ಸಾಮಾಜಿಕ ಕ್ಷೇತ್ರದಲ್ಲಿ ರಚನಾತ್ಮಕ ಬದಲಾವಣೆ ಅಗತ್ಯ
Team Udayavani, Feb 12, 2019, 11:09 AM IST
ಸಾಗರ: ಸಾಮಾಜಿಕ ಕ್ಷೇತ್ರದಲ್ಲಿ ರಚನಾತ್ಮಕ ಬದಲಾವಣೆ ಅಗತ್ಯವಾಗಿದೆ. ಅಂತಹ ಬದಲಾವಣೆಗೆ ಚರಕದಂತಹ ಯಶಸ್ವಿ ಸಂಸ್ಥೆಗಳು ಮಾದರಿಯಾಗಿವೆ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಜಸ್ಬೀರ್ ಸಿಂಗ್ ಹೇಳಿದರು.
ತಾಲೂಕಿನ ಹೆಗ್ಗೋಡಿನ ಚರಕ ಆವರಣದಲ್ಲಿ ಭಾನುವಾರ ಚರಕ ಉತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಕಾಯಕ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಈಗ ಮಾತು ಮತ್ತು ಕೃತಿಯ ನಡುವೆ ಅಂತರ ನಿರ್ಮಾಣವಾಗಿದೆ. ನಮ್ಮ ಜೀವನ ಕ್ರಮ ಮತ್ತು ವಿಚಾರಗಳು, ಮಾತುಗಳು ಭಿನ್ನವಾಗಿವೆ. ಜೀವನ ಮತ್ತು ವಿಚಾರಗಳ ನಡುವೆ ಪ್ರತ್ಯೇಕತೆ ನಿರ್ಮಾಣವಾಗಿದೆ. ಅದರಲ್ಲಿಯೂ ರಾಜಕೀಯದಲ್ಲಿ ಈ ಅಂತರ ಹೆಚ್ಚಾಗಿದೆ. ಇಂತಹ ಕಾಲದಲ್ಲಿ ಸಾಮಾಜಿಕ ಬದಲಾವಣೆ ಅನಿವಾರ್ಯವಾಗಿದೆ ಎಂದರು.
ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಗುಡಿ ಕೈಗಾರಿಕೆ, ಗೃಹ ಕೈಗಾರಿಕೆಗಳನ್ನು ಬೆಳೆಸುವ, ಪ್ರೋತ್ಸಾಹಿಸುವ ಕೆಲಸ ಸ್ವಾತಂತ್ರ್ಯದ ನಂತರದ ಯಾವುದೇ ಸರ್ಕಾರಗಳು ಮಾಡಿಲ್ಲ. ಹಳ್ಳಿಗಳಲ್ಲಿನ ಕೈ ಉತ್ಪಾದನೆಗಳ ಪುನಶ್ಚೇತನದ ಬೃಹತ್ ಯೋಜನೆಗಳನ್ನು ರೂಪಿಸಿಲ್ಲ. ಕೈ ಉತ್ಪನ್ನಗಳ ವಿಶೇಷತೆ, ಮಹತ್ವವನ್ನು ಚರಕ ಸಾಧಿಸಿ ತೋರಿಸಿದೆ. ಗ್ರಾಮೀಣ ಹೆಣ್ಣುಮಕ್ಕಳಿಗೆ ಉದ್ಯೋಗ ಮತ್ತು ಆತ್ಮವಿಶ್ವಾಸ ನೀಡಿದೆ. ಅಂಥ ಚರಕದ ಮಾದರಿಯಲ್ಲಿ ಗ್ರಾಮೀಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಸುಮಾರು 800 ಜನ ಮಹಿಳೆಯರು ಚರಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತಷ್ಟು ಮಹಿಳೆಯರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಅವರೆಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಿದೆ. ಆದರೆ ಇಲಾಖೆಯ ಸಹಕಾರ ಅಗತ್ಯ. ಇಲಾಖೆ ಮತ್ತಷ್ಟು ಸ್ಪಂದಿಸಿದರೆ, ನೇಕಾರಿಕೆ, ಬಣ್ಣಗಾರಿಕೆ, ಕೈಮಗ್ಗ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಸಾಧ್ಯ ಎಂದರು.
ರೇಣುಕಾ ಪ್ರಾರ್ಥಿಸಿದರು. ಮಧುರಾ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕೈಮಗ್ಗ ನೇಯ್ಗೆ ವಿಭಾಗದಲ್ಲಿ ಶಾರದಾ ಮತ್ತು ಪಾರ್ವತಿ, ಹೊರ ಊರು ಕೈ ಮಗ್ಗ ನೇಯ್ಗೆ ವಿಭಾಗದಲ್ಲಿ ವ್ಯಾಸರಾಯ ಶೆಟ್ಟಿಗಾರ್ ಕಿನ್ನಿಗೋಳಿ, ಈರಣ್ಣ ಹನುಮಂತಪ್ಪ ಕಾಟರಕಿ ಗಜೇಂದ್ರಗಢ, ಹೊಲಿಗೆ ವಿಭಾಗದಲ್ಲಿ ಅನಿತಾ, ನಾಗರತ್ನ, ಇತರೆ ವಿಭಾಗದಲ್ಲಿ ರಮೇಶ್ ಎ.ವಿ., ಹೇಮಲತಾ ಹಾಗೂ ದೇಸಿ ಮಾರಾಟ ವಿಭಾಗದಲ್ಲಿ ಭಾಗ್ಯ ಅವರಿಗೆ ಕಾಯಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
ನನ್ನ ಆರೋಪಗಳಿಗೆ ಬಿಎಸ್ವೈ ಪ್ರತಿಕ್ರಿಯೆ ನೀಡಲೇ ಬೇಕು: ಈಶ್ವರಪ್ಪ
Sagara: ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವು
Madhu Bangarappa, ಬೇಳೂರು ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ನಿರ್ಗಮನ: ಹಕ್ರೆ
MUST WATCH
ಹೊಸ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ