ಆಧುನಿಕ ಗೋಡ್ಸೆಗಳಿಂದ ಗಾಂಧಿ ಮೌಲ್ಯಗಳ ಹತ್ತಿಕ್ಕುವ ಕೆಲಸ


Team Udayavani, Feb 1, 2019, 11:52 AM IST

shiv.jpg

ಸಾಗರ: ಗಾಂಧಿಯವರ ಮೌಲ್ಯಗಳನ್ನು ಆಧುನಿಕ ಗೋಡ್ಸೆಗಳು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಈ ಕಾಲದ ದೊಡ್ಡ ದುರಂತವಾಗಿದೆ ಎಂದು ಅಖೀಲ ಭಾರತ ವಿಚಾರವಾದಿಗಳ ಸಂಸ್ಥೆಯ ಅಧ್ಯಕ್ಷ ಮಂಗಳೂರಿನ ಪ್ರೊ| ನರೇಂದ್ರ ನಾಯಕ್‌ ಹೇಳಿದರು.

ನ‌ಗರದ ಶಂಕರ ಮಠದ ಸಭಾಭವನದಲ್ಲಿ ಸ್ಪಂದನ ರಂಗ ತಂಡ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತ್ಯಕ್ಕಾಗಿ ಹೋರಾಡುವುದು, ಪ್ರಾಮಾಣಿಕವಾಗಿರುವುದು, ಜಾತ್ಯತೀತ ಮನೋಭಾವ ಹೊಂದಿರುವುದು ಇವೇ ಕೆಲವು ಗಾಂಧಿ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡ ವ್ಯಕ್ತಿಗಳನ್ನು ಹಿಟ್ಲಿಸ್ಟ್‌, ವೇಯಿrಂಗ್‌ ಲಿಸ್ಟ್‌ ಮಾಡಿಕೊಂಡು ಹತ್ಯೆ ಮಾಡಲಾಗುತ್ತಿದೆ. ತಮ್ಮ ಮತ್ತು ಅಧಿಕಾರದ ಮಧ್ಯೆ ಇರುವವರನ್ನು ಆಧುನಿಕ ಗೋಡ್ಸೆಗಳು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ ಎಂದರು.

ಅಖೀಲ ಭಾರತದ ವಿಚಾರವಾದಿಗಳ ಸಂಸ್ಥೆಯ ಉಪಾಧ್ಯಕ್ಷ ಡಾ| ನರೇಂದ್ರ ದಾಬೋಲ್ಕರ್‌, ಪನ್ಸಾರೆ ಮತ್ತು ಡಾ| ಎಂ.ಎಂ.ಕಲ್ಬುರ್ಗಿಯವರನ್ನು ಹತ್ಯೆ ಮಾಡಲಾಗಿದೆ. ಡಾ| ಗಿರೀಶ್‌ ಕಾರ್ನಾಡ್‌, ಭಗವಾನ್‌, ನಿಡುಮಾಮಿಡಿಯ ಸ್ವಾಮಿ ಮತ್ತು ನಾನು ಅವರ ಪಟ್ಟಿಯಲ್ಲಿದ್ದೇವೆ. ಮೌಡ್ಯಗಳ ಅಪಾಯದ ಬಗ್ಗೆ ಮಾತನಾಡುತ್ತೇನೆ. ಆದರೆ ಗೋಡ್ಸೆಯ ಹೊಸ ಸಂತಾನದವರು ನನ್ನಂಥವನನ್ನು ಸಾಯಿಸುವ ಯತ್ನ ಮಾಡುತ್ತಾರೆ ಎಂದರು.

ಗಾಂಧಿಯವರು ಬೋಧಿಸಿದ್ದ ತತ್ವಾದರ್ಶಗಳನ್ನು ಅವರೇ ಹುಟ್ಟುಹಾಕಿದ್ದಲ್ಲ. ಅವರೇ ಹೇಳಿಕೊಂಡ ಹಾಗೇ ಅವರು ಪ್ರತಿಪಾದಿಸಿದ ಸಿದ್ಧಾಂತಗಳು ಬೆಟ್ಟಗುಡ್ಡಗಳಷ್ಟು ಹಳೆಯವು. ಆ ಎಲ್ಲ ಗುಣಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಗುಣಗಳನ್ನು ಅಳವಡಿಸಿಕೊಳ್ಳುವ ಯತ್ನ ಅಗತ್ಯ ಎಂದರು.

ಕವಯಿತ್ರಿ ಮಾಧವಿ ಭಂಡಾರಿ ಕೆರೆಕೋಣ ಮಾತನಾಡಿ, ಪ್ರಚಾರಕ್ಕಾಗಿ ಇಂದು ಗಾಂಧಿಯವರ ದುರುಪಯೋಗವಾಗುತ್ತಿದೆ. ಗಾಂಧಿಯ ಹುಟ್ಟು ಮತ್ತು ಸಾವು ಸತತವಾಗಿ ನಡೆಯುತ್ತಿರುವ ಕ್ರಿಯೆಗಳಾಗಿವೆ. ಗಾಂಧಿ ಮೇಲು ನೋಟಕ್ಕೆ ಸರಳ. ಆದರೆ ಗಾಂಧಿಯಾಗುವುದು ಸರಳ ಸುಲಭವಲ್ಲ ಎಂದರು. ನಾಟಕ ಅಕಾಡೆಮಿಯ ಸದಸ್ಯೆ ಎಂ.ವಿ. ಪ್ರತಿಭಾ ರಾಘವೇಂದ್ರ ನಿರೂಪಿಸಿದರು. ನಂತರ ಸಹಜ ಶಿಕ್ಷಣ ರಂಗದವರಿಂದ ಡಾ| ಆರ್‌.ವಿ.ಭಂಡಾರಿ ರಚಿತ ‘ನಾನೂ ಗಾಂಧೀ ಆಗ್ತೀನೆ’ ಎಂಬ ನಾಟಕವನ್ನು ಆರ್‌. ಸಿದ್ಧಾರ್ಥ, ಶ್ರಾವ್ಯ, ಶ್ರೀಲಕ್ಷ್ಮಿ, ಅನ್ವಿತ, ಸೂಫಿಯಾ, ತಮನ್ನ, ಸಮೀರ್‌, ವೃಷಭ್‌ ಗೌತಮಿ ಮುಂತಾದ ಪುಟ್ಟ ಮಕ್ಕಳು ಅಭಿನಯಿಸಿದರು. ಸತೀಶ್‌ ಶೆಣೈ ಬೆಳಕಿನ ನಿರ್ವಹಣೆ ಮಾಡಿದರು. ಶಿವಕುಮಾರ ಉಳವಿ, ರಾಘವೇಂದ್ರ ಶೆಟ್ಟಿ, ಗುರುಮೂರ್ತಿ ವರದಾಮೂಲ, ಎಂ. ರಾಘವೇಂದ್ರ, ಅನಿತ ಇದ್ದರು.

ಚಿತ್ರಸಿರಿಯಲ್ಲಿ ಉಪನ್ಯಾಸ
ತಾಲೂಕಿನ ಸಿರಿವಂತೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಚಿತ್ರಸಿರಿ’ ಸಂಸ್ಥೆಯ ವತಿಯಿಂದ ಗುರುವಾರ ಆಯೋಜಿಸಿದ್ದ ವೈಜ್ಞಾನಿಕ ಚಿಂತನೆ ವಿಕಸನ ಕಾರ್ಯಕ್ರಮದಲ್ಲಿ ಪ್ರೊ| ನರೇಂದ್ರ ನಾಯಕ್‌ ಅವರು ವಿಶೇಷ ಉಪನ್ಯಾಸ ನೀಡಿದರು. ಪ್ರಶ್ನಿಸದೇ ಇದ್ದರೆ ಮೌಡ್ಯ, ಮೂಢನಂಬಿಕೆಗಳಿಂದ ನಾವು ಯಾವಾಗಲೂ ವಂಚನೆಗೊಳಗಾಗುತ್ತಲೇ ಇರುತ್ತೇವೆ. ಸಮಸ್ಯೆಗಳ ಪರಿಹಾರಕ್ಕೆ ವೈಜ್ಞಾನಿಕವಾಗಿ, ವೈದ್ಯಕೀಯವಾಗಿ ಯತ್ನಿಸಬೇಕೇ ಹೊರತು ಮಾಟ ಮಂತ್ರ, ಪವಾಡಗಳ ಬೆನ್ನತ್ತಿ ಹೋಗಬಾರದು. ಅದರಲ್ಲ್ಲಿಯೂ ವಿದ್ಯಾರ್ಥಿ ಸಮೂಹ ಮೂಢನಂಬಿಕೆಗಳನ್ನು ಪ್ರಶ್ನಿಸುವ ವೈಚಾರಿಕತೆ ಬೆಳೆಸಿಕೊಳ್ಳಬೇಕು. ನಕಲಿ ಪವಾಡಗಳನ್ನು ವೈಜ್ಞಾನಿಕವಾಗಿ ಬಯಲಿಗೆಳೆಯಲು ಸಾಧ್ಯ ಎಂದರು. ಪ್ರಭಾರ ಮುಖ್ಯ ಶಿಕ್ಷಕಿ ಜ್ಯೂಲಿಯಟ್ ಫರ್ನಾಂಡಿಸ್‌ ‘ಚಿತ್ರಸಿರಿ’ಯ ಚಂದ್ರಶೇಖರ್‌, ಶಿಕ್ಷಕರಾದ ಕೆ.ಬಿ. ನಾಯ್ಕ, ಮಂಗಳಾನಾಯ್ಕ ಮತ್ತಿತರರು ಇದ್ದರು.

ಟಾಪ್ ನ್ಯೂಸ್

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

1-asasas

Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.