ಮನ ಸೆಳೆದ ಫಲಪುಷ್ಪಗಳ ಮಾಯಾಲೋಕ!
Team Udayavani, Jan 26, 2019, 11:41 AM IST
ಶಿವಮೊಗ್ಗ: ಮಧ್ಯಾಹ್ನದ ಸುಡುಬಿಸಿಲು..! ಯಾರೋ ನಗುತ್ತಿದ್ದಾರೆ..! ರಸ್ತೆಯಲ್ಲಿ ಹೋಗುತ್ತಿದ್ದವರು ನಗುವ ಸದ್ದನು ಕೇಳಿ ಆ ದಿಕ್ಕಿಗೆ ನಡೆಯುತ್ತಿದ್ದಾರೆ..! ಏನಿರಬಹುದು? ಕುತೂಹಲದಿಂದ ಹೋದರೆ ಯಾವುದೋ ಸ್ವರ್ಗಲೋಕವೇ ತೆರೆದುಕೊಂಡಂತೆ ಭಾಸವಾಯಿತು. ಕಂಗೊಳಿಸುತ್ತಿದ್ದ ಅಪ್ಸರೆಯರು ನಗುತ್ತಿದ್ದರು..!
ಇದು ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ಕಂಡುಬಂದ ನೋಟ. ಹೌದು.. ಆ ಹೂಗಳು, ಸಿಂಗಾರದ ನಗು ಹಾಗಿತ್ತು..! ಸೌಗಂಧದ ಸಂಭ್ರಮ ಜಗದ ಜಂಜಾಟಗಳನ್ನು ಮರೆಸುವಂತೆ ವೀಕ್ಷಕರ ಮನಸ್ಸನ್ನು ಮೆರೆಸುತ್ತಿತ್ತು..! ಎಲ್ಲರೂ ಆ ಹೂವಿನ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ಸಂತಸಕ್ಕೆ ಹೂಗಳನ್ನು ಸೃಷ್ಟಿಸಿದ ಪ್ರಕೃತಿಗೆ, ದೇವರಿಗೆ ನಾವು ವಂದನೆಗಳನ್ನು ಹೇಳಲೇಬೇಕು. ಚಿತ್ರ ವಿಚಿತ್ರ ಕಲಾತ್ಮಕ ರೀತಿಯಲ್ಲಿ ಹೂಗಳನ್ನು ಜೋಡಿಸಿದ ಕಲಾವಿದನಿಗೆ ಕೈ ಜೋಡಿಸಲೇ ಬೇಕು. ತರಕಾರಿಗಳ ಕೆತ್ತನೆ, ಕೃಷಿ ಉತ್ಪನ್ನಗಳಿಂದ ರಚಿಸಿದ ರಂಗೋಲಿ, ಬೋನ್ಸಾಯ್ ಗಿಡಗಳು, ಅಣಬೆ ಪ್ರಾತ್ಯಕ್ಷತೆ, ಮತ್ಸ್ಯ ಪ್ರದರ್ಶನ, ಸಹಸ್ರ ಸಹಸ್ರ ವಿವಿಧ ಜಾತಿಯ ಹೂ ಕುಂಡಗಳು, ತರಕಾರಿಗಳಿಂದ ರಚನೆಯಾದ ನವಿಲು, ಹೂಗಳಿಂದ ರಚನೆಯಾದ ಮಕ್ಕಳ ಆಕರ್ಷಣೆಯ ಗೊಂಬೆಗಳು ಮತ್ತು ಅಮರ್ ಜವಾನ್ ಆಕೃತಿ, ಮೇಕ್ ಇನ್ ಇಂಡಿಯಾ ಲಾಂಛನವಾದ ಸಿಂಹ ಹೀಗೆ ಹತ್ತು ಹಲವು ಪ್ರಾತ್ಯಕ್ಷಿಕೆಗಳು ಈ ಪ್ರದರ್ಶನದ ಶ್ರೀಮಂತಿಕೆಯನ್ನು ಹೆಚ್ಚಿಸಿದವು. ಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ರುಚಿಯಾದ ಊಟ, ತಿಂಡಿ ತಿನಿಸುಗಳು, ಕರಾವಳಿ ಭಾಗದ ಜನಪ್ರಿಯ ಪಾನೀಯ ನೀರಾ ಲಭ್ಯವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು