ಮಲೆನಾಡಿನ ಬೆಳವಣಿಗೆ ಪ್ರಕ್ರಿಯೆ ವಿಭಿನ್ನ: ಡಾ| ಮನು
Team Udayavani, Jul 17, 2021, 12:59 PM IST
ಸಾಗರ: ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಉಳಿದ ಕಡೆಗಳಲ್ಲಿ ಕಂಡುಬರುವ ಚಾಲಕ ಶಕ್ತಿಗಳು ಮಲೆನಾಡಿನಲ್ಲಿ ಕಂಡುಬರುವುದಿಲ್ಲ. ಮಲೆನಾಡಿನ ನಿರ್ದಿಷ್ಟ ಭೌಗೋಳಿಕ ಸಂರಚನೆಯಿಂದಾಗಿ ಬೆಳವಣಿಗೆ ಪ್ರಕ್ರಿಯೆಗಳು ವಿಭಿನ್ನವಾಗಿವೆ ಎಂದು ಹಿಮಾಚಲ ಪ್ರದೇಶದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ|ಮನು ವಿ. ದೇವದೇವನ್ ಹೇಳಿದರು.
ತಾಲೂಕಿನ ನೀನಾಸಂ ಸಂಸ್ಥೆ ಆಶ್ರಯದಲ್ಲಿ ಕೆ.ವಿ.ಸುಬ್ಬಣ್ಣ ಸ್ಮರಣೆ ಅಂಗವಾಗಿ ವೆಬಿನಾರ್ ಮೂಲಕ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸನ ಕಾರ್ಯಕ್ರಮದಲ್ಲಿ “ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿ, ಪಶ್ಚಿಮ ಘಟ್ಟದ ಭೂವಿನ್ಯಾಸ ವಿಶೇಷವಾಗಿದೆ.
ಶಿಲಾಯುಗದ ಕಾಲದಿಂದ ಮಲೆನಾಡು ಭಾಗದಲ್ಲಿ ಮಾನವ ಚಟುವಟಿಕೆಗಳು ಕಂಡುಬರುತ್ತವೆ. ಪ್ರಕೃತಿ ಅನುವು ಮಾಡಿಕೊಟ್ಟ ಸಂಪರ್ಕ ಸಾಧ್ಯತೆಗಳು ಬೆಳವಣಿಗೆಯ ಚಾಲಕ ಶಕ್ತಿಯಾಗಿ ಕೆಲಸ ಮಾಡಿವೆ ಎಂದರು.
ಶಾತವಾಹನರ ಕಾಲದ ರಾಣಿ ನಾಗನಿಕೆ ಅವಧಿಯಲ್ಲಿ ಕೃಷಿ ಚಟುವಟಿಕೆಯ ಆಕರಗಳು ಲಭ್ಯ. ಆನಂತರದ ಆರ್ಥಿಕ ವ್ಯವಸ್ಥೆಯ ಚಾಲಕ ಶಕ್ತಿ ಅಲ್ಪ ಪ್ರಮಾಣದಲ್ಲಿ ಮಲೆನಾಡು ಭಾಗದ ಕೃಷಿ ವಿಸ್ತರಣೆಗೆ ಕಾರಣವಾಗಿದೆ. ಆದ್ದರಿಂದ ಧಾನ್ಯೋತ್ಪಾದನೆಯ ದೃಷ್ಟಿಯಿಂದ ಕೃಷಿ ವಿಸ್ತರಣೆಯಾದುದನ್ನು ಚಾಲಕ ಶಕ್ತಿಯ 2ನೆಯ ಹಂತ ಎಂದು ಗುರುತಿಸಬಹುದಾಗಿದೆ.
ಆನಂತರದ 11-12ನೆಯ ಶತಮಾನದ ಕಾಲಘಟ್ಟದಲ್ಲಿ ಅರ್ಥವ್ಯವಸ್ಥೆಯಲ್ಲಿ ಹಣದ ಬಳಕೆಯಿಂದಾಗಿ ಭತ್ತ ಬೆಳೆಯುತ್ತಿದ್ದ ಕೃಷಿ ಭೂಮಿಯಲ್ಲಿ ನಾಣ್ಯ ಬೆಳೆಗಳಾದ ತೆಂಗಿನಕಾಯಿ, ಅಡಕೆ ಮುಂತಾದವುಗಳನ್ನು ಬೆಳೆಯುವ ಕಾರ್ಯ ಹೆಚ್ಚಾಗುತ್ತದೆ. 16-17ನೆಯ ಶತಮಾನದ ಸಮಯದಲ್ಲಿ ನಾಣ್ಯ ಬೆಳೆಗಳ ಉತ್ಪಾದನೆ ನಿರ್ಣಾಯಕ ಪಾತ್ರ ವಹಿಸಿ ಆರ್ಥಿಕ ಚಟುವಟಿಕೆಯಾಗಿ ವಿಕಾಸವಾಗಿರುವುದನ್ನು ಗಮನಿಸಬಹುದಾಗಿದೆ. ಹೆಚ್ಚಿನ ಆದಾಯ ಹಾಗೂ
ಕಡಿಮೆ ದುಡಿಮೆಯ ಸಮನ್ವಯದಿಂದ ನಾಣ್ಯ ಬೆಳೆಗಳ ವ್ಯವಸ್ಥೆ ವ್ಯಾಪಕವಾಗಲು ಆರಂಭವಾದುದನ್ನು ಗಮನಿಸಬಹುದು. 18ನೇ ಶತಮಾನದಲ್ಲಿ ಭೂ ಮಾಲೀಕರ ಹಸ್ತಾಂತರದ ದೊಡ್ಡ ಪ್ರಕ್ರಿಯೆ ನಡೆದಿರುವುದನ್ನು ಗಮನಿಸಬಹುದು. ಕೃಷಿ ಕಾರ್ಯ, ಅರಣ್ಯ ಬೆಳೆ, ನಾಣ್ಯ ಬೆಳೆ ಅರ್ಥ ವ್ಯವಸ್ಥೆಯ ಮಹತ್ವದ ನಿರ್ಣಾಯಕ ಹಂತವಾಗಿ ಇತಿಹಾಸ ಕಾಲದಿಂದ ವರ್ತಮಾನದವರೆಗೆ ಪಾತ್ರ ವಹಿಸುತ್ತಿರುವುದನ್ನು ಗಮನಿಸಬಹುದಾಗಿದೆ ಎಂದರು.
ಡಾ| ಎಲ್.ಸಿ. ಸುಮಿತ್ರ,ಡಾ| ರಾಜಾರಾಮ ಹೆಗಡೆ ಮತ್ತು ಶಿವಾನಂದ ಕಳವೆ ಕಿರು ಪ್ರತಿಸ್ಪಂದನೆ ನೀಡಿ ಮಾತನಾಡಿದರು. ಕೆ.ವಿ. ಅಕ್ಷರ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?