ತೀರ್ಥಹಳ್ಳಿ : ಜಯಚಾಮರಾಜೇಂದ್ರ ಆಸ್ಪತ್ರೆಯ ವೈದ್ಯರ ಕಾರು ಅಪಘಾತ, ಅಪಾಯದಿಂದ ಪಾರಾದ ದಂಪತಿ
Team Udayavani, Sep 11, 2022, 10:52 AM IST
ತೀರ್ಥಹಳ್ಳಿ : ತಾಲೂಕು ಜಯಚಾಮರಾಜೇಂದ್ರ ಆಸ್ಪತ್ರೆಯ ಖ್ಯಾತ ಮಕ್ಕಳ ವೈದ್ಯರಾದ ಡಾ. ಪ್ರಭಾಕರ್ ಅವರ ಕಾರು ಆಲ್ದೂರು ಬಳಿ ರಸ್ತೆ ಅಪಘಾತವಾಗಿದ್ದು ಅದೃಷ್ಟವಶಾತ್ ದಂಪತಿಗಳು ಅಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಡಾ. ಪ್ರಭಾಕರ್ ಅವರ ಪತ್ನಿ ಪರೀಕ್ಷೆಯೊಂದನ್ನು ಬರೆಯಲು ಭಾನುವಾರ ಬೆಳಿಗ್ಗೆ 5 ಘಂಟೆಗೆ ದಂಪತಿಗಳಿಬ್ಬರೂ ತೀರ್ಥಹಳ್ಳಿಯಿಂದ ತೆರಳುತ್ತಿದ್ದಾಗ ಬೆಳಿಗ್ಗೆ ಆಲ್ದೂರು ಬಳಿ ಅಪಘಾತವಾಗಿದ್ದು ಕಾರು ಜಖಂಗೊಂಡಿದ್ದು ಡಾ.ಪ್ರಭಾಕರ್ ದಂಪತಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : 2023ಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಹೀಂದ್ರಾ XUV400 ಎಲೆಕ್ಟ್ರಿಕ್ ಕಾರು