ಸುಗಮ ಸಂಚಾರಕ್ಕೆ ಬಂತು ಆಪತ್ತು
Team Udayavani, Oct 29, 2019, 3:53 PM IST
ಹೊಸನಗರ: ಭೀಕರ ಮಳೆಗೆ ರಾಣಿಬೆನ್ನೂರು-ಕೊಲ್ಲೂರು, ಬೈಂದೂರು ಹೆದ್ದಾರಿ ಮಾರ್ಗದ ಮಡೋಡಿ ಸೇತುವೆ ದಂಡೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದ್ದು, ಈಗಾಗಲೇ ದುರಸ್ತಿಗೊಂಡಿದೆ. ಆದರೆ ಆ ವೇಳೆ ಪರ್ಯಾಯ ಮಾರ್ಗವಾಗಿ ಕಂಡುಬಂದ ಮತ್ತಿಕೈಯಿಂದ ಮಡೋಡಿ ಗ್ರಾಮೀಣ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರವೇ ಕಷ್ಟ ಎಂಬಂತಾಗಿದೆ.
2012ರಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಹೊಂದಿದ ಹೊಸನಗರ ತಾಲೂಕಿನ ಹೊಸೂರು ಗ್ರಾಪಂ ವ್ಯಾಪ್ತಿಯ ಮತ್ತಿಕೈ-ಮಡೋಡಿ ವರೆಗಿನ ಮೂರುವರೆ ಕಿಮೀ ರಸ್ತೆಯ ಹದಗೆಟ್ಟ ವ್ಯವಸ್ಥೆ ಇದು.
ಮಡೋಡಿ ಎಫೆಕ್ಟ್: ನಗರ ಹೋಬಳಿಯಲ್ಲಿ ಸುರಿದ ಭೀಕರ ಮಳೆಯಿಂದಾಗಿ ರಾತ್ರೋರಾತ್ರಿ ರಾಣಿಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಮಡೋಡಿ ಸೇತುವೆ ದಂಡೆ ಸುಮಾರು 60 ಮೀ ನಷ್ಟು ಕೊಚ್ಚಿಹೋಗಿ ಪ್ರಮುಖ ಸಂಪರ್ಕ ಕಡಿತವಾಗಿತ್ತು. ಅಲ್ಲದೆ ಕೊಲ್ಲೂರು, ಸಿಗಂದೂರು ಸಂಪರ್ಕಕ್ಕೂ ಸಂಚಕಾರ ಬಂದಿದ್ದು, ಈ ವೇಳೆ ಪರ್ಯಾಯ ಮಾರ್ಗವಾಗಿ ಉಪಯೋಗಕ್ಕೆ ಬಂದಿದ್ದು ಕಟ್ಟಿನಹೊಳೆ-ಗೌರಿಕೆರೆ ಮಾರ್ಗ ಮತ್ತು ಮತ್ತಿಕೈ-ಮಡೋಡಿ ಮಾರ್ಗ. ಸುಮಾರು ಎರಡು ತಿಂಗಳ ಕಾಲ ವಾಹನಗಳ ನಿರಂತರ ಸಂಚಾರದಿಂದಾಗಿ ಇದೀಗ ಮಾರ್ಗಕ್ಕೆ ಕುತ್ತು ತಂದಿದೆ.
ಸ್ಥಳೀಯರ ಸಂಪರ್ಕ ಕೊಂಡಿ: ಮತ್ತಿಕೈ ಮಡೋಡಿ ಗ್ರಾಮೀಣ ರಸ್ತೆ ನೂರಾರು ಕುಟುಂಬಗಳ ಸಂಪರ್ಕ ಸೇತುವಾಗಿದೆ. 2012ರಲ್ಲಿ ಅಭಿವೃದ್ಧಿಗೊಂಡು 7 ವರ್ಷ ಕಳೆದರೂ ರಸ್ತೆ ಉತ್ತಮವಾಗಿತ್ತು. ಸುತ್ತಮುತ್ತಲಿನ ಹಳ್ಳಿಗರಿಗೆ ಪ್ರಮುಖ ಮಾರ್ಗವಾಗಿತ್ತು. ಇದೀಗ ಮಾರ್ಗ ಹದಗೆಟ್ಟಿದ್ದು ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ