ಶಿವಮೊಗ್ಗ: ಹರ್ಷನ ಕುಟುಂಬಕ್ಕೆ ಸಾಂತ್ವಾನ ಹೇಳಿದ ವಿವಿಧ ಮಠಾಧೀಶರು
Team Udayavani, Feb 26, 2022, 11:35 AM IST
ಶಿವಮೊಗ್ಗ: ಇತ್ತೀಚೆಗೆ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ವಿವಿಧ ಮಠಾಧೀಶರು ಸಾಂತ್ವಾನ ಹೇಳಿದರು.
ಸಾಂತ್ವಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣ ಶ್ರೀ, ದೇಶದಲ್ಲಿ ಎಲ್ಲರೂ ಭಾವೈಕ್ಯತೆ ಹಾಗೂ ರಾಷ್ಟ್ರೀಯತೆಯನ್ನು ಹೊಂದಬೇಕು. ರಾಷ್ಟ್ರ ಉಳಿದರೇ ನಾವು ಉಳಿದಂತೆ ಎಂಬ ಭಾವ ಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಳಿಸುತ್ತಿದ್ದ ಯುವ ಉತ್ಸಾಹಿ ಹರ್ಷ ಹತ್ಯೆಯಾಗಿದ್ದಾನೆ. ಹಿಂಸಾತ್ಮಕ ಸಂಘರ್ಷದಲ್ಲಿ ಹರ್ಷ ಹತ್ಯೆಯಾಗಿದ್ದಾನೆ. ಈ ರೀತಿಯ ಹಿಂಸಾತ್ಮಕ ಸಂಘರ್ಷ ಯಾರಿಗೂ ಭೂಷಣವಲ್ಲ ಎಂದರು.
ಇದನ್ನೂ ಓದಿ:ಸೂಚನೆಯಿಲ್ಲದೆ ಗಡಿ ಭಾಗಕ್ಕೆ ತೆರಳಬೇಡಿ: ಉಕ್ರೇನ್ ನಲ್ಲಿರುವ ಭಾರತೀಯರಿಗೆ ಸೂಚನೆ
ಹರ್ಷನನ್ನು ಕಳೆದುಕೊಂಡು ರಾಜ್ಯ ಹಾಗೂ ರಾಷ್ಟ್ರವೇ ದುಃಖದಲ್ಲಿದೆ. ಹಾಗೇಯೇ ಕುಟುಂಬವು ನೋವಿನಲ್ಲಿದ್ದು, ಎಲ್ಲರೂ ಸಾಂತ್ವಾನ ಹೇಳಿದ್ದೇವೆ. ಸಂತರ ನಡೆ ಸಾಂತ್ವಾನದ ಕಡೆ ಎಂಬಂತೆ ನೊಂದವರಿಗೆ ಸಾಂತ್ವಾನ ಹೇಳಿದ್ದೇವೆ. ಶಾಂತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಆಂತರಿಕವಾಗಿ ಹಾಗೂ ಬಹಿರಂಗವಾಗಿ ಎಲ್ಲಡೆ ನೆಲೆಸಲಿ ಎಂದು ಶ್ರೀಗಳು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ