ಗ್ರಂಥಾಲಯಕ್ಕೆ ಆಸನದ್ದೇ ಸಮಸ್ಯೆ


Team Udayavani, Nov 3, 2019, 2:53 PM IST

sm-tdy-1

ಶಿವಮೊಗ್ಗ: ಯುವಕರು ಪುಸ್ತಕ ಓದುತ್ತಿಲ್ಲ ಎಂಬ ಅಪವಾದಗಳ ನಡುವೆ ಇಲ್ಲೊಂದು ಲೈಬ್ರರಿ ಮಾದರಿಯಾಗಿ ನಿಂತಿದೆ. ಲೈಬ್ರರಿಯಲ್ಲಿ ಕೂರಲು ನೂಕು ನುಗ್ಗಲು ಕಾಣುವುದು ಬಹುಶಃ ಇಂದೊಂದೇ ಗ್ರಂಥಾಲಯದಲ್ಲಿ ಇರಬಹುದು. ಓದುಗರಿಗೆ ಪ್ರಿಯವಾದ ಗ್ರಂಥಾಲಯವಾದರೂ ಮೌಲಸೌಕರ್ಯ ಸಮಸ್ಯೆಯನ್ನೇ ಹೊದ್ದು ಮಲಗಿದೆ.

ನಗರದ ಗಾಂಧಿ ಪಾರ್ಕ್‌ ಬಳಿ ಇರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಕಿಕ್ಕಿರಿದು ವಿದ್ಯಾರ್ಥಿಗಳು, ವಯಸ್ಕರು, ವೃದ್ಧರು ಸೇರಿರುತ್ತಾರೆ. ಯಾವಾಗಲೂ ಚಟುವಟಿಕೆಯಿಂದ ಕೂಡಿರುವ ಈ ಗ್ರಂಥಾಲಯಕ್ಕೆ ಪ್ರತಿ ದಿನ ಭೇಟಿ ಕೊಡುವವರ ಸಂಖ್ಯೆ 1500ಕ್ಕೂ ಹೆಚ್ಚು. ಇಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆ ಮಾತ್ರ 200ರ ಅಸುಪಾಸು. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು ಇಲ್ಲಿರುವುದರಿಂದ ಬೇರೆ ಊರು, ತಾಲೂಕುಗಳಿಂದ ಇಲ್ಲಿ ಬಂದು ಓದುತ್ತಾರೆ. ಬೆಳಗ್ಗೆ 8ಕ್ಕೆ ಬಂದು ರಾತ್ರಿ 8ಕ್ಕೆ ವಾಪಸ್‌ ಹೋಗುವವರೂ ಇದ್ದಾರೆ. ಇಲ್ಲಿ ಓದಿದ ಸಾವಿರಾರು ಮಂದಿ ಪಿಡಿಒ, ಎಸ್‌ ಡಿಎ, ಎಫ್‌ಡಿಎ, ಪೊಲೀಸ್‌ ಕಾನ್ಸ್‌ಟೇಬಲ್‌ ಕೂಡ ಆಗಿದ್ದಾರೆ. ಇಷ್ಟೊಂದು ಬೇಡಿಕೆ ಇರುವ ಗ್ರಂಥಾಲಯದ ಮುಖ್ಯ ಕೊರತೆ ಆಸನ.

ಪ್ರತಿ ಬೆಳಗ್ಗೆ 8.25ಕ್ಕೆ ಗ್ರಂಥಾಲಯ ತೆರೆಯಲಿದ್ದು 8ಗಂಟೆಗೆ ಬಂದು ವಿದ್ಯಾರ್ಥಿಗಳು ಒಳ ಹೋಗಲು ಕ್ಯೂನಲ್ಲಿ ನಿಲ್ಲುತ್ತಾರೆ. ಸೀಟು ಸಿಗದೆ ಪ್ರತಿ ದಿನ 50ರಿಂದ 100 ಮಂದಿ ವಾಪಸ್‌ ಹೋಗುತ್ತಾರೆ. ಪ್ರತಿ ದಿನ ಇದೇ ಪರಿಸ್ಥಿತಿ ಹಲವು ವರ್ಷಗಳಿಂದ ಹೆಚ್ಚುವರಿ ಕೊಠಡಿ ಬೇಡಿಕೆ ಇದ್ದು ಈವರೆಗೂ ಈಡೇರಿಲ್ಲ. ಶಿವಮೊಗ್ಗ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ವಚ್ಯುವಲ್‌ ಲೈಬ್ರರಿ ಮಾಡುವ ಭರವಸೆ ಸಿಕ್ಕಿದ್ದು ಕಟ್ಟಡದ ಭರವಸೆ ಹಾಗೆಯೇ ಉಳಿದಿದೆ. ಸುಮಾರು 500 ಜನ ವಿದ್ಯಾರ್ಥಿಗಳು ಕೂರಲು ಸ್ಥಳಾವಕಾಶ ಇರುವ ಕಟ್ಟಡಕ್ಕೆ ಅನೇಕ ಬಾರಿ ಮನವಿ ಮಾಡಲಾಗಿದೆ.

ಮಹಾನಗರ  ಲೆಕ್ಕಕಷ್ಟೇ ಮಕ್ಕಳ ಲೈಬ್ರರಿ ಮಕ್ಕಳಿಗಾಗಿಯೇ ಒಂದು ಕೊಠಡಿಯನ್ನು ಮೀಸಲಿಡಲಾಗಿದ್ದು ಅಲ್ಲಿ ಈಗ ಮಹಿಳಾ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮಕ್ಕಳ ಲೈಬ್ರರಿಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಸಮಯ ನಿಗದಿ ಮಾಡಿದ್ದು, ಈ ಸಮಯದಲ್ಲೇ ಮಕ್ಕಳು ಶಾಲೆಯಲ್ಲೇ ಇರುತ್ತಾರೆ. ಇನ್ನು ಲೈಬ್ರರಿಗೆ ಹೇಗೆ ಬರುತ್ತಾರೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ. ವಿದ್ಯಾರ್ಥಿಗಳ ಆರೋಪ

ಕೆಲವೊಮ್ಮೆ ಬುಕ್ಸ್‌ ಕೊಡಲು ಯಾರೂ ಇರುವುದಿಲ್ಲ. ಕೇಳಿದರೆ ಮೀಟಿಂಗ್‌ ಕಾರಣ ಹೇಳುತ್ತಾರೆ. ದಾಖಲೆಯಲ್ಲಿ ಮಾತ್ರ ಬುಕ್ಸ್‌ಗಳಿವೆ. ಹೆಚ್ಚು ಬೇಡಿಕೆ ಇರುವ ಪುಸ್ತಕಗಳು ಒಂದೆರಡು ಮಾತ್ರ ಇವೆ. ಉಳಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಿಲ್ಲದ ಪುಸ್ತಕಗಳೇ ಹೆಚ್ಚಾಗಿವೆ. ಈಗಿರುವ ಲೈಬ್ರರಿ ಹಿಂದೆ ಹೊಸ ಕಟ್ಟಡ ಕಟ್ಟಲಾಗಿದ್ದು ಅದಿನ್ನು ಉದ್ಘಾಟನೆಗೊಂಡಿಲ್ಲ. ಕೆಲ ಪ್ರತಿಕೆಗಳು ಮೂರು ಕಾಪಿ ಬಂದರೆ, ಉಳಿದವು ಒಂದೆರಡು ಬರುತ್ತವೆ. ಓದಲು ಪೇಪರ್‌ ಸಾಕಾಗೋದಿಲ್ಲ. ಮ್ಯಾಗಜಿನ್‌ ಗಳು ಸರಿಯಾಗಿ ಬರುವುದಿಲ್ಲ. ಲೈಟ್‌, ಫ್ಯಾನ್‌ ಸರಿ ಇಲ್ಲ ಎಂದು ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು ದೂರಿದ್ದಾರೆ. ಕುಡಿವ ನೀರು ತಾರತಮ್ಯ

ಓದಲು ಬರುವ ವಿದ್ಯಾರ್ಥಿಗಳಿಗೆ ಸಾಮಾನ್ಯ ನೀರನ್ನೆ ನೀಡಲಾಗುತ್ತಿದೆ. ಅ ಧಿಕಾರಿಗಳು ಮತ್ತು ಸಿಬ್ಬಂದಿ ಕ್ಯಾನ್‌ ನೀರು ಬಳಸುತ್ತಾರೆ. ಇಂತಹ ತಾರತಮ್ಯ ಏಕೆ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದರು.

 

ಹೆಚ್ಚುವರಿ ಕಟ್ಟಡಕ್ಕೆ ಈಗಾಗಲೇ ಅನೇಕ ಬಾರಿ ಮನವಿ ಮಾಡಲಾಗಿದೆ. ಕೂರಲು ಜಾಗವಿಲ್ಲದೇ ನೂರಾರು ವಿದ್ಯಾರ್ಥಿಗಳು ವಾಪಸ್‌ ಹೋಗುತ್ತಾರೆ. ಮಹಾನಗರ ಪಾಲಿಕೆ ಅಥವಾ ಜಿಲ್ಲಾಡಳಿತ ಕನಿಷ್ಠ 500 ಮಂದಿ ಕೂರಲು ಕಟ್ಟಡದ ವ್ಯವಸ್ಥೆ ಮಾಡಿಕೊಟ್ಟರೆ ಸಾಕಷ್ಟು ಅನುಕೂಲವಾಗಲಿದೆ.  –ಪ್ರೇಮಲತಾ, ಚೀಫ್‌ ಲೆಬ್ರರಿಯನ್‌, ನಗರ ಕೇಂದ್ರ ಗ್ರಂಥಾಲಯ.

 

-ಶರತ್‌ ಭದ್ರಾವತಿ

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

1-asasas

Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.