ಸಾವಿರ ವರ್ಷದ ಹಿಂದಿನ ಭೂದಾನದ ಶಾಸನ ಪತ್ತೆ


Team Udayavani, Nov 18, 2019, 12:53 PM IST

18-November-9

ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಹಿರೇಜಂಬೂರಿನ ಪಕ್ಕದಲ್ಲಿರುವ ದಾಸನಪುರದಲ್ಲಿ ಒಂದು ಸಾವಿರ ವರ್ಷಗಳ ಹಿಂದಿನ ಪ್ರಾಚೀನ ವಿದ್ಯಾಲಯಕ್ಕೆ ಭೂಮಿ ದಾನದ ಶಾಸನ ಇತ್ತೀಚಿಗೆ ಪತ್ತೆಯಾಗಿದೆ.

ದಾಸನಪುರದ ರಾಜಣ್ಣ ಅವರ ಮನೆಯ ಹಿಂಭಾಗದಲ್ಲಿ ಇದು ಪತ್ತೆಯಾಗಿದ್ದು ಇದರ ಕಾಲವು ಕ್ರಿ.ಶ.1058 ಆಗಿದೆ ಎಂದು ಹೇಳಲಾಗುತ್ತಿದೆ. ಇದರ ರಕ್ಷಣೆಯ ಉದ್ದೇಶದಿಂದ ಮನೆ ಮಾಲೀಕರು ಸಿಮೆಂಟಿನ ಅಡಿಪಾಯ ಹಾಕಿ ಸಂರಕ್ಷಿಸಿದ್ದಾರೆ.

ಪ್ರಾದೇಶಿಕ ಇತಿಹಾಸ ಅಧ್ಯಯನಕಾರ ರಮೇಶ ಬಿ. ಹಿರೇಜಂಬೂರು ಶಾಸನ ಪತ್ತೆ ಹಚ್ಚಿ ಪತ್ರಿಕೆಗೆ ವಿವರವಾದ ಮಾಹಿತಿ ನೀಡಿದ್ದಾರೆ.

ಹಿನ್ನೆಲೆ: ದಾಸನಪುರದ ಶಾಸನದ ಮಾಹಿತಿಯು ಪಕ್ಕದ ಹಿರೇಜಂಬೂರಿನ ಶ್ರೀ ವೀರಭದ್ರೇಶ್ವರ ದೇವಾಲಯದ ಬಲಭಾಗದಲ್ಲಿ ನಿಲ್ಲಿಸಲಾದ ಶಾಸನಕ್ಕೆ ಪೂರಕವಾಗಿದ್ದು ಹಿರೇಜಂಬೂರಿನ ಶಾಸನವು ಅಲ್ಲಿನ ಒಂದು ವಿದ್ಯಾಲಯದ ವಿಶಿಷ್ಟತೆಯ ಕುರಿತು ವಿವರಿಸುತ್ತದೆ. ಮೊದಲಿನ ಏಳು ಸಾಲುಗಳಲ್ಲಿ ಆ ವಿದ್ಯಾಲಯದ ಉಪಾಧ್ಯಾಯರಾದ “ಶ್ರೀ ಕೇಶವೋಜ’ರ ವಿದ್ವತ್ತನ್ನು ವರ್ಣಿಸುತ್ತದೆ. ಅವರು ವೇದ, ವೇದಾಂತ, ಆಗಮ, ಪಂಚ ವ್ಯಾಕರಣಗಳಲ್ಲಿ ಅಪಾರ ಜ್ಞಾನ ಉಳ್ಳವರಾಗಿದ್ದರು. ಅವರನ್ನು ಉಕ§ ಶೋಡಶಿ , ವಾಜಪೇಯಾತಿ, ಸಪ್ತ ಸೋಮ ಸಮಸ್ತ ಎಂದು ಹೊಗಳಲಾಗಿದೆ. ಶ್ರೀ ಕೇಶವೋಜರು ಅತ್ರೇಯ ಗೋತ್ರದವರಾಗಿದ್ದು ಜಂಬೂರಿನಲ್ಲಿ ಅವರ ಜೊತೆ ಸಾವಿರ ಮಹಾಜನರು ವಾಸವಾಗಿದ್ದರು ಎಂದು ತಿಳಿಸುತ್ತದೆ.

ಇಂತಹ ಮಹಾ ಶಿಕ್ಷಕರಿದ್ದ ಈ ವಿದ್ಯಾಲಯದ ಮಾಣಿಗಳಿಗೆ , ಉಪಾಧ್ಯಾಯರಿಗೆ ಹಾಗೂ ವಿವಿಧ ಸೇವೆಗಳಿಗೆ ಈ ಕೆಳಗಿನಂತೆ ದಾನ ನೀಡಲಾಗಿದೆ. ಇದನ್ನು ರಕ್ಷಿಸದವರಿಗೆ ಅನಂತ ಪುಣ್ಯವು ಹಾಗೂ ನಾಶ ಮಾಡಿದವರಿಗೆ ಮಲದಲ್ಲಿ ಕ್ರಿಮಿಯಾಗಿ ಜನಿಸುವ ಶಾಪ ಇದೆ ಎಂದು ಖಂಡರಿಸಲಾಗಿದೆ.

ಈ ಶಾಸನವನ್ನು ಹಿರೇಜಂಬೂರಿನ ಮೂಲ ದಾನಶಾಸನದ ಶೈಲಿಯಲ್ಲೇ ರಚಿಸಲಾಗಿದ್ದು ಒಂದೇ ದಿನ ಎರಡೂ ಶಾಸನಗಳನ್ನು ನೆಡಲಾಗಿದೆ. ಈ ಶಾಸನದ ರಚನೆಕಾರ ನಾಗದಾಸಯ್ಯನಾಗಿದ್ದಾನೆ. ಅಗ್ಗಿಷ್ಟಕ್ಕೆ ದಾನ ನೀಡಿದ ಮೂವತ್ತು ಕಮ್ಮ ಭೂಮಿಯು ಈಗ ದೊರೆತಿರುವ ಶಾಸನದ ಸ್ಥಳವೇ ಆಗಿದ್ದು, ಸುಮಾರು ಸಾವಿರ ವರುಷಗಳ ಹಿಂದೆ ಈಗಿನ ದಾಸನಪುರ ಜಂಬೂರಿನ ವಿದ್ಯಾಲಯದ ದಾನ ಭೂಮಿಯಾಗಿತ್ತು ಎಂಬುದು ಇದರಿಂದ ತಿಳಿಯುತ್ತದೆ.

ಹಿರೇಜಂಬೂರಿನ ಶಾಸನದಲ್ಲಿ ಉಲ್ಲೇಖೀತವಾದ ಕೇಶವೋಜ ಉಪಾಧ್ಯಾಯರ ವಿವರಣೆ ದಾಸನಪುರದ ಶಾಸನದಲ್ಲಿಯೂ ಮುಂದುವರಿದಿದ್ದು ಇದರ ಕಾಲವೂ ಕ್ರಿ.ಶ. 1058 ಆಗಿದೆ. ಆದರೆ ದಾನ ನೀಡಿದ ಮೂವತ್ತು ಕಮ್ಮ ಭೂಮಿ ಯಾವುದೆಂದು ಇದುವರೆಗೂ ತಿಳಿದಿರಲಿಲ್ಲ. ಈ ಶಾಸನದ ಪತ್ತೆಯಿಂದಾಗಿ ದಾನ ನೀಡಿದ ಭೂಮಿಯನ್ನು ಗುರುತಿಸಲು ಸಾದ್ಯವಾಗಿದೆ.
ರಮೇಶ್‌ ಬಿ., ಹಿರೇಜಂಬೂರು,
ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರು

ಟಾಪ್ ನ್ಯೂಸ್

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.