ಸತತ ಮೂರನೇ ವರ್ಷವೂ ಭೀಕರ ಬರದ ಬರೆ!


Team Udayavani, Jul 31, 2017, 11:51 AM IST

31-SHIV-1.jpg

ಶಿರಾಳಕೊಪ್ಪ: ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿದ್ದ ಶಿಕಾರಿಪುರ ತಾಲೂಕಿನಲ್ಲಿ ಈ ವರ್ಷ ವಾಡಿಕೆಗಿಂತ ಶೇ.23ರಷ್ಟು ಅತಿ ಕಡಿಮೆ ಮಳೆ ಆಗಿದೆ. ಪ್ರಸಕ್ತ ವರ್ಷ ಮಳೆಗಾಲದಲ್ಲಿಯೇ ಭೀಕರ ಬರದ ಛಾಯೆ ಕಂಡು ಬರುತ್ತಿದ್ದು ಇದರಿಂದ ತಾಲೂಕಿನ ಜನತೆ 
ಚಿತಾಕ್ರಾಂತರಾಗಿದ್ದಾರೆ.

ತಾಲೂಕಿನ ಐತಿಹಾಸಿಕ ಕೆರೆಗಳಲ್ಲಿ ಗುಬ್ಬಿಗೂ ಕುಡಿಯಲು ನೀರಿಲ್ಲದೇ ಕೆರೆ‌ಯಂಗಳದಲ್ಲಿ ದನಕರುಗಳು ಹಾಗು ಕುರಿಗಳು ಹಸಿರನ್ನು ಮೇಯುತ್ತಿವೆ. ಮಳೆ ಗಾಲದಲ್ಲಿಯಾದರೂ ಕೊಳವೆ ಬಾಯಿಂದ ನೀರು ಪಡೆದು ನಾಟಿ ಮಾಡಬಹುದೆಂದು ಲೆಕ್ಕ ಕಾಕುತ್ತಿದ್ದ ರೈತರು ಕೊಳವೆಬಾವಿಗಳಲ್ಲಿ ನೀರು ಬತ್ತಿದ್ದರಿಂದ ದಿಕ್ಕು ಕಾಣದಂತಾಗಿದ್ದಾರೆ. ಜುಲೈ ತಿಂಗಳಲ್ಲಿ ಭತ್ತದ ನಾಟಿಕಾರ್ಯ ಮುಗಿಯಬೇಕಾಗಿತ್ತು. ಆದರೆ ತಾಲೂಕಿನಲ್ಲಿ 20ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಭೂಮಿಯಲ್ಲಿ ಜುಲೈ ಕೊನೆಗೆ ಕೃಷಿ ಇಲಾಖೆಯ ಮಾಹಿತಿಯಂತೆ ಕೇವಲ 25 ಹೆಕ್ಟೇರ್‌ನಲ್ಲಿ ಮಾತ್ರ ನಾಟಿ ಮಾಡಲಾಗಿದೆ. ಕಳೆದ ವರ್ಷ ಕೃಷಿ ಇಲಾಖೆಯ ಮಾಹಿತಿಯಂತೆ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ ಆಗಿತ್ತು, ಆದರೆ ಪ್ರಸಕ್ತ ವರ್ಷ ಜುಲೈ ತಿಂಗಳ ಅಂತ್ಯಕ್ಕೆ ಶೇ.23ರಷ್ಟು ಕಡಿಮೆ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಮಳೆಪ್ರಮಾಣ ಕಡಿಮೆ ಆಗುತ್ತಿರುವದನ್ನು ಗಮನಿಸಿ ರೈತರು ತಾಲೂಕಿನಲ್ಲಿ ಭತ್ತ ಬಿತ್ತುವ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದು, ಈ ವರ್ಷ ಅದು ಇನ್ನೂ ಹೆಚ್ಚಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.  ತಾಲೂಕಿನ ಉಡಗಣಿ- ತಾಳಗುಂದ ಹೋಬಳಿಯಲ್ಲಿ ವಿಶೇಷವಾಗಿ ಕೊಳವೆಬಾವಿ ನಂಬಿ ಭತ್ತ ಬೆಳೆಯುತ್ತಿದ್ದ ರೈತರು ಸಸಿ ಅಗೆ ಹಾಕಿ ಕೊಳವೆಬಾವಿಯಲ್ಲಿ ನೀರು ಬತ್ತಿ ದಿಕ್ಕು ಕಾಣದಂತಾಗಿದ್ದಾರೆ. ಸುಡುಬಿಸಿಲು ಪ್ರತಿದಿನ ಹೆಚ್ಚಾಗುತ್ತಿದ್ದು, ಮೆಕ್ಕೆಜೋಳ ಬಿತ್ತೋಣವೆಂದರೆ ಹದವಿಲ್ಲದಂತಾಗಿದೆ.

ಮೆಕ್ಕೆಜೋಳ ಬಿತ್ತಿದ ರೈತರಲ್ಲೂ ಆತಂಕ: ಪ್ರಾರಂಭದಲ್ಲಿ ಸಾಕಷ್ಟು ಮಳೆಬೀಳಬಹುದೆಂದು ಲೆಕ್ಕಾಚಾರದಲ್ಲಿದ್ದ ರೈತರು ಮಳೆ ಕೈಕೊಟ್ಟರೆ ಹೇಗೆ ಎಂದು ಭತ್ತದ ಗದ್ದೆಯಲ್ಲಿಯೂ ಮೆಕ್ಕೆಜೋಳ ಬಿತ್ತಿದ್ದರು. ಈಗ ಚೆನ್ನಾಗಿ ಬೆಳೆದಿರುವ ಜೋಳಕ್ಕೆ ಕುಂಟಿ ಹೊಡೆದು ಕಳೆತೆಗೆದು ರಸಗೊಬ್ಬರ ಹಾಕಿರುವ ರೈತರು ಪ್ರತಿದಿನ ಬೇಸಿಗೆ ಬಿಸಿಲಿನಂತೆ ಬೀಳುತ್ತಿರುವ ಬಿಸಿಲಿನಿಂದ ಉತ್ತಮವಾಗಿ ಬೆಳೆದಿರುವ ಜೋಳ ಎಲ್ಲಿ ಸುಟ್ಟುಹೋಗುತ್ತವೆಯೋ ಎಂಬ ಆತಂಕವನ್ನೂ ಎದುರಿಸುತ್ತಿದ್ದಾರೆ. 

ಐತಿಹಾಸಿಕ ಕೆರೆಯಲ್ಲಿ ಗುಬ್ಬಿ ಕುಡಿಯಲು ನೀರಿಲ್ಲ:
ಶಿಕಾರಿಪುರ ತಾಲೂಕಿನ ತಾಳಗುಂದ ಹೋಬಳಿಯ ಇತಿಹಾಸ ಪ್ರಸಿದ್ಧ ತಾಳಗುಂದ ಪ್ರಣವಲಿಂಗೇಶ್ವರ ದೇವಾಲದ ಕೆರೆ ಹಾಗೂ ಮತ್ತೂಂದು ಐತಿಹಾಸಿಕ ಕೆರೆ ಹಾಗೂ ಹಲವಾರು ವಿದ್ಯಾವಂತರು ಪಿಎಚ್‌ಡಿ ಪಡೆಯಲು ಬಳಸಿಕೊಂಡಂತಹ ಬಂದಳಿಕೆ ಕೆರೆಯಲ್ಲಿ ಹನಿ ನೀರಿಲ್ಲದಂತಾಗಿದೆ. ಕೆರೆದಡದಲ್ಲಿ ಇರುವ ನರಸಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಮಳೆಗಾಲದಲ್ಲಿ ಹಾಹಾಕಾರ ಉಂಟಾಗಿ ನೀರು ಕೊಡುವಂತೆ ಪ್ರತಿಭಟನೆಯನ್ನು ಸಹ ಮಾಡಲಾಗಿದೆ.

ತಾಲೂಕಿನ ಹೊಸೂರು ಹೋಬಳಿಯಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದ್ದು,ವಾಡಿಕೆಗಿಂತ ಶೇ.40ಕ್ಕಿಂತ ಕಡಿಮೆ ಮಳೆ ಆಗಿದೆ. ತಾಲೂಕಿನಲ್ಲಿ ಸಾಕಷ್ಟು ರೈತರು ತೋಟ ಮಾಡಿದ್ದರು. ಕಳೆದ ವರ್ಷ ಹರಸಾಹಸಪಟ್ಟು ತೋಟ ಉಳಿಸಿಕೊಂಡವರು ಈ ವರ್ಷದ ಬರದ ಛಾಯೆಯನ್ನು ನೋಡಿ ಹತಾಶರಾಗಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಕೃಷಿ ಕಾರ್ಮಿಕರು ಮುಂಬರುವ ದಿನಗಳಲ್ಲಿ ಜೀವನ ನಿರ್ವಹಣೆ ಅತಿ ದುರ್ಲಭವಾಗಬಹುದು ಎಂದು ಚಿಂತನೆ ನಡೆಸಿದ್ದು, ಈಗಲೇ ಬೇರೆ ಕಡೆ ಕೆಲಸ ಕಾರ್ಯ ಹುಡುಕಿಕೊಂಡು ಹೋಗುವ ಬಗ್ಗೆ ಹಳೇಮುತ್ತಿಗೆ, ಮಂಚಿಕೊಪ್ಪ ಹಾಗೂ ಇತರ ಕಡೆಗಳ ಜನತೆ ಚಿಂತಿಸುತ್ತಿದ್ದಾರೆ. 

ವಿಶೇಷ ವರದಿ

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

1-asasas

Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.