ಕಲಾವಿದರ ಸ್ಮರಣೆಗೆ ಹಿರಿಯರ ನೆನಪು ವಿನೂತನ ಕಾರ್ಯಕ್ರಮ


Team Udayavani, Jul 11, 2019, 3:14 PM IST

11-July-32

ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ:
ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ರಾಜ್ಯದ ಗಮನ ಸೆಳೆಯುತ್ತಿರುವ ಯಕ್ಷಗಾನ ಅಕಾಡೆಮಿ ನೂತನವಾಗಿ ಹಿರಿಯರ ನೆನಪು ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಮೂಲೆಗುಂಪಾಗಿದ್ದ, ಸಾಧನೆ ಮಾಡಿಯೂ ಮುಂಚೂಣಿಯಲ್ಲಿ ಕಾಣದವರನ್ನು ಮರಳಿ ನೆನಪಿಸುವ ಕಾರ್ಯಕ್ಕೆ ಯೋಜನೆ ರೂಪಿಸಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಎಂದು ಬಯಲಾಟ ಅಕಾಡೆಮಿಯಿಂದ ಪ್ರತ್ಯೇಕಗೊಂಡ ಬಳಿಕ ಅನೇಕ ಮಾದರಿ ಕಾರ್ಯವನ್ನು ಯಕ್ಷಗಾನ ಅಕಾಡೆಮಿ ನಡೆಸುತ್ತಿದೆ. ಅಕಾಡೆಮಿಯು ಬಡಗು, ಬಡಾ ಬಡಗು, ಮೂಡಲಪಾಯ, ಘಟ್ಟದ ಕೋರೆ, ತೆಂಕು, ತಾಳಮದ್ದಲೆ, ಹಿಮ್ಮೇಳ, ಮುಮ್ಮೇಳದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರನ್ನು ಉತ್ತೇಜಿಸುವಲ್ಲೂ ಮುಂದಿದೆ.

ಏನಿದು ಸ್ಮರಣೆ?: ಯಕ್ಷಗಾನದಲ್ಲಿ ಆಗಿ ಹೋದ ಹಿರಿಯ ಸಾಧಕರ, ಎಲೆಮರೆಯ ಕಾಯಿಯಂಥ ಕಲಾವಿದರುಗಳನ್ನು ಗುರಿತಿಸಿ ನೆನಪಿಸುವ ಕಾರ್ಯವಿದು. ಕಲೆಯನ್ನು ಪ್ರೀತಿಸಿ, ಅದರ ಪೋಷಕ ಪಾತ್ರಧಾರಿಗಳ, ಹಿಮ್ಮೇಳ, ಮೇಕಪ್‌ ಕಲಾವಿದರ ಕುರಿತು ಸಂಸ್ಮರಣೆಯ ವಿಶಿಷ್ಟ ಕಾರ್ಯಕ್ರಮ ಇದಾಗಿದೆ.

ಇಡೀ ರಾಜ್ಯದಲ್ಲಿ ಇಂಥ ಕಾರ್ಯಕ್ರಮವನ್ನು ಗ್ರಾಮೀಣ ಹಾಗೂ ನಗರ ಕೇಂದ್ರಿತವಾಗಿ ನಡೆಸಲು ಯಕ್ಷಗಾನ ಅಕಾಡೆಮಿ ನಿರ್ಧರಿಸಿದೆ. ಯಕ್ಷಗಾನವನ್ನು ಪ್ರೀತಿಸಿ, ಅದರ ಉಳಿವಿಗೆ ತಮ್ಮ ಜೀವನವನ್ನೇ ಶ್ರಮಿಸಿದ ಹಾಗೂ ಸೀಮಿತ ಪ್ರದೇಶದಲ್ಲಿ ಪರಿಚಯಗೊಂಡ ಕಲಾವಿದರನ್ನು ಮುಖ್ಯ ವಾಹಿನಿಯಲ್ಲಿ ನೆನಪಿಸಿಕೊಳ್ಳುವುದು ಇದರ ಮೂಲ ಆಶಯ.

ಅಕಾಡೆಮಿ ಪಾಲೇನು?: ನೂತನ ಯೋಜನೆಗೆ ಯಕ್ಷಗಾನ ಅಕಾಡೆಮಿ ಕಲಾಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ನಡೆಸುವ ಕಾರ್ಯಕ್ರಮಗಳಿಗೆ ಹತ್ತು ಸಾವಿರ ರೂ.ಗಳ ನೆರವನ್ನು ಅಕಾಡೆಮಿ ಕೊಡಲಿದೆ. ಬೆಂಗಳೂರಿನ ಜೆ.ಸಿ.ರಸ್ತೆಯ ಕನ್ನಡ ಭವನದಲ್ಲಿರುವ ಅಕಾಡೆಮಿಗೆ ಜು.25 ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಅಕಾಡೆಮಿ ಕಾರ್ಯಕ್ಕೆ ಕಲಾ ಸಂಸ್ಥೆಗಳೂ ಸಹಭಾಗಿತ್ವ ಕೊಡಬಹುದಾಗಿದೆ.

ಕಲಾ ಸಂಘಟನೆಗಳು ಯಾವ ಕಲಾವಿದರ ನೆನಪಿನ ಕಾರ್ಯಕ್ರಮ ಮಾಡುತ್ತಾರೆ? ಅಂಥ ಸ್ಮರಣಾರ್ಹ ಸಾಧಕರ ಅವರ ವಿವರಗಳೇನು? ಹಿರಿಯರ ನೆನಪಿನಲ್ಲಿ ಯಾರೆಲ್ಲ ಪಾಲ್ಗೊಳ್ಳುತ್ತಾರೆ? ಎಂಬ ಮಾಹಿತಿಯನ್ನೂ ನೀಡಬೇಕಾಗಿದೆ. ಸ್ಮರಣೆ ಬಳಿಕ ಅವರ ನೆನಪಿನಲ್ಲಿ ತಾಳಮದ್ದಲೆ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಸಬೇಕಾಗಿದೆ.

ಯಾಕಾಗಿ ಬೇಕು?: ಯಕ್ಷಗಾನದ ಕಲೆಯ ಉಳಿವಿಗೆ ಹಿರಿಯರು ಪ್ರೀತಿಯಿಂದ ದುಡಿದಿದ್ದರಿಂದಲೇ ಇಂದು ಈ ಕಲೆ ಜೀವಂತವಾಗಿದೆ. ಹಿಂದೆಲ್ಲ ಬಣ್ಣದ ಪೆಟ್ಟಿಗೆ ಹೊತ್ತು, ಊರೂರು ಅಲೆದು ಪ್ರೇಕ್ಷಕರಲ್ಲಿ ಯಕ್ಷಗಾನದ ‘ಪ್ರೀತಿ’ ಬೆಳೆಸಿದವರ ಕೊಡುಗೆ ಸಣ್ಣದಲ್ಲ.

ಪೋಷಕ ಪಾತ್ರಧಾರಿಯಾಗಿ, ಚಂಡೆ, ಮದ್ದಲೆ ವಾದಕರಾಗಿ, ವೇಷದ ಪೆಟ್ಟಿಗೆ ನಿರ್ವಾಹಕರಾಗಿ ಅವರು ಮಾಡಿದ ಯಕ್ಷಗಾನ ಕಲಾ ಸೇವೆಯನ್ನು ನೆನಪಿಸಿಕೊಳ್ಳುವದು ಹಾಗೂ ಯಕ್ಷಗಾನ ಅಕಾಡೆಮಿ ಅಂಥವರ ಕೊಡುಗೆಯನ್ನು ಇಂದಿನ ತಲೆಮಾರಿಗೂ ತಿಳಿಸುವುದು ಜವಾಬ್ದಾರಿ ಕಾರ್ಯ ಎಂದೇ ಹೊಸ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದೆ.

ಎಲ್ಲೂ ದಾಖಲೆ ಆಗದ ಕಲಾವಿದರ ಹಿರಿಯ ನೆನಪು ಮಾಡಿಕೊಳ್ಳುವುದು ಅಗತ್ಯ, ಅನಿವಾರ್ಯ. ಅಂಥವರ ಕೊಡುಗೆ ಕಾರಣದಿಂದ ಯಕ್ಷಗಾನ ಉಳಿದಿದೆ, ಬೆಳೆದಿದೆ.
ಮಹಾಬಲೇಶ್ವರ ಇಟಗಿ,
ಸವ್ಯಸಾಚಿ ಕಲಾವಿದ

ಯಾವುದೇ ಪ್ರತಿಫಲದ ಆಸೆ ಇಲ್ಲದೇ ಕಲೆಯ ಮೇಲಿನ ಪ್ರೀತಿಯಿಂದ ಸೇವೆ ಸಲ್ಲಿಸಿ ಮರೆಯಾದವರ ನೆನಪಿನ ಕಾರ್ಯಕ್ರಮ. ಯಕ್ಷಗಾನದ ಭವ್ಯ ಭವನದ ನಿರ್ಮಾಣದಲ್ಲಿ ಇಟ್ಟಿಗೆಗಳಂತೆ ಕೆಲಸ ಮಾಡಿದವರು. ಅಂಥರವ ನೆನಪು ಅಕ್ಷರ ರೂಪದಲ್ಲಿ ದಾಖಲಾಗಬೇಕೆಂಬ ಅಪೇಕ್ಷೆ.
ಪ್ರೊ| ಎಂ.ಎ.ಹೆಗಡೆ,
ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.