ಶಿವಮೊಗ್ಗ :  ಗೆಣಸಿನಕುಣಿಯಲ್ಲೊಂದು ಸ್ಪಂಜು ನೆಲ

ಅಧ್ಯಯನವೂ ಅಗತ್ಯ|ಪ್ರವಾಸೋದ್ಯಮಕ್ಕೂ ಪೂರಕ| ಶತಮಾನಗಳ ಹಿಂದೆ ಮಾಯವಾದ ಕೆರೆ ಮೇಲಿನ ವಿಸ್ಮಯ|ಕೆರೆಯಲ್ಲ, ಹೂಳಲ್ಲ, ಕಾಲಿಟ್ಟರೆ ಕಂಪಿಸಿ ಜೀವಭಯ ಸೃಷ್ಟಿ

Team Udayavani, Mar 19, 2021, 9:00 AM IST

Shivamogga

ಸಾಗರ: ಕಾಲಿಟ್ಟರೆ ಸ್ಪಂಜಿನಂತೆ ವರ್ತಿಸುವ, ಮನುಷ್ಯನ ಭಾರಕ್ಕೆ ಅಲ್ಲಿಯೇ ಸರಿದಾಡಿ ಜೀವಭಯ ಹುಟ್ಟಿಸುವ ಹಚ್ಚ ಹಸುರಿನ ಭೂ ಪ್ರದೇಶವೊಂದು ತಾಲೂಕಿನ ಆವಿನಹಳ್ಳಿ ಸಮೀಪದ ಗೆಣಸಿನಕುಣಿಯಲ್ಲಿದೆ.

ಗೆಣಸಿನಕುಣಿಯ ಸಿದ್ದೇಶ್ವರ ದೇವಾಲಯದ ಎದುರಿನ ಕೆರೆ ಪಕ್ಕದಲ್ಲಿ ಸೊಪ್ಪಿನ ಬೆಟ್ಟದ ನಡುವೆ ಹಸಿರು ಜೆಡ್ಡಿನಿಂದ ಕೂಡಿದ ಬಯಲು ಪ್ರದೇಶವಿದೆ. ಮಲೆನಾಡಿನ ನೀರಿನ ಒರತೆ ಇರುವ ಪ್ರದೇಶಗಳಲ್ಲಿ ಇಂತಹ ಭೂ ಸ್ವರೂಪ ಸಾಮಾನ್ಯವಾದರೂ ಮೆಟ್ಟಿದಾಗ ನೆಲದ ಮಣ್ಣಿನ ಪದರ ಸ್ಪ್ರಿಂಗ್‌ನಂತೆ ಮೇಲೆ ಕೆಳಗೆ ಆಗುವ ವಿಶಿಷ್ಟ ಅನುಭವ ನೀಡುತ್ತದೆ.

ಒಂದು ಕಾಲದಲ್ಲಿ ಗೆಣಸಿನಕುಣಿ ಸಿದ್ದೇಶ್ವರ ದೇಗುಲದ ಎದುರು ಮೂರು ಕೆರೆಗಳಿದ್ದವು. ದೇವಾಲಯದ ಎದುರಿನ ಕೆರೆಯಲ್ಲಿ ಈಗಲೂ ನೀರಿದ್ದು, ಗ್ರಾಪಂ ನೇತೃತ್ವದಲ್ಲಿ ದುರಸ್ತಿ ಕೆಲಸ ನಡೆದಿದೆ. ಈ ಕೆರೆಯ ಮೇಲೆ ಇರುವ ಇನ್ನೊಂದು ಕೆರೆ ಹೂಳು ತುಂಬಿದ್ದರೂ ಅಸ್ತಿತ್ವದಲ್ಲಿದೆ. ಆದರೆ ಕೆಳಗಿನ ಭಾಗದ ಸ್ಪಂಜು ಭೂಮಿ ವಿಸ್ಮಯದ ಜಾಗ ಈ ಭಾಗದಲ್ಲಿದೆ ಎನ್ನಲಾದ ಮೂರನೇ ಕೆರೆ ಪ್ರದೇಶ ಎಂದು ಇಲ್ಲಿನ ಗ್ರಾಪಂ ಸದಸ್ಯ ಕುಮಾರ್‌ ಕಂಚಿಮನೆ ಪ್ರತಿಪಾದಿಸುತ್ತಾರೆ.

ಅಲ್ಲೊಂದು ಕೆರೆ ಇರಬಹುದು ಎಂಬುದಕ್ಕೆ ಸಾಕ್ಷಿ ಎನ್ನುವಂತೆ ತುಸು ಮೇಲೆ ನೀರಿರುವ ಪುಷ್ಕರಣಿಯೊಂದು ಕಂಡುಬರುತ್ತಿದೆ. ಬಹುಪಾಲು ಕಡೆ ಕೆರೆಯಿದ್ದ ಜಾಗ ನಿರ್ವಹಣೆಯ ಕೊರತೆಯಿಂದ ಹೂಳು ತುಂಬುತ್ತ ಹೋಗುತ್ತದೆ. ಇದರಿಂದ ಕೆಸರು ಮಣ್ಣಿನ ಜೌಗು ಪ್ರದೇಶ ನಿರ್ಮಾಣವಾಗುತ್ತದೆ. ಆದರೆ ಗೆಣಸಿನಕುಣಿಯ ಸ್ಪಂಜು ಭೂಮಿ ಕೌತುಕದಲ್ಲಿ ಹೂಳು ಕಾಣಿಸುವುದಿಲ್ಲ.

ಹಸಿರು ಹುಲ್ಲು ಹಾಸು ಕೃತಕವಾಗಿ ಸಿಂಥೆಟಿಕ್‌ ಟರ್ಫ್‌ ಹಾಕಿದಂತೆ ಚೂರು ಬಲ ಹಾಕಿ ಒತ್ತಿದಾಗಲೆಲ್ಲ ಒಳಹೋಗುತ್ತದೆ. ನರ್ತಿಸಿದರೆ ನೆಲವೂ ನರ್ತಿಸಿದ ಅನುಭವವಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಆಗ ಆನಂದಪುರದಲ್ಲಿ ಉಪತಹಶೀಲ್ದಾರ್‌ ಆಗಿ ಕಾರ್ಯ ನಿರ್ವಹಿಸಿದ್ದ ಪುಟ್ಟರಾಜ ಗೌಡರು ಮೊದಲ ಬಾರಿಗೆ ಈ ವಿಸ್ಮಯದ ಮಾಹಿತಿ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದರು. ಇದರ ಹಿಂದಿನ ವೈಜ್ಞಾನಿಕ ಹಿನ್ನೆಲೆ ಅರಿಯುವ ಪ್ರಯತ್ನವಾಗಿ ಅವರು ಸಂಬಂಧಿಸಿದ ಇಲಾಖೆಗಳಿಗೂ ಮಾಹಿತಿ ನೀಡಿದ್ದರು. ಆದರೆ ಹೆಚ್ಚಿನ ಸಂಶೋಧನೆಗಳು ಮಾತ್ರ ನಡೆದಿಲ್ಲ.

 

land

 ಮಳೆಗಾಲದಲ್ಲೂ ನೀರು ನಿಲ್ಲುವುದಿಲ್ಲ

ಸ್ವಾರಸ್ಯ ಎಂದರೆ ಈ ಪ್ರದೇಶ ಕೆಲ ವರ್ಷಗಳ ಹಿಂದೆ ಅಕ್ಷರಶಃ ಜೌಗು ಪ್ರದೇಶವೇ ಆಗಿತ್ತು. ಇದನ್ನು ಈ ಭಾಗದ ಜನ ಹುಡ್ಲು ಕೆರೆ ಎನ್ನುತ್ತಿದ್ದರು.

ಹುಲ್ಲಿನ ಆಸೆಗೆ ಈ ಜಾಗಕ್ಕೆ ತೆರಳುವ ಹತ್ತಾರು ಜಾನುವಾರುಗಳು ಇಲ್ಲಿನ ಹೂಳಿನಲ್ಲಿ ಸಿಲುಕಿಕೊಂಡ ಪ್ರಕರಣಗಳು ನಡೆದಿತ್ತು. ಆಗ ಊರವರು ಅವುಗಳನ್ನು ರಕ್ಷಿಸುತ್ತಿದ್ದ ಘಟನೆಗಳನ್ನು ಕುಮಾರ್‌ ನೆನಪಿಸಿಕೊಳ್ಳುತ್ತಾರೆ.

ಇತ್ತೀಚೆಗೆ ಈ ಸ್ಥಳಕ್ಕೆ ಆಗಮಿಸಿ ಪರೀಕ್ಷೆ ನಡೆಸಿರುವ ಅನಾಮಿಕರು ಇಲ್ಲಿನ ಹುಲ್ಲುಹಾಸಿನ ಮಧ್ಯದಲ್ಲಿ ಗುಳಿಯೊಂದನ್ನು ತೋಡಿರುವುದು ಕಂಡುಬರುತ್ತದೆ. ಸ್ಥಳೀಯ ಸಿದ್ದೇಶ್ವರ ದೇವಾಲಯದ ಅರ್ಚಕರಾಗಿರುವ ಆನಂದರಾವ್‌ ಕೆ.ಜೆ. ಇದರೊಳಗೆ ಕಾಲು ಹಾಕಿ ಪರೀಕ್ಷಿಸಿ ಹೇಳುತ್ತಾರೆ. “ಒಂದೂವರೆ ಅಡಿಗೇ ಗಟ್ಟಿ ನೆಲವಿದೆ. ಯಾವುದೇ ಹೂಳು ಕಾಣಿಸುವುದಿಲ್ಲ’. ಇಂತಹದು ದೇಶದ ಹಲವೆಡೆ ಇದೆ. ರಾಜ್ಯದಲ್ಲಿ ಇದಕ್ಕೆ ಕಂಪಲು ಎಂತಲೂ ಕರೆಯುತ್ತಾರೆ ಎಂಬ ಮಾತಿದೆ. ಸ್ವಾರಸ್ಯವೆಂದರೆ, ಜೋರು ಮಳೆಗಾಲದಲ್ಲಿಯೂ ಈ ಜಾಗದಲ್ಲಿ ನೀರು ನಿಲ್ಲುವುದಿಲ್ಲ.

ಈ ರೀತಿಯ ಜೌಗು ಪ್ರದೇಶ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಹಲವು ವಾದಗಳಿವೆ. ಸಣ್ಣ ನದಿಯ ಅಂಚಿನುದ್ದಕ್ಕೆ ಇರುವ ಜೌಗು ನೆಲದಲ್ಲಿ ಮರಳು, ಅಂಟು ಜೇಡಿ ಮುಂತಾದ ಮಣ್ಣು ಕಣಗಳು ಒಟ್ಟುಗೂಡುತ್ತವೆ. ಸಾವಯವ ವಸ್ತುಗಳು ನಿಧಾನವಾಗಿ ಸಂಗ್ರಹವಾಗಿ ಇಂಕ್‌ μಲ್ಲರ್‌ ತಂತ್ರದ ಮಾದರಿಯಲ್ಲಿ ನೀರು ಹೀರಿಕೊಳ್ಳುತ್ತದೆ. ತನ್ನ ತೂಕಕ್ಕಿಂತ 13 ಪಟ್ಟು. ತೇವಾಂಶವನ್ನು ಹೊಂದಿರುವ ದೈತ್ಯ ಸ್ಪಂಜಿನಂತೆ ಕಾರ್ಯ ನಿರ್ವಹಿಸುವ ಪೀಟ್‌ ಜೌಗು ಪ್ರದೇಶಗಳು ಹಸಿರು ಹಾಸಿನ ಗುಮ್ಮಟವನ್ನು ರೂಪಿಸುತ್ತವೆ. ಈ ಕಾರಣದಿಂದ ಇಂತಹ ಭೂಮಿ ಮೇಲೆ ನಡೆದಾಗ ಸ್ಪಂಜಿನ ಮೇಲೆ ನಡೆದ ಅನುಭವವಾಗುತ್ತದೆ. ಆದರೆ ಇಂತಹ ಪ್ರದೇಶ ನಿರ್ಮಾಣಕ್ಕೆ ಸಾವಿರಾರು ವರ್ಷ ಬೇಕಾಗುತ್ತದೆ ಎಂಬ ಪ್ರತಿಪಾದನೆಯಿದೆ. ಗೆಣಸಿನಕುಣಿಯ ಜೌಗು ಭೂಮಿ ಸ್ಪಂಜಿನ ನೆಲವಾಗಲು ಸಾವಿರಾರು ವರ್ಷ ತೆಗೆದುಕೊಂಡಿದೆ ಎಂಬ ವಾದಕ್ಕೆ ಸಾಕ್ಷ್ಯಗಳಿಲ್ಲ.

ಎಲ್ಲಿದೆ?

ಸಾಗರ- ಸಿಗಂದೂರು ರಸ್ತೆಯಲ್ಲಿ ಸುಮಾರು 13 ಕಿಮೀ ಸಾಗಿದರೆ ಆವಿನಹಳ್ಳಿ ಸಿಗುತ್ತದೆ. ಅಲ್ಲಿಂದ ಮೂರು ಕಿಮೀ ದೂರದಲ್ಲಿ ಗೆಣಸಿನಕುಣಿ. ಅಲ್ಲಿಂದ ಅನತಿ ದೂರದಲ್ಲಿರುವ ಸಿದ್ದೇಶ್ವರ ದೇವಾಲಯದ ಎದುರು ಇರುವ ಕೆರೆ ಪಕ್ಕದಲ್ಲಿ ಈ ಸ್ಪಂಜು ಭೂಮಿ ಕಂಡುಬರುತ್ತಿದೆ.

land

ವಿಶಿಷ್ಟ ಸ್ಮಾರಕವಾಗಿ ಉಳಿಸಿಕೊಳ್ಳಿ!

ಗೆಣಸಿನಕುಣಿಯ ಈ ಸ್ಥಳ ಪರಿಸರ ವಿಸ್ಮಯವಾಗಿರುವಾಗ, ವೈಜ್ಞಾ,ನಿಕ ಸಂಶೋಧನೆಗಳಿಗಿಂತ ಇಂತಹ ಸ್ಥಳವನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯ. ಇಡೀ ಪ್ರದೇಶವನ್ನು ಆಡಳಿತ ತನ್ನ ವಶಕ್ಕೆ ತೆಗೆದುಕೊಂಡು ಜನ, ಪ್ರಾಣಿಗಳ ಪ್ರವೇಶವನ್ನು ನಿರ್ಬಂ ಧಿಸಬೇಕು. ಈಗ ಜನ ಹಾಗೂ ಜಾನುವಾರುಗಳ ಓಡಾಟದಿಂದ ಆಗಿರುವ ಹಾನಿಯನ್ನು ತಡೆದರೆ ಇಲ್ಲಿನ ಭೂಮಿಯ ಸ್ಪಂಜಿನ ಅನುಭವ ಹೆಚ್ಚುವುದು ಖಚಿತ. ನಂತರ ಅಧ್ಯಯನದಲ್ಲಿ ಆಸಕ್ತರಿಗೆ ಹಾಗೂ ಕೌತುಕಪ್ರಿಯ ಜನರಿಗೆ ಸೀಮಿತ ಅವಕಾಶ ಕಲ್ಪಿಸುವ ಮೂಲಕ ವಿಶಿಷ್ಟತೆಯನ್ನು ಕಾಪಾಡಬಹುದು. ಸ್ಥಳೀಯ ಆವಿನಹಳ್ಳಿ ಗ್ರಾಪಂ ಈ ಬಗ್ಗೆ ವಿಶೇಷ ಗಮನ ಕೊಡಬೇಕಾದ ಅಗತ್ಯವಿದೆ ಎಂದು ಆವಿನಹಳ್ಳಿಯ ಮಂಜುನಾಥ್‌ ಆಶಯ ವ್ಯಕ್ತಪಡಿಸುತ್ತಾರೆ.

ಮಾ.ವೆಂ.ಸ. ಪ್ರಸಾದ್‌

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.