ಮತ್ತೆ ಮತ್ತೆ ಇಂತಹ ಮರಗಳನ್ನು ಬೆಳೆಸುವುದು ಕಷ್ಟಸಾಧ್ಯ. ಅರಣ್ಯ ಇಲಾಖೆಯ ಅ ಧಿಕಾರಿಗಳು ಒಂದೆಡೆ ಅಮಾಯಕ ಅರಣ್ಯ ನಿವಾಸಿಗಳಿಗೆ ಕಾಡು ನಾಶ ಮಾಡುತ್ತಿದ್ದಾರೆ ಎಂದು ಕಿರುಕುಳ ಕೊಡುತ್ತಿದ್ದಾರೆ. ಇನ್ನೊಂದೆಡೆ ಅರಣ್ಯ ನಾಶಕ್ಕೆ ನೇರವಾಗಿ ಅವರು ಕುಮ್ಮಕ್ಕು ಕೊಡುತ್ತಿದ್ದಾರೆ. ತ್ಯಾಗರ್ತಿ ಭಾಗದ ಲ್ಯಾವಿಗೆರೆ ಮೊದಲಾದ ಭಾಗಗಳಲ್ಲಿ ಸಾರಾಸಗಟಾಗಿ ಮರಗಳನ್ನು ಕಡಿದು ಶುಂಠಿ ಬೇಸಾಯ ಮಾಡುವ ಕೆಲಸ ಕಳೆದ ಕೆಲವು ದಿನಗಳಿಂದ ಆಗುತ್ತಿದೆ ಎಂಬ ಮಾಹಿತಿಯಿದೆ. ನಾವು ಈಗಲೇ ಜಾಗೃತರಾಗದಿದ್ದರೆ ಮುಂದಿನ ಪೀಳಿಗೆಗೆ ಕಾಗದದ ಚೂರು ಎನ್ನಿಸಿಕೊಳ್ಳುವ ನೋಟುಗಳನ್ನು ಬಿಟ್ಟುಹೋಗಬಹುದೇ ವಿನಃ ಆರೋಗ್ಯ, ಮನಶ್ಯಾಂತಿ, ನೆಮ್ಮದಿಗಳನ್ನು ನಾಶ ಮಾಡಿ ಇಲ್ಲಿಯೇ ನರಕ ಸೃಷ್ಟಿ ಮಾಡುತ್ತಿದ್ದೇವೆ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ಈ ಮರಗಳು ಮನೆಯಿಂದ ಸಾಕಷ್ಟು ದೂರದಲ್ಲಿದ್ದವು. ಧರೆ ಕೂಡ ತುಂಬಾ ಎತ್ತರದ್ದಲ್ಲ. ಈ ಮರಗಳು ನಾಟಕ್ಕೆ ಬರುತ್ತವೆ ಎಂಬುದು ಮುಖ್ಯವಾಗಿತ್ತೇ ವಿನಃ ಅಪಾಯಕರವಲ್ಲ ಎಂಬ ವರದಿಯನ್ನು ಪ್ರಾಮಾಣಿಕವಾಗಿರುವ ಯಾವುದೇ ಅರಣ್ಯ ಅಧಿ ಕಾರಿ ನೀಡುತ್ತಿದ್ದರು. ಹೆಚ್ಚೆಂದರೆ ಕೆಲವು ಮರಗಳ ರೆಂಬೆಗಳನ್ನು ಟ್ರಿಮ್‌ ಮಾಡಿದ್ದರೆ ಈ ಮರಗಳು ಇನ್ನೂ ನೂರು ವರ್ಷ ತಂಪು ನೀಡುತ್ತಿದ್ದವು ಎಂದು ಖೇದ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.