ಮಲೆನಾಡಿನಲ್ಲಿ ವಾಡಿಕೆಗಿಂತ ಶೇ.300ರಷ್ಟು ಅಧಿಕ ಮಳೆ!
Team Udayavani, Nov 17, 2021, 6:22 PM IST
ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರುಅವ ಧಿಯಲ್ಲಿ ಭಾರೀ ಮಳೆಯಾದರೆ ಉಳಿದಸಮಯದಲ್ಲಿ ಸಾಮಾನ್ಯ ಮಳೆಯಾಗುತ್ತದೆ. ಆದರೆಈ ವರ್ಷ ಚಳಿಗಾಲದ ಅವಧಿಯಲ್ಲೂ ಭಾರೀಮಳೆಯಾಗುತ್ತಿದ್ದು ಭತ್ತ, ಮೆಕ್ಕೆಜೋಳದ ಬೆಳೆದರೈತರು ಕಟಾವು ಮಾಡಲಾಗದೇ ಹೈರಾಣಾಗಿದ್ದಾರೆ.
ಮುಂಗಾರು ಅವ ಧಿಯಲ್ಲಿ ಬಿತ್ತನೆ ಮಾಡಿದ್ದಫಸಲು ನವೆಂಬರ್ ಎರಡನೇ ವಾರದಿಂದ ಕಟಾವಿಗೆಬರುತ್ತದೆ. ಜಿಲ್ಲೆಯಾದ್ಯಂತ ಈ ಬಾರಿ 78616 ಹೆಕ್ಟೇರ್ನಲ್ಲಿ ಭತ್ತ, 51251 ಹೆಕ್ಟೇರ್ನಲ್ಲಿ ಮೆಕ್ಕೆಜೋಳ, 396ಹೆಕ್ಟೇರ್ ಹತ್ತಿ, 183 ಹೆಕ್ಟೇರ್ ತೊಗರಿ, 433 ಹೆಕ್ಟೇರ್ತೊಗರಿ, 101 ಹೆಕ್ಟೇರ್ ಅಲಸಂದೆ, 57 ಹೆಕ್ಟೇರ್ಶೇಂಗಾ, 880 ಹೆಕ್ಟೇರ್ ಕಬ್ಬು ಬಿತ್ತನೆ ಮಾಡಲಾಗಿದೆ.ಈಗ ಭತ್ತ ಹಾಗೂ ಮೆಕ್ಕೆಜೋಳ ಕಟಾವಿಗೆ ಬಂದಿದ್ದುರೈತರು ಮಳೆ ನಿಲ್ಲುವುದನ್ನೇ ಕಾಯುತ್ತಿದ್ದಾರೆ.ಈಗಾಗಲೇ ತಮಿಳುನಾಡಿನಿಂದ ನೂರಾರು ಭತ್ತಕಟಾವು ಯಂತ್ರಗಳು ಬಂದಿದ್ದು ಕೆಲಸವಿಲ್ಲದೇ ನಿಂತಿವೆ.
ಬೆಳಗ್ಗೆ ಬಿಸಿಲು ಸಂಜೆಯಾಗುತ್ತಿದ್ದಂತೆಭಾರೀ ಮಳೆಯಾಗುತ್ತಿದ್ದು ಹೊಲ, ಗದ್ದೆಗಳುಜಲಾವೃತಗೊಳ್ಳುತ್ತಿವೆ. ಹೀಗಾಗಿ ಕಟಾವು ಯಂತ್ರಇಳಿಸಲು ತೊಂದರೆಯಾಗುತ್ತಿದೆ. ಭತ್ತ ಹಣ್ಣಾಗಿದ್ದುಕೈಯಲ್ಲಿ ಮುಟ್ಟಿದರೂ ಭತ್ತ ಉದುರುತ್ತಿದೆ.ಕೊರೊನಾ ಸಂಕಷ್ಟ, ಬೆಲೆ ಸಿಗದೆ ಒದ್ದಾಡುತ್ತಿದ್ದರೈತನಿಗೆ ಈ ವರ್ಷ ಉತ್ತಮ ಬೆಳೆ ಬಂದಿದ್ದರೂಕಟಾವಿಗೆ ಮಳೆ ಬಿಡುತ್ತಿಲ್ಲ.ಶೇ.300 ರಷ್ಟು ಹೆಚ್ಚು ಮಳೆ: ನವೆಂಬರ್ ತಿಂಗಳಲ್ಲಿಇಷ್ಟು ಮಳೆಯಾಗಿರುವುದು ತೀರಾ ಅಪರೂಪ.ನ.1ರಿಂದ ನ.15ರವರೆಗೆ ಜಿಲ್ಲೆಯಲ್ಲಿ 25 ಮಿಮೀವಾಡಿಕೆಗೆ 98 ಮಿಮೀ ಮಳೆಯಾಗಿದೆ.
ಅಂದರೆ ಶೇ.291ರಷ್ಟು ಹೆಚ್ಚು. ಭದ್ರಾವತಿ 26 ಮಿಮೀವಾಡಿಕೆಗೆ 206 ಮಿಮೀ, ಹೊಸನಗರ 23 ಮಿಮೀಬದಲು 117 ಮಿಮೀ, ಸಾಗರ 26 ಮಿಮೀ ಬದಲು88 ಮಿಮೀ, ಶಿಕಾರಿಪುರ 21 ಮಿಮೀ ಬದಲಿಗೆ58 ಮಿಮೀ, ಶಿವಮೊಗ್ಗ 21 ಮಿಮೀ ಬದಲಿಗೆ116 ಮಿಮೀ, ಸೊರಬ 22 ಮಿಮೀ ವಾಡಿಕೆಗೆ 57ಮಿಮೀ, ತೀರ್ಥಹಳ್ಳಿ 22 ಮಿಮೀ ವಾಡಿಕೆಗೆ 139ಮಿಮೀ ಮಳೆಯಾಗಿದೆ.ಮಳೆ ಹಾನಿ: ಮಳೆಯಿಂದ ಭತ್ತ ಹಾಗೂಮೆಕ್ಕೆಜೋಳ, ರಾಗಿ ಬೆಳೆಗೆ ನೀರು ನುಗ್ಗಿದ್ದು ಭಾಗಶಃಹಾನಿಯಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರಭತ್ತ 45 ಹೆಕ್ಟೇರ್, ಮೆಕ್ಕೆಜೋಳ 9 ಹೆಕ್ಟೇರ್, ರಾಗಿ 2ಹೆಕ್ಟೇರ್ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ
MUST WATCH
ಹೊಸ ಸೇರ್ಪಡೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್