ಗುರುವಿನ ಸಾನ್ನಿಧ್ಯದಿಂದ ಬದುಕು ಸಾರ್ಥಕ
Team Udayavani, Nov 20, 2021, 10:45 AM IST
ಸೊರಬ: ಗುರು ಸಾನ್ನಿಧ್ಯದಿಂದ ಮಾತ್ರ ಬದುಕುಸಾರ್ಥಕವಾಗಲು ಸಾಧ್ಯವಿದೆ. ಮೊಬೈಲ್ವ್ಯಾಮೋಹಕ್ಕೆ ಒಳಗಾಗಿ ಗುರು-ಹಿರಿಯರನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ಬಸವಾದಿ ಶರಣರ ವಚನ ಸಂದೇಶಗಳುಉತ್ತಮ ವ್ಯಕ್ತಿಯಾಗಿ ನಿರ್ಮಾಣವಾಗಲುಹಾಗೂ ಮನಸ್ಸಿನ ಶುದ್ಧೀಕರಣಕ್ಕೆಮಾರ್ಗದರ್ಶನವಾಗಿವೆ ಎಂದು ಜಡೆ ಸಂಸ್ಥಾನಮಠದ ಉತ್ತರಾಧಿ ಕಾರಿ ಶ್ರೀ ರುದ್ರದೇವರು ತಿಳಿಸಿದರು.
ಪಟ್ಟಣದ ಮುರುಘಾಮಠದಸಭಾಂಗಣದಲ್ಲಿ ಕಾರ್ತಿಕ ಮಾಸದ ಗೌರಿಹುಣ್ಣಿಮೆ ಹಾಗೂ 183ನೇ ಮಾಸಿಕಶಿವಾನುಭವ ಗೋಷ್ಠಿಯಲ್ಲಿ ಅವರುಉಪನ್ಯಾಸ ನೀಡಿದರು.ಆಧುನಿಕತೆ ಭರಾಟೆಯಲ್ಲಿ ತಂತ್ರಜ್ಞಾನಗಳಬಳಕೆ ಹೆಚ್ಚುತ್ತಿದ್ದು, ಈ ನಡುವೆ ಬದುಕುಸಾರ್ಥಕವಾಗಲು ಗುರುವಿನ ಮಾರ್ಗದರ್ಶನಮತ್ತು ಆಶೀರ್ವಾದ ಅಗತ್ಯ. ಆಡಂಬರದಬದುಕು ಸಲ್ಲದು. ಬದುಕಿಗೆ ಆಹಾರ ಮತ್ತುಆರೋಗ್ಯ ಮುಖ್ಯವಾಗಿದೆ.
ಜೀವಿತಾವಧಿಯಲ್ಲಿ ಸಮಾಜದಲ್ಲಿ ಸತ್ಕಾರ್ಯಗಳಲ್ಲಿತೊಡಗಿಕೊಳ್ಳಬೇಕು ಎಂದರು.ಜನಸಂಗ್ರಾಮ ಪರಿಷತ್ ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಮಾತನಾಡಿ, ಸದೃಢಸಮಾಜದ ನಿರ್ಮಾಣದಲ್ಲಿ ಮಠ-ಮಾನ್ಯಗಳಪಾತ್ರ ಮಹತ್ವದ್ದಾಗಿದೆ. ಜಡೆ ಸಂಸ್ಥಾನ ಮಠಹಾಗೂ ಸೊರಬ ಮುರುಘಾಮಠ ಸರ್ವಸಮುದಾಯದ ಭಕ್ತರನ್ನು ಹೊಂದಿದ್ದು,ಶ್ರೀಗಳು ಸಮಾಜ ಸನ್ಮಾರ್ಗದಲ್ಲಿ ನಡೆಯಲುದಾರಿದೀಪವಾಗಿದ್ದಾರೆ ಎಂದರು.
ಜಡೆ ಸಂಸ್ಥಾನಮಠ ಹಾಗೂ ಮುರುಘಾಮಠದ ಶ್ರೀ ಡಾ|ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಅಕ್ಕನ ಬಳಗದ ಜಯಮಾಲಾ ಅಣ್ಣಾಜಿಗೌಡ, ವೀರಶೈವ ಲಿಂಗಾಯತ ಸಂಘಟನಾವೇದಿಕೆಯ ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ್ ಗೌಡ,ಜೆಸಿಐ ಅಧ್ಯಕ್ಷೆ ಗೀತಾ ನಿಂಗಪ್ಪ, ಜಿಪಂ ಮಾಜಿಸದಸ್ಯರಾದ ಪಾಣಿ ರಾಜಪ್ಪ, ದೇವಕಿ ಪಾಣಿ,ಮುರುಘಾಮಠದ ಕಾರ್ಯದರ್ಶಿ ಡಿ.ಶಿವಯೋಗಿ, ಪ್ರಮುಖರಾದ ಶ್ರೀಧರ ಮೂರ್ತಿನಡಹಳ್ಳಿ ಸೇರಿದಂತೆ ಇತರರಿದ್ದರು. ಅಕ್ಕನಬಳಗದವರು ವಚನಗಳನ್ನು ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ