ದೇವರ ಮೊರೆಹೋದ ಶರಾವತಿ ಸಂತ್ರಸ್ತರು; ಕಲ್ಲುಕೊಪ್ಪದಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ !
Team Udayavani, Oct 7, 2021, 10:06 PM IST
ತೀರ್ಥಹಳ್ಳಿ : ತಾಲೂಕಿನಾದ್ಯಂತ ಇತ್ತೀಚಿಗೆ ಅತೀ ಹೆಚ್ಚು ಸುದ್ದಿ ಮಾಡಿದ್ದು ಎಂದರೆ ಅದು ಶರಾವತಿ ಸಂತ್ರಸ್ತರ ಹೋರಾಟ. ಹೌದು ಈಗಾಗಲೇ ತಾಲೂಕಿನ ಹಣಗೇರೆ ಕಟ್ಟೆ ಸಮೀಪ ಕಲ್ಲುಕೊಪ್ಪದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ಮಾಡಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಶರಾವತಿ ಮುಳುಗಡೆ ಸಂತ್ರಸ್ತರು ಈಗ ದೇವರ ಮೊರೆ ಹೋಗಿದ್ದಾರೆ.
ಕಲ್ಲುಕೊಪ್ಪದಿಂದ ಸುಮಾರು 21 ಜನ ಧರ್ಮಸ್ಥಳಕ್ಕೆ ಕಾಲ್ನಡಿಗೆ ಮೂಲಕ ಪಾದಯಾತ್ರೆ ಸಂಚರಿಸಲಿದ್ದಾರೆ. ಬರಿ ಕಾಲಿನಲ್ಲಿ ಅಂದಾಜು 200 ಕಿ ಮೀ ನಡೆದು ಧರ್ಮಸ್ಥಳದ ಮಂಜುನಾಥನಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಸಂಕ್ಲಾಪುರ ಮತ್ತು ಕಲ್ಲು ಕೊಪ್ಪದ ಶರಾವತಿ ಮುಳುಗಡೆ ಸಂತ್ರಸ್ಥರಾದ ರಾಘವೇಂದ್ರ ಸಂಕ್ಲಾಪುರ, ಪುರುಷೋತ್ತಮ, ದಿನೇಶ, ಸುದರ್ಶನ, ಚೇತನ, ಪ್ರತೀಕ, ಭರತ್, ಜಗದೀಶ ಹಾಗೂ 21 ಜನರ ತಂಡ ಈ ವರೆಗೆ ಹಲವಾರು ಹೋರಾಟವನ್ನು ಮಾಡಿ ಫಲಕಾರಿಯಾಗದ ಕಾರಣ ಇದೀಗ ದೇವರ ಮೊರೆ ಹೋಗಲು ನಿರ್ಧರಿಸಿ ಧರ್ಮಸ್ಥಳದ ವರೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ