ಶಿಖರ ಏರುವುದು ಸುಲಭವಲ


Team Udayavani, Jun 12, 2018, 4:19 PM IST

cta-4.jpg

ಸೊರಬ: ಸಾಧನೆಗೆ ಶಿಕ್ಷಣ, ಸೌಲಭ್ಯಗಳು ಮುಖ್ಯವಾಗುವುದಿಲ್ಲ. ಗುರಿ ಸಾಧಿಸಬೇಕೆಂಬ ಛಲವಿದ್ದಲ್ಲಿ ಅಗತ್ಯ ಸೌಲತ್ತುಗಳನ್ನು ದೊರಕಿಸುವ ಹೃದಯ ವೈಶಾಲ್ಯ ಇರುವವರು ಸಮಾಜದಲ್ಲಿ ಇರುತ್ತಾರೆ. ಇಂತಹವರ ನೆರವು
ಸಾಧಕರಿಗೆ ಬೆನ್ನೆಲಬಾಗಿ ನಿಲ್ಲುತ್ತದೆ ಎಂದು ಮೌಂಟ್‌ ಎವರೆಸ್ಟ್‌ ಶಿಖರರೋಹಿ ವಿಕ್ರಮ್‌ ಹೊನ್ನಾಳಿ ಹೇಳಿದರು.

ತಾಲೂಕಿನ ಆನವಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಯಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಂದಿಗೆ ತಮ್ಮ ಶಿಖರಾರೋಹಣದಲ್ಲಿ ಆದ ಅನುಭವಗಳನ್ನು ಹಂಚಿಕೊಂಡು ಅವರು ಮಾತನಾಡಿದರು.

ಮೌಂಟ್‌ ಎವರೆಸ್ಟ್‌ನಂತ ಶಿಖರ ಏರುವುದು ಸುಲಭದ ಮಾತಲ್ಲ. ಕಣ್ಣು ಸುತ್ತ ನೋಡಿದಷ್ಟು ದೂರ ಹಿಮದಿಂದ
ಆವೃತವಾದ ಶಿಖರಗಳು, ಕೊರೆಯುವ ಚಳಿ, ಕುಡಿಯಲು ನೀರು ಬೇಕೆಂದರೂ ಮಂಜನ್ನೇ ಕರಗಿಸಿ ಕುಡಿಯಬೇಕಾದ ಅನಿವಾರ್ಯತೆ ಇರುತ್ತದೆ ಎಂದರು.

 ಅಗತ್ಯವಿದ್ದಷ್ಟು ಮಾತ್ರ ಆಹಾರ ಸೇವನೆ ಹಾಗೂ ಪ್ರಕೃತಿಯೊಂದಿಗೆ ಹೋರಾಟ ಮಾಡಿ ಹಳ್ಳಕೊಳ್ಳ, ಪ್ರಪಾತಗಳನ್ನು ದಾಟಿ ಶಿಖರ ಏರುವುದು ಅತ್ಯಂತ ಕಷ್ಟಕರ. ಇಂತಹ ಅನುಭವಗಳೊಂದಿಗೆ ನಾನು ಶಿಖರದ ತುದಿಗೇರಿ ರಾಷ್ಟ್ರದ ಹಾಗೂ ಕನ್ನಡ ನಾಡಿನ ಒಬ್ಬ ಪ್ರತಿನಿ ಯಾಗಿ ಕನ್ನಡದ ಮತ್ತು ರಾಷ್ಟ್ರ ಧ್ವಜವನ್ನು ಹಾರಿಸಿದ್ದು ನನ್ನ ಮನಸ್ಸಿನಲ್ಲಿ ಬಹಳ ಉಲ್ಲಾಸ ನೀಡಿತು ಎಂದು ಹೇಳಿದರು.

ಹಿಮಗಳಿಂದ ಆವೃತವಾದ ಗಿರಿ ಪರ್ವತಗಳನ್ನು ಏರುವ ಮೊದಲು ನಮಗೆ ಅಗತ್ಯ ತರಬೇತಿ ನೀಡಿದ್ದಲ್ಲದೆ, ಸಲಕರಣೆಯನ್ನು ಸಹ ಒದಗಿಸಲಾಗಿತ್ತು. ಏ. 11ರಂದು ಶಿಖರಾರೋಹಣವನ್ನು ಆರಂಭಿಸಿದ ನಾವು, ಮೇ 17ಕ್ಕೆ
ಹಿಂದುರಿಗಿದೇವು. ಶಿಖರ ಏರುವ ಸಂದರ್ಭದಲ್ಲಿ ಒಂದು ಮತ್ತು ಎರಡನೇ ಹಂತ ದಾಟುವಾಗ ಕೊಂಚ ನಿರಳರಾಗಿದ್ದ ನಾವು, ಮೂರನೇ ಹಂತಕ್ಕೆ ಪಾದಾರ್ಪಣೆ ಮಾಡಿದಾಗ ಪ್ರಕೃತಿಯ ಪ್ರತಿರೋಧ ಎದುರಿಸಬೇಕಾಯಿತು.

ಗಿರಿ ಶಿಖರ ಏರಿದಂತೆ ಆಮ್ಲಜನಕದ ಕೊರತೆಯಿಂದಾಗಿ ಉಸಿರಾಡಲು ತೊಂದರೆಯಾದಾಗ ಐದು ಕೆ.ಜಿ. ತೂಕ
ಆಕ್ಸಿಜನ್‌ ಸಿಲಿಂಡರ್‌ ಆಳವಡಿಸಿಕೊಂಡು ಉಸಿರಾಟದ ತೊಂದರೆಯನ್ನು ನಿವಾರಿಸಿಕೊಳ್ಳುವಂತಾಯಿತು ಎಂದರು.
 
ಆಳದ ಪ್ರಪಾತಗಳನ್ನು ದಾಟುವಾಗ ಶೇರ್ಪಗಳ ಸಹಾಯದಿಂದ ದಾಟಿದೆವು. ಶಿಖರದ ಮೇಲೇರುತ್ತಿದ್ದಂತೆ ಅಲ್ಲಲ್ಲಿ ಕೊಳ್ಳಗಳಲ್ಲಿ ನಾಲ್ಕಾರು ಪರ್ವತಾರೋಹಿಗಳ ಶವವನ್ನು ಕಂಡಾಗ ಎದೆ ನಡುಗಿತು. ಆದರೂ ಗುರಿ ಮುಟ್ಟಲೇ ಬೇಕೆಂಬ ಛಲದಿಂದ ನಾವಿದ್ದ 25 ಜನರ ತಂಡದಲ್ಲಿ 8 ಜನ ಮಾತ್ರ ಶಿಖರದ ತುದಿಗೇರಲು ಸಾಧ್ಯವಾಯಿತು ಎಂದು
ಹೇಳಿದರು.

 ಶಿಖರದ ತುದಿಗೆ ಪಾದಾರ್ಪಣೆ ಮಾಡುತ್ತಿದ್ದಂತೆ ಮೈಯಲ್ಲಾ ರೋಮಾಂಚನ, ವಿಶ್ವದ ಅತ್ಯಂತ ಎತ್ತರದ ಪ್ರದೇಶ ಮುಟ್ಟಿದ ಹೆಮ್ಮೆ. ಕನ್ನಡ ನಾಡಿನ ಹಾಗೂ ದೇಶದ ಧ್ವಜ ಹಾರಿಸಿದ್ದು ಪದಗಳಲ್ಲಿ ಹೇಳಲು ಅಸಾಧ್ಯ ಎಂದು ತಮ್ಮ ಪರ್ವತಾರೋಹಣ ಸಂದರ್ಭದಲ್ಲಾದ ಅನುಭವಗಳನ್ನು ಹಂಚಿಕೊಂಡರು. 

ಈ ವೇಳೆ ಮೌಂಟ್‌ ಶಿಖರ ಏರಿದ ಪ್ರಥಮ ಪರ್ವತಾರೋಹಿಗಳಾದ ಥೇನ್‌ ಸಿಂಗ್‌ ಮತ್ತು ಎಡ್ಮಂಡ್‌ ಹಿಲ್ಲರಿ ಸ್ನೇಹದ ಬಗ್ಗೆ ಸ್ಮರಿಸಿ, ಇವರಲ್ಲಿ ಇದುವರೆಗೂ ಪ್ರಥಮ ಮೌಂಟ್‌ ಎವರೆಸ್ಟ್‌ ಶಿಖರದ ತುದಿಗೆ ಕಾಲಿಟ್ಟ ಪರ್ವತಾರೋಹಿ ಯಾರೆಂಬುದು ಅವರು ಇದುವರೆಗೂ ಹೇಳಿಲ್ಲ. ಇದೇ ಸ್ನೇಹ. ಸಾಧನೆಗಿಂತ ಸ್ನೇಹ ದೊಡ್ಡದು ಎಂಬುವುದನ್ನವರು ತೋರಿಸಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬಿಇಒ ಮಂಜುನಾಥ್‌, ಉಪ ಪ್ರಾಂಶುಪಾಲ ಪರಮೇಶ್ವರಪ್ಪ, ಜಿಪಂ ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್‌, ಗ್ರಾಪಂ
ಉಪಾಧ್ಯಕ್ಷ ಕೇಶವ ರಾಯ್ಕರ್‌, ಸದಸ್ಯರಾದ ಉಮೇಶ್‌ ಉಡುಗಣಿ, ಖಲಂದರ್‌ ಸಾಬ್‌, ಕೃಷ್ಣಮೂರ್ತಿ, ರೂಪಾ ಇತರರಿದ್ದರು. 

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.