ಸಾಗರ-ತಾಳಗುಪ್ಪಕ್ಕೆ ರೈಲು ಸಂಚಾರ ಆರಂಭಿಸಿ
ಸುರಕ್ಷಿತ ಪ್ರಯಾಣಕ್ಕಾಗಿ ಜನರ ಒಕ್ಕೊರಲ ಒತ್ತಾಯ
Team Udayavani, Oct 28, 2020, 6:05 PM IST
ಸಾಗರ: ದಶಕಗಳ ಕಾಲ ನ್ಯಾರೋಗೇಜ್ನಿಂದ ಬ್ರಾಡ್ಗೇಜ್ಗೆ ಬದಲಾಗದ ರೈಲ್ವೆ ಮಾರ್ಗದಲ್ಲಿ ರೈಲು ಬಿಡುವಂತೆ ಆಗ್ರಹಿಸಿ ತಾಲೂಕಿನಲ್ಲಿ ನಡೆದ ಚಳುವಳಿ ಮತ್ತೂಮ್ಮೆ ಆರಂಭಿಸಬೇಕು ಎಂಬಂಥಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತೂಮ್ಮೆ ಸಾಗರದಿಂದ ಬೆಂಗಳೂರಿಗೆ ರೈಲು ಬಿಡಿ ಎಂದು ವ್ಯಾಪಕವಾಗಿ ಆಗ್ರಹಿಸಲಾರಂಭಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ, ಜಿಲ್ಲೆಯಲ್ಲಿ ಶಿವಮೊಗ್ಗಕ್ಕೆ ಜನ್ಮಶತಾಬ್ಧಿ ರೈಲು ಬಂದುಹೋಗಲಾರಂಭಿಸಿದ್ದರೂ ಸಾಗರ, ತಾಳಗುಪ್ಪಕ್ಕೆ ಮಾತ್ರ ಈವರೆಗೆ ರೈಲು ಸಂಚಾರ ಆರಂಭವಾಗಿಲ್ಲ.
ಕೋವಿಡ್ ಕಾರಣಕ್ಕೆ ಕಳೆದ ಮಾರ್ಚ್ ತಿಂಗಳ ಮೂರನೇ ವಾರದಿಂದ ಸ್ಥಗಿತಗೊಂಡಿರುವ ತಾಳಗುಪ್ಪ-ಬೆಂಗಳೂರು ನಡುವೆ ಕೊನೆಪಕ್ಷ ರಾತ್ರಿಯ ಒಂದು ರೈಲನ್ನಾದರೂ ಆರಂಭಿಸಿದರೆ ಜನರಿಗೆ ವಿವಿಧ ರೀತಿಯಲ್ಲಿ ಅನುಕೂಲಗಳಾಗುತ್ತವೆಎಂದು ಪ್ರಸ್ತಾಪಿಸಲಾಗಿದೆ. ಈಗಲೂ ರೈಲು ಪ್ರಯಾಣ ದರ ಕಡಿಮೆಯಿರುವುದು, ಬಸ್ಗಳಿಗಿಂತಸುಲಭವಾಗಿ ಭೌತಿಕ ಅಂತರ ಕಾಪಾಡಿಕೊಂಡುಪ್ರಯಾಣ ಮಾಡಲು ಸಾಧ್ಯವಿರುವುದರ ಹಲವರುಬೆರಳು ಮಾಡಿ ತೋರಿಸುತ್ತಿದ್ದು, ಖಾಸಗಿ ವಾಹನ ಅಥವಾ ಬಸ್ ಪ್ರಯಾಣ ಸೋಂಕಿನ ಪ್ರಮಾಣವನ್ನು ಹೆಚ್ಚಿಸಬಹುದು. ಆದರೆ ರೈಲಿನಲ್ಲಿ ಹೆಚ್ಚು ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಎಂದು ವಾದಿಸುತ್ತಿದ್ದಾರೆ.
ಈ ಹಿಂದೆ ರೈಲ್ವೆ ಬ್ರಾಡ್ಗೆàಜ್ ನಿರ್ಮಾಣದಲ್ಲಿ ಮಹತ್ವದ ಆಂದೋಲನವನ್ನು ಹಮ್ಮಿಕೊಂಡಿದ್ದ ರೈಲ್ವೆ ಹೋರಾಟ ಸಮಿತಿಯ ಪ್ರಮುಖ ಕುಮಾರಸ್ವಾಮಿ “ಉದಯವಾಣಿ’ ಜೊತೆ ಮಾತನಾಡಿ, ಈಗಲೂ ರೈಲ್ವೆ ಇಲಾಖೆ ಜನರಲ್ ಬೋಗಿಯನ್ನು ರದ್ದುಗೊಳಿಸಿ, ಭೌತಿಕ ಅಂತರವನ್ನು ಕಾಪಾಡಬಹುದಾದ ಸ್ಲಿàಪರ್, ಎಸಿ ಕೋಚ್ಗಳನ್ನು ಬಿಡಬಹುದು. ರೈಲು ಹೊರಡುವ ಮುನ್ನ ಹಾಗೂ ತಲುಪಿದ ಮೇಲೆ ಸ್ಯಾನಿಟೈಸೇಷನ್ ಮಾಡುವುದು ಕೂಡ ಕಷ್ಟವಲ್ಲ.
ಮುಖ್ಯವಾಗಿ, ಹೃದಯದ ಚಿಕಿತ್ಸೆ ಸೇರಿದಂತೆ ಪ್ರಮುಖ ಆಪರೇಷನ್ ಮಾಡಿಸಿಕೊಂಡ ನಾಗರಿಕರು ನಂತರ ತಿಂಗಳು ತಿಂಗಳಿನ ಪರೀಕ್ಷೆಗಳಿಗೆ ಬಸ್ನಲ್ಲಿ ಪಯಣಿಸಲಾಗುವುದಿಲ್ಲ. ಅವರ ದೇಹ ಹೆಚ್ಚಿನ ಕುಲುಕಾಟದ ಪ್ರಯಾಣವನ್ನು ತಡೆದುಕೊಳ್ಳುವುದಿಲ್ಲ. ಖಾಸಗಿ ವಾಹನ ಮಾಡಿಕೊಂಡು ಹೋಗುವುದು ಮಧ್ಯಮ ವರ್ಗಕ್ಕೂ ದುಬಾರಿಯಾಗುತ್ತದೆ.ಇದರಿಂದ ಅನಾರೋಗ್ಯ ಕ್ಕೊಳಗಾದವರು ಪರೀಕ್ಷೆಗೆಹೋಗುವುದನ್ನೇ ತಪ್ಪಿಸುವ ನಿರ್ಧಾರ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಬೆಂಗಳೂರು- ಕಾರವಾರ, ಬೆಂಗಳೂರು- ಹುಬ್ಬಳ್ಳಿ ಮಾರ್ಗದ ರೈಲುಗಳ ಸಂಚಾರ ಆರಂಭವಾಗಿದೆ. ಲಾಕ್ಡೌನ್ ನಂತರ ಮತ್ತೆ ಸಂಚಾರ ಆರಂಭಿಸಿರುವ ರೈಲುಗಳಲ್ಲಿ ಸಾಮಾನ್ಯ ದರ್ಜೆಯ ಬೋಗಿಗಳನ್ನು ಕಡಿಮೆ ಮಾಡಿ ಆಸನಗಳನ್ನು ಕಾಯ್ದಿರಿಸುವ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈ ಮೂಲಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ರೈಲ್ವೆ ಆದಾಯ ಕೂಡ ಸುಧಾರಿಸುತ್ತದೆ. ಜನರಿಗೂ ಅನುಕೂಲವಾಗುತ್ತದೆ. ತಾಳಗುಪ್ಪ-ಬೆಂಗಳೂರು ಮಾರ್ಗದ ರೈಲಿಗೂ ಇದೇ ಮಾನದಂಡ ಅನುಸರಿಸಿ ಮತ್ತೆ ರೈಲು ಸಂಚಾರ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ರೈಲ್ವೆ ಇಲಾಖೆಯ ಮೇಲೆ ರಾಜ್ಯದ ಜನಪ್ರತಿನಿಧಿಗಳ
ಪ್ರಭಾವ ಕಡಿಮೆ. ಈ ಮಾರ್ಗಗಳ ಪುನರ್ಚಾಲನೆಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಮನಸ್ಸು ಮಾಡಬೇಕು. ಈ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ಸಾಗರಕ್ಕೆ ಒಂದೇ ರೈಲು ಕೊಟ್ಟರೂ ಸಾಕು! : ಈ ಮೊದಲು ರಾತ್ರಿ 8.15ಕ್ಕೆ ತಾಳಗುಪ್ಪದಿಂದ ಹೊರಟು ಬೆಳಗಿನ ಜಾವ 4.30ಕ್ಕೆ ಬೆಂಗಳೂರು ತಲುಪಿ ನಂತರ 8.30ಕ್ಕೆ ಮೈಸೂರು ತಲುಪುತ್ತಿದ್ದ ರಾತ್ರಿಯ ಎಕ್ಸ್ಪ್ರೆಸ್ ರೈಲು ಬಿಟ್ಟರೂ ಸಾಕು. ಈ ರೈಲು ಪುನಃ ರಾತ್ರಿ 7.30ಕ್ಕೆ ಮೈಸೂರಿನಿಂದ ಹೊರಟು, ಬೆಂಗಳೂರಿನಿಂದ ರಾತ್ರಿ 11ಕ್ಕೆ ಬಿಟ್ಟು ಬೆಳಗ್ಗೆ 6.45ಕ್ಕೆ ತಾಳಗುಪ್ಪ ತಲುಪುತ್ತಿತ್ತು. ಈ ರೈಲಿನ ಸಂಚಾರದಿಂದ ತಾಲೂಕಿನ ಪ್ರಯಾಣಿಕರಿಗೆ ಮಾತ್ರವಲ್ಲದೆ ಸೊರಬ, ಹೊಸನಗರ ಹಾಗೂ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಭಾಗದ ಜನರಿಗೂ ಅನುಕೂಲಕರವಾಗಿತ್ತು.
ತಾಳಗುಪ್ಪ ಶಿವಮೊಗ್ಗ ನಡುವಿನ ರೈಲು ಮಾರ್ಗ ಈ ಕೋವಿಡ್ ಕಾಲದಲ್ಲಿ ಮೂರು ಬಾರಿ ಪರೀಕ್ಷೆಗೊಳಪಟ್ಟಿದ್ದು ಸುವ್ಯವಸ್ಥಿತವಾಗಿದೆ. ಈಗಲೂ ವಾರದಲ್ಲಿ ಕೆಲವು ಅಧಿಕಾರಿಗಳು ಪರೀಕ್ಷಾರ್ಥ ರೈಲು ಓಡಿಸುತ್ತಿದ್ದಾರೆ. ತಾಳಗುಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ರೈಲ್ವೆ ಕ್ರಾಸಿಂಗ್ನ ದುರಸ್ತಿ ಕೆಲಸ ಕೊನೆಗೊಂಡಿದೆ. ಇನ್ನೂ ವಿಳಂಬ ಮಾಡಬಾರದು. – ಕುಮಾರಸ್ವಾಮಿ, ರೈಲ್ವೆ ಹೋರಾಟ ಸಮಿತಿ ಸಾಗರ
ಕೋವಿಡ್ ಕಾಲದಲ್ಲಿ ಜನರ ಆರೋಗ್ಯ ಸುಧಾರಿಸಿದೆ ಎಂಬ ಮಾತುಗಳಿವೆ. ಆದರೆ ಸೋಂಕಿನ ಭಯದಿಂದ ಕ್ಯಾನ್ಸರ್ ಮೊದಲಾದ ಅಪಾಯಕ್ಕೊಳಗಾದವರು ಮೊದಲಿನ ಹಂತದಲ್ಲಿಯೇ ಪರೀಕ್ಷೆಗೊಳಗಾಗುವುದನ್ನುರೈಲಿನಂತಹ ಸೌಲಭ್ಯ ಇಲ್ಲದ ಕಾರಣಕ್ಕೂ ಮುಂದೂಡುತ್ತಿದ್ದಾರೆ. ಇದರಿಂದ ಕಾಯಿಲೆ ಮೂರು ನಾಲ್ಕನೇ ಹಂತಕ್ಕೆ ಮುಟ್ಟುವ ಅಪಾಯವಿದೆ. ಬಸ್ ಸಂಚಾರಕ್ಕಿಂತ ರೈಲು ಮಾರ್ಗಗಳು ತೆರೆದುಕೊಳ್ಳಬೇಕಾಗಿದೆ. -ಡಾ| ಶ್ರೀಪಾದ ರಾವ್, ರೈಲ್ವೆ ಪ್ರಯಾಣಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
Modi ಕೀಳುಮಟ್ಟಕ್ಕಿಳಿದು ಮಾತನಾಡಬಾರದು: ಸಿಎಂ ಸಿದ್ದರಾಮಯ್ಯ
ದಿಂಗಾಲೇಶ್ವರ ಶ್ರೀಗೆ ನಾಮಪತ್ರ ವಾಪಾಸ್ ಪಡೆದು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ: ಸಿಎಂ
B.Y. Raghavendra: ಇಂಟರ್ಸಿಟಿ ರೈಲಿನ ಪ್ರಯಾಣಿಕರ ಬಳಿ ಬಿವೈಆರ್ ಮತಬೇಟೆ
Shimoga; ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಗೆ ಹಿಂದೂಗಳ ಬಲಿ: ರಾಘವೇಂದ್ರ ಕಿಡಿ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!