ತುಂಗಾ ನದಿಯಲ್ಲಿ 45 ಕಿಮೀ ಸಂಚರಿಸಿ ಸಾಹಸ ಮೆರೆದ ತಂಡ
Team Udayavani, Aug 8, 2020, 3:15 PM IST
ಶಿವಮೊಗ್ಗ: ತುಂಬಿದ ತುಂಗೆಯಲ್ಲಿ ಪ್ರಯಾಣ ಆರಂಭಿಸಿದ ತಂಡ.
ಶಿವಮೊಗ್ಗ: ಸಾಹಸಿ ಅ.ನಾ. ವಿಜಯೇಂದ್ರರಾವ್ ತಂಡ ಶುಕ್ರವಾರ ಬೆಳಗ್ಗೆ ಶಿವಮೊಗ್ಗದ ಕೊರ್ಪಲಯ್ಯನ ಛತ್ರದಿಂದ ತುಂಬಿರುವ ತುಂಗಾ ನದಿಯಲ್ಲಿಕಯಾಕಿಂಗ್ (ಎರಡು ಜನ ಕೂಡುವ ದೋಣಿ) ಮೂಲಕ ಹೊನ್ನಾಳಿ ತಾಲೂಕಿನ ರಾಂಪುರದವರೆಗೆ ಸುಮಾರು 45 ಕಿ.ಮೀ. ದೂರ ಕ್ರಮಿಸಿ ಸಾಹಸ ಮೆರೆದಿದ್ದಾರೆ.
ಪ್ರತಿ ಬಾರಿಯೂ ಇಂತಹ ಸಾಹಸ ಮಾಡುವಾಗ ಅವರು ಸಾಮಾಜಿಕ ವಿಷಯವನ್ನು ಇಟ್ಟುಕೊಂಡು ಜಾಗೃತಿ ಮೂಡಿಸುತ್ತಿದ್ದು, ಈ ಬಾರಿ ರಾಂಪುರದ ದನಗಳ ಜಾತ್ರೆ ವಿಷಯವನ್ನಿಟ್ಟುಕೊಂಡು ದೂರ ಪ್ರಯಾಣ ಕೈಗೊಂಡಿದ್ದು, ಇದರ ಜತೆಗೆ ವಿಪತ್ತಿನ ಸಮಯದಲ್ಲಿ ಹೇಗೆ ರಕ್ಷಣೆ ಮಾಡಬಹುದು, ಮಾಡಿಕೊಳ್ಳಬಹುದು ಎಂಬ ಹಿನ್ನೆಲೆ ಮತ್ತು ತರಬೇತಿಗಾಗಿ ಈ ಬಾರಿಯ ಪಯಣ ಸಾಗಿದೆ ಎಂದು ಸಾಹಸಿ ಅ.ನಾ. ವಿಜಯೇಂದ್ರ ತಿಳಿಸಿದ್ದಾರೆ. ಇದೊಂದು ಸುಂದರ ಅನುಭವ. ತುಂಬಿದ ತುಂಗೆಯಲ್ಲಿ ಅಪಾಯಕಾರಿ ಸುಳಿಗಳಿರುತ್ತವೆ. ಬೇಡ ಎಂದು ಹೇಳಿದ್ದರು. ಆದರೆ ಈಗಾಗಲೇ ಇಂತಹ ಅನೇಕ ಸಾಹಸ ಮಾಡಿರುವುದರಿಂದ ಹಾಗೂ ಅನುಭವ ಇರುವುದರಿಂದ ಇದೇನು ತೊಂದರೆಯಾಗಲಾರದೆಂಬ ಆತ್ಮವಿಶ್ವಾಸದೊಡನೆ ಈ ಪ್ರಯಾಣ ಕೈಗೊಂಡಿದ್ದೆವು. ಅ.ನಾ. ವಿಜಯೇಂದ್ರರಾವ್, ಶ್ರೀನಾಥ್ ನಗರಗದ್ದೆ, ಸಾಸ್ವೆಹಳ್ಳಿ ಸತೀಶ್, ಹರೀಶ್ ಪಟೇಲ್, ಅ.ನಾ. ಶ್ರೀಧರ್ ತಂಡದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು